ಹೀರೋ ಆಗಿ ಬದಲಾದ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ
ಗೋದಿಬಣ್ಣ ಸಾಧಾರಣ ಮೈಕಟ್ಟು ಅವನೇ ಶ್ರೀಮನ್ನಾರಾಯಣ ದಂತಹ ಹಲವು ಸದಭಿರುಚಿಯ ಚಿತ್ರಗಳನ್ನ ಕನ್ನಡಕ್ಕೆ ಕೊಟ್ಟಿರುವ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಹೀರೋ ಆಗಿ ಚಿತ್ರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ.
ಹಲವು ವರ್ಚಗಳಿಂದ ಹೀರೋ ಆಗಬೇಕು ಎಂದು ಕನಸು ಕಂಡಿದ್ದ ಪುಷ್ಕರ್ ಮಲ್ಲಿಕಾರ್ಜುನಯಯ್ಯ 2 ವರ್ಷಗಳ ತರಬೇತಿಯ ಬಳಿಕ ಹೀರೋ ಆಗಲು ಮುಂದಾಗಿದ್ದಾರೆ. ಹೆಸರಿಡದ ಚಿತ್ರದ ಶೂಟಿಂಗ್ ಫೆಬ್ರವರಿ ತಿಂಗಳಿಂದ ಪ್ರಾರಂಭವಾಗಲಿದೆ. ಹೀರೋ ಗಳಿಗೆ ದುಡ್ಡು ಹಾಕಿ ಸಿನಿಮಾಮಾಡುತ್ತಿದ್ದ ಪುಷ್ಕರ್ ಮಲ್ಲಿಕಾರ್ಜುನಯ್ಯ ಸ್ವತಃ ಹಿರೋ ಆಗಲು ಬಂಡವಾಳ ಹೂಡುತ್ತಿದ್ದಾರೆ. ನಟನೆಯ ಸೂಕ್ಷ್ಮತೆಯನ್ನ ಕಲಿಯಲು 2 ವರ್ಷಗಳಲ್ಲಿ 300 ಕಾರ್ಯಗಾರಗಳಿಗೆ ಹಾಜರಾಗಿದ್ದೇನೆ. ನಾನು ಈಗ ಆತ್ಮ ವಿಶ್ವಾಸ ಹೊಂದಿದ್ದೇನೆ ಎಂದಿದ್ದಾರೆ ಪುಷ್ಕರ್
ಬಾಲಿವುಡ್ ನಲ್ಲಿ ಕಪೂರ್ ಅಂಡ್ ಸನ್ಸ್ ಮತ್ತು ಭೂತ್ ಸಿನಿಮಾಗಳಲ್ಲಿ ಸಹಾಯ ನಿರ್ದೇಶಕನಾಗಿ ಅನುಭವ ಪಡೆದುಕೊಂಡಿರುವ ಆದಿತ್ಯ ಗುಣವಂತೆ ಈ ಚಿತ್ರಕ್ಕೆ ನಿರ್ದೇಶನ ಮಾಡಲಿದ್ದಾರೆ. ಇದು ಇವರ ಪ್ರಥಮ ಚಿತ್ರ. ಚಿತ್ರವನ್ನ ಎರಡು ಶೆಡ್ಯೂಲ್ ಗಳಲ್ಲಿ ಚಿತ್ರೀಕರಿಸಲು ಚಿತ್ರತಂಡ ರೆಡಿಯಾಗಿದೆ. ಕುದುರುಮುಖದಲ್ಲಿ 50% ಚಿತ್ರೀಕರಣ ನಡೆಯಲಿದೆ. ನಂತರ ಬೆಂಗಳೂರಿನಲ್ಲಿ ಇನ್ನುಳಿದ ಶೂಟಿಂಗ್ ನಡೆಯಲಿದೆ.