ರಮೇಶ್ ಜಾರಕಿಹೊಳಿ ದೈವಭಕ್ತ, ಸಮಾಜಕ್ಕೆ ಅಂಜುವ ವ್ಯಕ್ತಿ : ಯೋಗೇಶ್ವರ್
ಮೈಸೂರು : ರಮೇಶ್ ಜಾರಕಿಹೊಳಿ ದೈವಭಕ್ತ, ಸಮಾಜಕ್ಕೆ ಅಂಜುವ ವ್ಯಕ್ತಿ. ಸಿಡಿ ವಿಚಾರವಾಗಿ ನಾನು ರಮೇಶ್ ಜಾರಕಿಹೊಳಿ ಅವರ ಬೆಂಬಲಕ್ಕಿದ್ದೇನೆ ಎಂದು ಸಚಿವ ಸಿ.ಪಿ.ಯೋಗೇಶ್ವರ್ ತಿಳಿಸಿದ್ದಾರೆ.
ರಮೇಶ್ ಜಾರಕಿಹೊಳಿ ಕಾಮಕಾಂಡ ವಿಡಿಯೋ ಸಂಬಂಧಪಟ್ಟಂತೆ ಸದ್ಯ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಸಂಬಂಧ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ನಾನು ಅವರ ಬೆಂಬಲಕ್ಕಿದ್ದೇನೆ.
ಇದೊಂದು ರಾಜಕೀಯ ಪಿತೂರಿಯಾಗಿದೆ. ಅವರ ದೈವಭಕ್ತರು, ಸಮಾಜಕ್ಕೆ ಅಂಜುವ ವ್ಯಕ್ತಿ. ಹೀಗಾಗಿ ಅವರು ಈ ರೀತಿ ತಪ್ಪು ಮಾಡಿದ್ದಾರೆ ಅಂತ ಅನ್ನಿಸುತ್ತಿಲ್ಲ.
ಇಡೀ ಪ್ರಕರಣ ಮೇಲ್ನೋಟಕ್ಕೆ ರಾಜಕೀಯ ಪಿತೂರಿ ಅನ್ನಿಸುತ್ತಿದೆ ಅಂತಾ ರಮೇಶ್ ಜಾರಕಿಹೊಳಿ ಪರ ಬ್ಯಾಟ್ ಬೀಸಿದ್ದಾರೆ.
ಇನ್ನು ಇದು ಫೇಕ್ ವಿಡಿಯೋ ಅನ್ನೋ ರಮೇಶ್ ಜಾರಕಿಹೊಳಿ ಅವರ ಹೇಳಿಕೆ ಬಗ್ಗೆ ಮಾತನಾಡಿ, ಅದು ಫೇಕ್ ಅಥವಾ ಜೆನ್ಯೂನ್ ಅಂತಾ ನಾನು ಹೇಲು ಹೋಗುವುದಿಲ್ಲ. ಆದ್ರೆ ಇದೊಂದು ದುರುದ್ದೇಶದಿಂದ ಮಾಡಿರೋದು ಎಂದು ಪುನರುಚ್ಚರಿಸಿದರು.