ಕೊರೋನಾ ಸಮಯದಲ್ಲಿ ಬೆಳ್ಳುಳ್ಳಿ ರಸ ಕುಡಿಯುವುದರಿಂದ ಸಿಗುವ ಪ್ರಯೋಜನಗಳು
ಕೊರೋನಾದ ಎರಡನೇ ಅಲೆಯು ದೇಶದಲ್ಲಿ ತೀವ್ರಗತಿಯಲ್ಲಿ ಹರಡುತ್ತಿದ್ದು, ಇದು ಮೊದಲ ಅಲೆಗಿಂತ ಹೆಚ್ಚು ಅಪಾಯಕಾರಿಯಾಗಿದೆ. ಅದೇ ಸಮಯದಲ್ಲಿ, ಅನೇಕ ಪ್ರದೇಶಗಳಲ್ಲಿ ಸಂಪೂರ್ಣ ಲಾಕ್ಡೌನ್ ಅನ್ನು ವಿಧಿಸಲಾಗಿದೆ. ಸೋಪ್ ಮತ್ತು ಹ್ಯಾಂಡ್ವಾಶ್ನಿಂದ ಪದೇ ಪದೇ ಕೈ ತೊಳೆಯುವುದು, ಮುಖ್ಯವಾಗಿ ಮಾಸ್ಕ್ ಗಳನ್ನು ಧರಿಸುವುದು ಮತ್ತು ಸಾಮಾಜಿಕ ದೂರವನ್ನು ಕಾಪಾಡಿಕೊಳ್ಳುವುದು ಈ ಸಮಯದಲ್ಲಿ ಅತ್ಯಂತ ಅವಶ್ಯಕವಾಗಿದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದರಿಂದ ಸೋಂಕಿನಿಂದ ರಕ್ಷಿಸಿಕೊಳ್ಳಲು ನೆರವಾಗುತ್ತದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಾಗಾಗಿ ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ವಿವಿಧ ರೀತಿಯ ಆರೋಗ್ಯಕರ ಆಹಾರವನ್ನು ಜನರು ತೆಗೆದುಕೊಳ್ಳುವುದು ಅವಶ್ಯಕ.
ಅಂದಹಾಗೆ, ಕೊರೋನಾ ಸಮಯದಲ್ಲಿ ಸೇವಿಸಬೇಕಾದ ಕೆಲವು ಆಹಾರಗಳಿವೆ. ಅವುಗಳಲ್ಲಿ ಒಂದು ಬೆಳ್ಳುಳ್ಳಿ. ಕೊರೋನಾ ಅವಧಿಯಲ್ಲಿ ಜನರು ಬೆಳ್ಳುಳ್ಳಿಯನ್ನು ಹೆಚ್ಚು ಬಳಸಲಾರಂಭಿಸಿದ್ದಾರೆ. ಬೆಳ್ಳುಳ್ಳಿ ತಿನ್ನುವುದರಿಂದ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಆದರೆ ಬೆಳ್ಳುಳ್ಳಿ ರಸವನ್ನು ಕುಡಿಯುವುದರಿಂದ ದೇಹಕ್ಕೆ ಅನೇಕ ಪ್ರಯೋಜನಗಳಿವೆ ಬೆಳ್ಳುಳ್ಳಿ ರಸವನ್ನು ಕುಡಿಯುವುದರಿಂದ ಸಿಗುವ ಪ್ರಯೋಜನಗಳ ಬಗ್ಗೆ ತಿಳಿಯೋಣ.
ಬೆಳ್ಳುಳ್ಳಿ ರಸವನ್ನು ಸ್ವಲ್ಪ ದಾಳಿಂಬೆ ರಸದೊಂದಿಗೆ ಬೆರೆಸಿ, ಇದನ್ನು ಕುಡಿಯುವುದರಿಂದ ಕೆಮ್ಮು ನಿವಾರಣೆಯಾಗುತ್ತದೆ ಮತ್ತು ತ್ವರಿತವಾಗಿ ಗುಣವಾಗುತ್ತದೆ.
ಬೆಳ್ಳುಳ್ಳಿ ರಸವನ್ನು ಜೇನುತುಪ್ಪ ಮತ್ತು ನೀರಿನೊಂದಿಗೆ ಬೆರೆಸಿದರೆ ಆಸ್ತಮಾ ರೋಗಿಗಳಿಗೆ ಸಾಕಷ್ಟು ಪ್ರಯೋಜನವಾಗುತ್ತದೆ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಬೆಳ್ಳುಳ್ಳಿ ರಸವನ್ನು ಉಗುರು ಬೆಚ್ಚಗಿನ ನೀರಿಗೆ ಬೆರೆಸಿ ಗಾರ್ಗ್ಲಿಂಗ್ ಮಾಡುವುದರಿಂದ ಗಂಟಲು ನೋವಿಗೆ ಉತ್ತಮ ಪರಿಹಾರ ಸಿಗುತ್ತದೆ.
ತಲೆಹೊಟ್ಟು ಮತ್ತು ಕೂದಲು ಉದುರುವಿಕೆಯ ಸಮಸ್ಯೆ ಇರುವ ಜನರು ಬೆಳ್ಳುಳ್ಳಿ ರಸವನ್ನು ಬಳಸಬಹುದು. ಇದಕ್ಕಾಗಿ, ಕೂದಲು ಮತ್ತು ನೆತ್ತಿಯ ಮೇಲೆ ಬೆಳ್ಳುಳ್ಳಿ ರಸವನ್ನು ಹಚ್ಚಿ ಸ್ವಲ್ಪ ಹೊತ್ತು ಬಿಟ್ಟು ನಂತರ ಶಾಂಪೂ ಬಳಸಿ ಕೂದಲನ್ನು ಸ್ವಚ್ಛಗೊಳಿಸಿ.
ಸ್ತ್ರೀ ಹಾರ್ಮೋನುಗಳ ಅಡಚಣೆಯಿಂದ ಉಂಟಾಗುವ ಕಾಯಿಲೆಗಳಿಗೆ ಬೆಳ್ಳುಳ್ಳಿ ರಸ ಬಹಳ ಸಹಾಯಕವಾಗಿದೆ ಎಂದು ಸಾಬೀತಾಗಿದೆ.
ಬೆಳ್ಳುಳ್ಳಿ ರಸವು ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹ ಸಹಾಯ ಮಾಡುತ್ತದೆ. ಇದರ ಬಳಕೆಯು ಹೃದಯ ಸಂಬಂಧಿತ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
ಗಮನಿಸಿ :
ಬೆಳ್ಳುಳ್ಳಿಯನ್ನು ಚರ್ಮದ ಮೇಲೆ ಹೆಚ್ಚು ಹೊತ್ತು ಬಿಡಬಾರದು ಏಕೆಂದರೆ ಅದು ಹಾನಿಯನ್ನುಂಟುಮಾಡುತ್ತದೆ. ಇದಲ್ಲದೆ, ತುಂಬಾ ಹಳೆಯ ಬೆಳ್ಳುಳ್ಳಿಯನ್ನು ಸಹ ಬಳಸಬಾರದು. ಬೆಳ್ಳುಳ್ಳಿಯು ಉಷ್ಣ ಗುಣವುಳ್ಳದ್ದಾಗಿದ್ದು, ಹೆಚ್ಚು ಬೆಳ್ಳುಳ್ಳಿಯನ್ನು ಒಟ್ಟಿಗೆ ಸೇವಿಸಬೇಡಿ.
ಸೂಚನೆ : ಇಲ್ಲಿರುವ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ನೀಡಲಾಗಿದೆ. ಸೇವನೆಯ ಮೊದಲು ವೈದ್ಯರ ಸಲಹೆ ತೆಗೆದುಕೊಳ್ಳಿ.
ಎಚ್ಚರಿಕೆ – ದೇಶಾದ್ಯಂತ ಕೊರೋನಾ ಸೋಂಕು ತೀವ್ರಗತಿಯಲ್ಲಿ ಹರಡುತ್ತಿದೆ. ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ. ನಮ್ಮ ಮತ್ತು ನಮ್ಮ ಕುಟುಂಬದ ಆರೋಗ್ಯ ನಮ್ಮ ಕೈಯಲ್ಲಿದೆ. ಇದು ಸಾಕ್ಷಾಟಿವಿ ಕಳಕಳಿ
ಏನಿದು ಇಸ್ರೇಲ್-ಪ್ಯಾಲೆಸ್ಟೈನ್ ಸಂಘರ್ಷ? ಮೂರು ಧರ್ಮಗಳಿಗೂ ಜೆರುಸಲೆಮ್ ಏಕೆ ಮುಖ್ಯ?#Saakshatv #IsraelPalestine #conflict https://t.co/KDaBD7dBWo
— Saaksha TV (@SaakshaTv) May 16, 2021
ಶೀತ, ನೆಗಡಿ, ವೈರಲ್ ಜ್ವರಕ್ಕೆ ಪರಿಣಾಮಕಾರಿ ಕಷಾಯಗಳು#Saakshatv #healthtips https://t.co/F9y0QEyaAW
— Saaksha TV (@SaakshaTv) May 12, 2021
ಕಾಳು ಮೆಣಸು ಸಾರು (ಬಾಣಂತಿ ಸಾರು )#Saakshatv #cooking #recipe https://t.co/43m1leMELu
— Saaksha TV (@SaakshaTv) May 9, 2021
ಕೊರೋನಾ ಸಮಯದಲ್ಲಿ ವಾಕ್ ಅಥವಾ ಜಾಗಿಂಗ್ ಸುರಕ್ಷಿತವೇ? ಆರೋಗ್ಯ ತಜ್ಞರ ಅಭಿಪ್ರಾಯವೇನು?#Saakshatvhealthtips #joggingduringcorona https://t.co/BAcJwIPdU7
— Saaksha TV (@SaakshaTv) May 7, 2021
#Saakshatv #healthtips #garlicjuice