ಕಂಠೀರವ ಸ್ಟುಡಿಯೋ ಸುತ್ತ 3 ದಿನಗಳ ಕಾಲ ಸೆಕ್ಷನ್ 144 ಜಾರಿ : ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧ
ಕೋಟ್ಯಾನು ಕೋಟಿ ಕರುನಾಡಿಗರನ್ನ ಅಗಲಿದ “ವೀರಕನ್ನಡಿಗ” ಪುನೀತ್ ರಾಜ್ ಕುಮಾರ್ ಅವರ ಅಂತಿಮ ಸಂಸ್ಕಾರವನ್ನು ಈಡಿಗ ಸಂಪ್ರದಾಯದಂತೆ , ಸಕಲ ಸರ್ಕಾರಿ ಗೌರವಗಳೊಂದಿಗೆ ಇಂದು ಕಂಠೀರವ ಸ್ಟೇಡಿಯಮ್ ನಲ್ಲಿ ನೆರವೇರಿಸಲಾಗಿದೆ. ಹಾಲು-ತುಪ್ಪ ಕಾರ್ಯಕ್ರಮವನ್ನು 3 ದಿನಗಳ ನಂತರ ಮಂಗಳವಾರ ನಡೆಸಲು ರಾಜ್ ಕುಟುಂಬ ತಯಾರಿ ನಡೆಸುತ್ತಿದೆ. ಅಲ್ಲಿಯವರೆಗೆ ಕಂಠೀರವ ಸ್ಟುಡಿಯೋಗೆ ಸಾರ್ವಜನಿಕ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಅಲ್ಲದೇ ಕಂಠೀರವ ಸ್ಟೇಡಿಯಮ್ ನ ಸುತ್ತಲೂ ಕೂಡ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಮಂಜುನಾಥ್ ಅವರು ಕಂಠೀರವ ಸ್ಟುಡಿಯೋ ಸುತ್ತ 144 ಸೆಕ್ಷನ್ ವಿಧಿಸಲಾಗಿದೆ. ಮೂರು ದಿನಗಳ ಬಳಿಕ ಹಾಲು-ತುಪ್ಪ ಕಾರ್ಯ ಮುಗಿದ ಬಳಿಕ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದಿದ್ದಾರೆ. ಕಾರ್ಯ ಮುಗಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಘವೇಂದ್ರ ರಾಜ್ ಕುಮಾರ್ ಅವರು ಎಲ್ಲ ಅಭಿಮಾನಿಗಳೂ ಶಾಂತಿಯಿಂದ ವರ್ತಿಸಿ ಅಪ್ಪುವನ್ನು ಶಾಂತಿಯಿಂದ ಕಳಿಸಿಕೊಟ್ಟಿದ್ದಾರೆ ಅವರಿಗೆ ಸಾಷ್ಟಾಂಗ ನಮಸ್ಕಾರಗಳು ಎಂದು ಅಭಿಮಾನಿಗಳಿಗೆ ಕೈಮುಗಿದರು. ಅಲ್ಲದೇ ಅಪ್ಪು ನಮಗಿಂತಲೂ ಹೆಚ್ಚು ಅಪ್ಪ-ಅಮ್ಮನನ್ನು ಇಷ್ಟಪಡುತ್ತಿದ್ದ ಎನಿಸುತ್ತದೆ ಹಾಗಾಗಿ ಅವನು ನಮಗಿಂತ ಬೇಗ ಹೋಗಿಬಿಟ್ಟ ಎಂದು ಭಾವುಕರಾಗಿದ್ದಾರೆ.