ಆ ಹೆಣ್ಣಿನಿಂದ ಸ್ತ್ರೀ ಕುಲಕ್ಕೆ ಅಪಮಾನ : ಸಾಹುಕಾರ್ ಪರ ರೇಣುಕಾಚಾರ್ಯ ಬ್ಯಾಟ್
ಬೆಂಗಳೂರು : ರಮೇಶ್ ಜಾರಕಿಹೊಳಿ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದ ವಿಡಿಯೋದಲ್ಲಿರುವ ಮಹಿಳೆಯಿಂದ ಇಡೀ ಸ್ತ್ರೀ ಕುಲಕ್ಕೆ ಅಪಮಾನ ಆಗಿದೆ.
ಆ ವ್ಯಕ್ತಿಗೆ ಸಿಡಿ ಮಾಡಲು ಪ್ರಚೋದನೆ ನೀಡಿದವರು ಯಾರು..? ಆಕೆಯನ್ನ ಬಂಧಿಸಿ ಒಳಗಡೆ ಹಾಕಿ ರುಬ್ಬಿದ್ರೆ ಸತ್ಯಾಂಶ ಗೊತ್ತಾಗುತ್ತೆ ಅಂತಾ ಶಾಸಕ ರೇಣುಕಾಚಾರ್ಯ ಹೇಳಿದ್ದಾರೆ.
ರಮೇಶ್ ಜಾರಕಿಹೊಳಿ ಪ್ರಕರಣ ಸಂಬಂಧ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ವಿರುದ್ಧ ದೂರು ಸಲ್ಲಿಸಿರುವ ದಿನೇಶ್ ಕಲ್ಲಹಳ್ಳಿಯನ್ನ ಬಂಧಿಸುವಂತೆ ಸಿಎಂ ಬಳಿ ಮನವಿ ಮಾಡಿದ್ದೇನೆ.
ಇದು ಸಿಬಿಐಗೆ ನೀಡುವಂತಹ ಪ್ರಕರಣವಾಗಿದೆ. ದೂರು ಕೊಟ್ಟ ವ್ಯಕ್ತಿಗೂ ಮತ್ತು ಮಹಿಳೆಗೆ ಏನು ಸಂಬಂಧ ಎಂದು ಪ್ರಶ್ನಿಸಿದರು.
ಈ ಪ್ರಕರಣದ ಹಿಂದೆ ದುಡ್ಡು ಚೆಲ್ಲುತ್ತಿರೋರ ಬಗ್ಗೆ ತಿಳಿಯಬೇಕಿದೆ. ಆ ವ್ಯಕ್ತಿಗೆ ಸಿಡಿ ಮಾಡಲು ಪ್ರಚೋದನೆ ನೀಡಿದವರು ಯಾರು? ಬಂಧಿಸಿ ಒಳಗೆ ಹಾಕಿ ರುಬ್ಬಿದ್ರೆ ಸತ್ಯಾಂಶ ಹೊರ ಬರಬೇಕಿದೆ ಎಂದು ಹೇಳಿದ್ರು.
ಇನ್ನು ವಿಡಿಯೋದಲ್ಲಿರುವ ಸಂಭಾಷಣೆಯನ್ನ ಗಮನಿಸಿದ್ರೆ ಇದು ಕಿರುಕುಳ ಅಥವಾ ರೇಪ್ ರೀತಿ ಕಾಣಿಸುತ್ತಿಲ್ಲ. ಇದು ಅವರಿಬ್ಬರ ಖಾಸಗಿ ಬದುಕು. ಆದ್ರೆ ಇದನ್ನನ ಚಿತ್ರೀಕರಿಸಿ ಬ್ಲಾಕ್ ಮೇಲ್ ಮಾಡಲಾಗಿದೆ ಎಂದು ರೇಣುಕಾಚಾರ್ಯ ಆರೋಪಿಸಿದರು.
ಇನ್ನು ವಿಡಿಯೋದಲ್ಲಿ ಮಹಿಳೆಯನ್ನ ನೋಡಿದ್ರೆ ಬೇಕೆಂದೇ ಉದ್ದೇಶಪೂರ್ವಕವಾಗಿ ವಿಡಿಯೋ ಮಾಡಿರುವುದಾಗು ಗೊತ್ತಾಗುತ್ತಿದೆ. ನಮ್ಮನ್ನ ಹತ್ತವಳು ತಾಯಿ, ಭಾರತ ಮತ್ತು ಭೂಮಿಯನ್ನ ಅಮ್ಮನಿಗೆ ಹೋಲಿಸುತ್ತೇವೆ. ಆದ್ರೆ ಈ ಮಹಿಳೆ ಇಡೀ ಸ್ತ್ರೀ ಕುಲವನ್ನ ಅವಮಾನಿಸಿದ್ದಾಳೆ ಎಂದು ರೇಣುಕಾಚಾರ್ಯ ಕಿಡಿಕಾರಿದ್ದಾರೆ.