‘ಯುವರತ್ನ’ ಬಳಿಕ ‘ಹೊಂಬಾಳೆ’ ಜೊತೆ ಮತ್ತೊಂದು ಹೊಸ ಸಿನಿಮಾ ಮಾಡ್ತಿದ್ದಾರೆ ಅಪ್ಪು..!
ಕೆಜಿಎಫ್ , ರಾಜಕುಮಾರ , ಯುವರತ್ನ ನಂತರ ಸೂಪರ್ ಹಿಟ್ ಸಿನಿಮಾಗಳನ್ನ ನೀಡಿರುವ ಹೊಂಬಾಲೆ ಫಿಲಮ್ಸ್ ಇನ್ನೂ ಅನೇಕ ಬಿಗ್ ಬಜೆಟ್ ಸಿನಿಮಾಗಳನ್ನ ನಿರ್ಮಾಣ ಮಾಡ್ತಿದೆ. ಈ ನಡುವೆ ಪುನೀತ್ ರಾಜ್ ಕುಮಾರ್ ಅವರ ಮತ್ತೊಂದು ಬಿಗ್ ಬಜೆಟ್ ಸಿನಿಮಾಗೆ ವಿಜಯ್ ಕಿರಗಂದೂರ್ ಅವರು ಬಂಡವಾಳ ಹೂಡಲು ಹೊರಟಿದ್ದಾರೆ.
ಹೌದು.. ಈಗಷ್ಟೇ ಪುನೀತ್ ರಾಜ್ಕುಮಾರ್ ಜೊತೆಗೆ ‘ಯುವರತ್ನ’ ಸಿನಿಮಾ ಮುಗಿಸಿ ಬಿಡುಗಡೆ ಮಾಡಿ ಯಶಸ್ಸಿನ ಖುಷಿಯಲ್ಲಿರುವ ಹೊಂಬಾಳ ಫಿಲಮ್ಸ್ ಮತ್ತೆ ಅಪ್ಪು ಫ್ಯಾನ್ಸ್ ಗೆ ಸರ್ಪ್ರೈಸ್ ಕೊಟ್ಟಿದೆ. ಪುನೀತ್ ರಾಜ್ ಕುಮಾರ್ ಜೊತೆಗೆ ಸಿನಿಮಾ ಮಾಡುತ್ತಿರುವ ವಿಚಾರವನ್ನ ಹೊಂಬಾಳೆ ಫಿಲಮ್ಸ್ ನ ಟ್ವಿಟ್ಟರ್ ಮೂಲಕ ಅಧಿಕೃತವಾಗಿ ಘೋಷಣೆ ಮಾಡಲಾಗಿದೆ.
ಅಂದ್ಹಾಗೆ ಸಿನಿಮಾ ಏನೋ ಅನೌನ್ಸ್ ಆಗಿದೆ ಆದ್ರೆ ಡೈರೆಕ್ಟರ್ ಯಾರೂ ಎಂಬ ಕುತೂಹಲವೂ ಸಹಜವಾಗಿಯೇ ಇದೆ. ಈ ಸಿನಿಮಾಗೆ ‘ಯೂ – ಟರ್ನ್’ , ‘ಲೂಸಿಯಾ’ ದಂತಹ ವಿಭಿನ್ನ ಹಾಗೂ ಸೂಪರ್ ಹಿಟ್ ಸಿನಿಮಾಗಳನ್ನ ನಿರ್ದೇಶಿಸಿ ಸೈ ಎನಿಸಿಕೊಂಡಿರುವ ಪವನ್ ಕುಮಾರ್ ಅವರು ಆಕ್ಷನ್ ಕಟ್ ಹೇಳ್ತಿದ್ದಾರೆ.
ಪುನೀತ್ ರಾಜ್ಕುಮಾರ್ ಹಾಗೂ ಪವನ್ ಕುಮಾರ್ ಸಿನಿಮಾಕ್ಕಾಗಿ ಒಂದಾಗುತ್ತಿದ್ದಾರೆ ಎಂಬ ಗಾಳಿ ಸುದ್ದಿ ಕೆಲವು ದಿನಗಳಿಂದ ಹರಿದಾಡುತ್ತಿತ್ತು. ಆದರೆ ಆ ಸಿನಿಮಾವನ್ನು ಹೊಂಬಾಳೆ ಫಿಲಮ್ಸ್ ನಿರ್ಮಾಣ ಮಾಡುತ್ತದೆ ಎಂಬುದನ್ನು ನಿರೀಕ್ಷಿಸಿರಲಿಲ್ಲ. ಇದು ಅಪ್ಪು ಫ್ಯಾನ್ಸ್ ಗೆ ಅನಿರೀಕ್ಷಿತ ಗಿಫ್ಟ್ ಎನ್ನಬಹುದು.
ಪುನೀತ್ ರಾಜ್ ಕುಮಾರ್ ಪ್ರಸ್ತುತ ‘ಜೇಮ್ಸ್’ ನಲ್ಲಿ ಬ್ಯುಸಿಯಾಗಿದ್ದಾರೆ. ಅದಾದ ಬಳಿಕ ದಿನಕರ್ ತೂಗುದೀಪ್ ನಿರ್ದೇಶನದ ಸಿನಿಮಾದಲ್ಲಿ ನಟಿಸಲಿದ್ದಾರೆ. ಬಳಿಕ ಪವನ್ ನಿರ್ದೇಶನದ ಸಿನಿಮಾದಲ್ಲಿ ನಟಿಸಲಿದ್ದಾರೆ.
ಕನ್ನಡ ಕಲಿಯುತ್ತೇನೆ… ಚುನಾವಣಾ ಪ್ರಚಾರದಲ್ಲಿ ಮಾತು ಕೊಟ್ಟ ಮಂಗ್ಲಿ..!
ತಮ್ಮ ಪಾತ್ರಕ್ಕಾಗಿ ಕಾರ್ಮಿಕನಾಗಿ ದುಡಿದು 100ರೂ ವೇತನ ಪಡೆದ ರಾಜ್ಕುಮಾರ್ ರಾವ್