ಭಾರತದ ನಯಾಗರ ಎಂದು ಖ್ಯಾತಿ ಗಳಿಸಿರುವ ಕರ್ನಾಟಕ ಹಾಗೂ ತಮಿಳುನಾಡಿನ ಎರಡೂ ಗಡಿ ಹಂಚಿಕೊಂಡಿರುವ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಹೊಗೆನಕಲ್ ಜಲಪಾತದ ಹಿನ್ನೀರಿನಲ್ಲಿ ವಿಶೇವಾದ ತೆಪ್ಪದ ರೇಸ್ ನಡೆಸಲಾಯಿತು.
ಈ ರೇಸ್ ನ್ನು ಊಟುಮಲೈ ಎಂಬ ಗ್ರಾಮಸ್ಥರು ಗ್ರಾಮದ ಮಾರಿಯಮ್ಮನ ಹಬ್ಬದ ಹಿನ್ನೆಲೆಯಲ್ಲಿ ಆಯೋಜಿಸಿದ್ದರು. ಉಕ್ಕಿ ಹರಿಯುವ ಕಾವೇರಿಯಲ್ಲಿ ರೋಮಾಂಚಕ ರೇಸ್ ನಲ್ಲಿ ಹಲವರು ಭಾಗವಹಿಸಿದ್ದರು.
ಈ ರೇಸ್ ನಲ್ಲಿ ಸುಮಾರು 10 ತೆಪ್ಪಗಳು ಭಾಗವಹಿಸಿದ್ದವು. ಒಂದು ತೆಪ್ಪದಲ್ಲಿ ಇಬ್ಬರು ಕುಳಿತು 100 ಮೀ.ರ ಸಾಗಬೇಕು. ಮೊದಲು ಬಂದವರಿಗೆ ಚಿನ್ನದ ಪದಕ ನೀಡಲಾಯಿತು. ಈ ಸ್ಪರ್ಧೆಯಲ್ಲಿ ಮೊದಲ ಬಹುಮಾನವನ್ನು ಪೆರುಮಾಳ್- ಮಯಿಲ್, ಎರಡನೇ ಬಹುಮಾನವಾದ 2 ಗ್ರಾಂ ಚಿನ್ನವನ್ನು ಶ್ರೀನಿ- ಪೆರುಮಾಳ್ ಹಾಗೂ 3 ನೇ ಬಹುಮಾನವಾದ 8 ಸಾವಿರ ಹಣವನ್ನು ಸತೀಶ್- ಕರುಪ್ಪನ್ ಗೆದ್ದಿದ್ದಾರೆ.