ಟೀಮ್ ಇಂಡಿಯಾದ ಹೆಡ್ ಕೋಚ್ ಆಗಿ ರಾಹುಲ್ ದ್ರಾವಿಡ್ ನೇಮಕಗೊಂಡಿರುವುದು ಬಹುತೇಕ ಯುವ ಆಟಗಾರರಿಗೆ ಖುಷಿಯನ್ನು ತಂದಿದೆ. rahul-dravid saaksha tv
ಆದ್ರೆ ಬಿಸಿಸಿಐ ನ ಈ ನಿರ್ಧಾರ ಟೀಮ್ ಇಂಡಿಯಾದ ಹಾಲಿ ನಾಯಕ ವಿರಾಟ್ ಕೊಹ್ಲಿಗೆ ಸ್ವಲ್ಪನೂ ಇಷ್ಟವಿಲ್ಲ ಅನ್ಸುತ್ತೆ. ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಮುನ್ನ ನಡೆದಿದ್ದ ಸುದ್ದಿಗೋಷ್ಠಿಯಲ್ಲಿ ನೀಡಿರುವ ಹೇಳಿಕೆಯನ್ನು ಗಮನಿಸಿದಾಗ ವಿರಾಟ್ ಕೊಹ್ಲಿಗೆ ರಾಹುಲ್ ದ್ರಾವಿಡ್ ಹೆಡ್ ಕೋಚ್ ಆಗಿ ನೇಮಕಗೊಂಡಿರುವುದು ಖುಷಿಯನ್ನು ತಂದಿಲ್ಲ ಎಂಬುದು ಕೂಡ ಸ್ಪಷ್ಟವಾಗುತ್ತಿದೆ.
ಎದುರುಗಡೆ ಏನು ನಡೆಯುತ್ತಿದೆ ಎಂಬುದೇ ಗೊತ್ತಾಗುತ್ತಿಲ್ಲ. ಇದರ ಬಗ್ಗೆ ನನಗೆ ಯಾವುದೇ ಐಡಿಯಾ ಕೂಡ ಇಲ್ಲ. ಅಲ್ಲದೆ ಈ ಕುರಿತಂತೆ ಯಾವುದೇ ಚರ್ಚೆ ಸಹ ನಡೆದಿಲ್ಲ ಎಂದಷ್ಟೇ ವಿರಾಟ್ ಕೊಹ್ಲಿ ಹೇಳಿದ್ದಾರೆ.
ವಿರಾಟ್ ಕೊಹ್ಲಿಯ ಈ ಹೇಳಿಕೆಯನ್ನು ಗಮನಿಸಿದಾಗ ಟೀಮ್ ಇಂಡಿಯಾದ ಹೆಡ್ ಕೋಚ್ ಆಯ್ಕೆ ವಿಚಾರದಲ್ಲಿ ಬಿಸಿಸಿಐ ಟೀಮ್ ಇಂಡಿಯಾ ನಾಯಕನ ಅಭಿಪ್ರಾಯವನ್ನು ಪರಿಗಣಿಸಿಲ್ಲ ಎಂಬುದು ಸ್ಪಷ್ಟವಾಗಿದೆ.
ಬಿಸಿಸಿಐ ಏಕಾಏಕಿ ನಿರ್ಧಾರವನ್ನು ತೆಗೆದುಕೊಂಡಿದೆ. ಇದು ವಿರಾಟ್ ಕೊಹ್ಲಿಯ ಅಸಮಾಧಾನಕ್ಕೂ ಕಾರಣವಾಗಿರುತ್ತೆ. ಈ ಹಿಂದೆ ಕೂಡ ಹೆಡ್ ಕೋಚ್ ವಿಚಾರದಲ್ಲಿ ತಂಡದ ಹಿರಿಯ ಆಟಗಾರರ ಅಭಿಪ್ರಾಯಗಳನ್ನು ಪಡೆದುಕೊಳ್ಳಲಾಗುತ್ತಿತ್ತು. ಆದ್ರೆ ರಾಹುಲ್ ದ್ರಾವಿಡ್ ಆಯ್ಕೆ ವಿಚಾರದಲ್ಲಿ ವಿರಾಟ್ ಆಗ್ಲಿ, ಹಿರಿಯ ಆಟಗಾರರ ಅಭಿಪ್ರಾಯವನ್ನು ಬಿಸಿಸಿಐ ಪಡೆದುಕೊಂಡಿಲ್ಲ.
ಒಟ್ಟಿನಲ್ಲಿ ವಿರಾಟ್ ಕೊಹ್ಲಿಗೆ ರಾಹುಲ್ ದ್ರಾವಿಡ್ ಹೆಡ್ ಕೋಚ್ ಆಯ್ಕೆಯಾಗಿರೋದು ಖುಷಿಯನ್ನು ತಂದಿಲ್ಲ. ಈ ಹಿಂದೆ ಅನಿಲ್ ಕುಂಬ್ಳೆ ಜೊತೆ ಕೂಡ ವಿರಾಟ್ ಮುನಿಸಿಕೊಂಡಿದ್ದರು. ಹೀಗಾಗಿ ತಂಡಕ್ಕೆ ತೊಂದರೆಯಾಗಬಾರದು ಅನ್ನೋ ಕಾರಣಕ್ಕೆ ಅನಿಲ್ ಕುಂಬ್ಳೆ ಅವರು ಹೆಡ್ ಕೋಚ್ ಹುದ್ದೆಗೆ ರಾಜೀನಾಮೆ ನೀಡಿದ್ದರು. ಬಹುಶಃ ಈ ಕಾರಣದಿಂದಲೇ ರಾಹುಲ್ ದ್ರಾವಿಡ್ ಕೋಚ್ ಸ್ಥಾನ ಬೇಡ ಅಂತ ಹೇಳಿದ್ದರು.
ಸದ್ಯದ ಬೆಳವಣಿಗೆಗಳನ್ನು ಗಮನಿಸಿದಾಗ, ವಿರಾಟ್ ಕೊಹ್ಲಿ ವಿಶ್ವ ಕಪ್ ನಂತರ ನಾಯಕತ್ವದಿಂದ ಕೆಳಗಿಳಿಯುವ ನಿರ್ಧಾರದ ಹಿಂದೆ ಬಿಸಿಸಿಐನ ಪ್ರಭಾವವೂ ಇದೆ ಎಂಬುದು ಸ್ಪಷ್ಟವಾಗುತ್ತಿದೆ. ಏನೇ ಆಗ್ಲಿ, ಟೀಮ್ ಇಂಡಿಯಾ ಮಾತ್ರ ಒಡಕಿನ ಮನೆಯಾಗೋದು ಬೇಡ.. ಅಷ್ಟೇ ನಾವು ಹೇಳೋದು..!