ಅಪ್ಪು ಸಾವಿನ ಬಗ್ಗೆ ಅಂದೇ ಸೂಚನೆ ನೀಡಿದ್ರಾ ರಾಯರು..?
ಅಪ್ಪು ಸಾವಿನ ಬಗ್ಗೆ ಅಂದೇ ಸೂಚನೆ ನೀಡಿದ್ರಾ ರಾಯರು..? ಸದ್ಯ ಈ ಒಂದು ಪ್ರಶ್ನೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗುತ್ತಿದೆ. ಇದಕ್ಕೆ ಕಾರಣ ಪುನೀತ್ ರಾಯರ ಸನ್ನಿದಾನಕ್ಕೆ ಭೇಟಿ ನೀಡಿದ್ದ ವೇಳೆ ನಡೆದಿದ್ದ ಆ ಘಟನೆ..
ಮಂತ್ರಾಯಲ ರಾಯರ ಮಠದ ಜೊತೆ ಅವಿನಾಭಾವ ಸಂಬಂಧ ಹೊಂದಿರುವ ಪುನೀತ್, ರಾಯರ ಸನ್ನಿದಾನಕ್ಕೆ ಭೇಟಿ ನೀಡಿ ಎಲ್ಲರನ್ನುದ್ದೇಶಿಸಿ ” ನಾನು ಈ ಸಲ ಆರಾದನೆಗೆ ಬರುತ್ತೇನೆ ಎಂದು ಹೇಳಿದರು. ಈ ಮಾತು ಹೇಳುತ್ತಿದ್ದಂತೆ ರಾಯರ ಮೂರ್ತಿ ಮತ್ತು ವೀಣೆ ಸ್ವಲ್ಪ ಅಲುಗಾಡಿತ್ತು. ಆಗ ಅಲ್ಲಿದ್ದವರು ಅದನ್ನ ಸರಿಪಡಿಸಿದರು.
ಮುಂದಿನ ಬಾರಿ ಬರುತ್ತೇನೆ ಎಂದು ಅಪ್ಪು ಹೇಳುತ್ತಿದ್ದಂತೆ ರಾಯರ ಮೂರ್ತಿ ಮತ್ತು ವೀಣೆ ಅಲುಗಾಡಿದ್ದು, ಅಪ್ಪು ಸಾವಿನ ಬಗ್ಗೆ ರಾಯರು ನೀಡಿದ ಮುನ್ಸೂಚನೆ ಎಂಬ ಅಭಿಪ್ರಾಯವನ್ನು ಅಭಿಮಾನಿಗಳು ವ್ಯಕ್ತಪಡಿಸುತ್ತಿದ್ದಾರೆ.
ಇನ್ನು ಶುಕ್ರವಾರ ಹೃದಯಾಘಾತದಿಂದ ಪುನೀತ್ ರಾಜ ಕುಮಾರ್ ಕೊನೆಯುರೆಳೆದರು. ಅವರ ನಿಧನಕ್ಕೆ ಇಡೀ ಭಾರತೀಯ ಚಿತ್ರರಂಗವೇ ಕಂಬನಿ ಮಿಡಿದೆ. ಇಂದು ಬೆಳಗ್ಗೆ ಕಂಠೀರವ ಸ್ಟುಡಿಯೋದಲ್ಲಿ ಅಪ್ಪು ಅಂತ್ಯಕ್ರಿಯೆ ನೆರವೇರಿತು.