ನಮ್ಮ ದೇಹಕ್ಕೆ ಅಗತ್ಯವಾದ ಮಸಾಲೆ ಪದಾರ್ಥಗಳು ಮತ್ತು ಅವುಗಳ ಪ್ರಯೋಜನಗಳ ಬಗ್ಗೆ ಗೊತ್ತಾ ?
ನಾವು ಪ್ರತಿದಿನ ಮಸಾಲೆ ಪದಾರ್ಥಗಳನ್ನು ಬಳಸುತ್ತೇವೆ. ಅದೆಷ್ಟೋ ಕಾಯಿಲೆಗಳನ್ನು ಗುಣಪಡಿಸಲು ಈ ಮಸಾಲೆಗಳನ್ನು ಬಳಸಬಹುದು ಮತ್ತು ನಮ್ಮ ಆಯುರ್ವೇದದಲ್ಲಿ ಇದನ್ನು ಬಳಸಲಾಗುತ್ತದೆ. ಇದು ನಮ್ಮ ಭಾರತದ ಅತ್ಯಂತ ಹಳೆಯ ಔಷಧವಾಗಿದೆ. ಆದ್ದರಿಂದ ಆರೋಗ್ಯಕ್ಕೆ ಅಗತ್ಯವಾದ ಮಸಾಲೆಗಳ ಬಗ್ಗೆ ತಿಳಿದುಕೊಳ್ಳೋಣ.
ಉಪ್ಪು ನಮಗೆ ಬಹಳ ಮುಖ್ಯ. ಏಕೆಂದರೆ ಅದು ಇಲ್ಲದೆ ನಮ್ಮ ದೇಹದ ಅವಶ್ಯಕತೆಗಳನ್ನು ಪೂರೈಸಲು ಸಾಧ್ಯವಾಗುವುದಿಲ್ಲ. ಸಮುದ್ರ ಉಪ್ಪು, ಕಲ್ಲು ಉಪ್ಪು, ಹುಡಿ ಉಪ್ಪು, ಕಪ್ಪು ಉಪ್ಪು, ಮುಂತಾದ ಅನೇಕ ವಿಧದ ಉಪ್ಪುಗಳಿವೆ. ಉಪ್ಪಿನಲ್ಲಿ ಅಯೋಡಿನ್ ಕಂಡುಬರುತ್ತದೆ, ಅದು ನಮ್ಮ ದೇಹದಲ್ಲಿರುವುದಿಲ್ಲ. ಆದ್ದರಿಂದ ಉಪ್ಪು ತೆಗೆದುಕೊಳ್ಳುವುದು ಬಹಳ ಮುಖ್ಯ. ಉಪ್ಪು ಹೊಟ್ಟೆಯನ್ನು ಬಲಪಡಿಸುತ್ತದೆ. ಉಪ್ಪು ಜೀರ್ಣಕ್ರಿಯೆಯನ್ನು ಸರಿಯಾಗಿ ಇಡುತ್ತದೆ. ಉಪ್ಪು ಕೂದಲಿಗೆ ಕೂಡ ಪ್ರಯೋಜನಕಾರಿ.
ತೂಕ ಹೆಚ್ಚಾದಾಗ ಅದನ್ನು ಕಡಿಮೆ ಮಾಡಲು ಮೆಣಸಿನ ಹುಡಿ ನೆರವಾಗುತ್ತದೆ. ಒಂದು ಚಮಚ ಮೆಣಸಿನ ಹುಡಿಯ ಬಳಕೆಯು ಯಾವುದೇ ಹಾನಿಯನ್ನು ಉಂಟುಮಾಡುವುದಿಲ್ಲ.
ಗರಂ ಮಸಾಲ ಭಾರತದಲ್ಲಿ ಮಾತ್ರ ಕಂಡುಬರುತ್ತದೆ. 10 ಕ್ಕೂ ಹೆಚ್ಚು ಮಸಾಲೆಗಳನ್ನು ಬೆರೆಸಿ ಗರಂ ಮಸಾಲವನ್ನು ತಯಾರಿಸಲಾಗುತ್ತದೆ. ಗರಂ ಮಸಾಲವು ಸಣ್ಣ ಪುಟ್ಟ ಕಾಯಿಲೆಗಳಾದ ಹೊಟ್ಟೆ ಭಾರ, ಹಸಿವು ಕಡಿಮೆಯಾಗುವುದು, ಕರುಳಿನಲ್ಲಿ ಹುಳುಗಳು, ಹೊಟ್ಟೆ ನೋವು ಇತ್ಯಾದಿಗಳಿಗೆ ಪರಿಣಾಮಕಾರಿ. ವಾಸ್ತವವಾಗಿ, ಮಸಾಲೆಗಳನ್ನು ನೀರಿನಿಂದ ಹರಡುವ ರೋಗಗಳನ್ನು ತಡೆಗಟ್ಟಲು ಬಳಸಲಾಗುತ್ತದೆ.
ಜೀರಿಗೆಯು ಮಧುಮೇಹ ರೋಗಿಗಳಿಗೆ ಸಹ ಪ್ರಯೋಜನಕಾರಿಯಾಗಿದೆ. ಜೀರಿಗೆಯು ಸಾಕಷ್ಟು ಪ್ರಯೋಜನಕಾರಿಯಾಗಿದ್ದು, ಅದನ್ನು ಸಾಧ್ಯವಾದಷ್ಟು ಬಳಸಿ ಮತ್ತು ನಿಮ್ಮ ದೇಹವನ್ನು ಉತ್ತಮ ಸ್ಥಿತಿಯಲ್ಲಿ ಇರಿಸಿಕೊಳ್ಳಿ.
ಕೆಂಪು ಮೆಣಸಿನಕಾಯಿಯನ್ನು ಆಹಾರದ ರುಚಿಯನ್ನು ಹೆಚ್ಚಿಸಲು ಬಳಸಲಾಗುತ್ತದೆ. ಕೆಂಪು ಮೆಣಸಿನಕಾಯಿಯಲ್ಲಿ ಹಲವು ಬಗೆ ಕಂಡುಬರುತ್ತದೆ. ಕೆಂಪು ಮೆಣಸಿನಕಾಯಿ ಜೀವಸತ್ವಗಳಿಂದ ತುಂಬಿರುತ್ತದೆ. ಆದ್ದರಿಂದ ಇದು ನಮ್ಮ ದೇಹವನ್ನು ಸರಿಯಾಗಿ ಇಡಲು ಹೆಚ್ಚು ಪ್ರಯೋಜನಕಾರಿಯಾಗಿದೆ. ಕೆಂಪು ಮೆಣಸಿನಕಾಯಿ ಬಳಕೆಯು ಕ್ಯಾನ್ಸರ್ ನಂತಹ ಕಾಯಿಲೆಗಳನ್ನು ದೂರವಿರಿಸುತ್ತದೆ.
ಅರಿಶಿನವನ್ನು ಆಹಾರದ ರುಚಿಯನ್ನು ಹೆಚ್ಚಿಸಲು ಮತ್ತು ಅನೇಕ ರೋಗಗಳಿಗೆ ಔಷಧಿಯಾಗಿ ಸಹ ಬಳಸಲಾಗುತ್ತದೆ. ಅರಿಶಿನವು ಆಯುರ್ವೇದ ಸಸ್ಯವಾಗಿದ್ದು, ಇದನ್ನು ಪ್ರಾಚೀನ ಕಾಲದಿಂದಲೂ ಬಳಸಲಾಗುತ್ತದೆ ಮತ್ತು ಇದನ್ನು ನಮ್ಮ ಭಾರತದಲ್ಲಿ ಹೆಚ್ಚು ಬಳಸಲಾಗುತ್ತದೆ.
ಅರಿಶಿನವು ಗಾಯಗಳನ್ನು ತ್ವರಿತವಾಗಿ ಗುಣಪಡಿಸುತ್ತದೆ; ಇದು ಕೊಲೆಸ್ಟ್ರಾಲ್ ಅನ್ನು ಸಹ ಕಡಿಮೆ ಮಾಡುತ್ತದೆ; ಜೀರ್ಣಕ್ರಿಯೆ ಸರಿಯಾಗಿ ಕಾರ್ಯಚರಿಸಲು ನೆರವಾಗುತ್ತದೆ.
ಆರೋಗ್ಯಕರ ಶಕ್ತಿಯುತ ಲಿವರ್/ಶ್ವಾಸಕೋಶಕ್ಕಾಗಿ ಮನೆಮದ್ದುಗಳು#Saakshatv #healthtips #Homeremedies https://t.co/N9Q4oC4hwR
— Saaksha TV (@SaakshaTv) April 20, 2021
ದರ್ಶನ್ ಮೇಲೆ ನಾನು ಬಹಳ ಕ್ರಶ್ ಹೊಂದಿದ್ದೇನೆ – ನಟಿ ಗಾಯತ್ರಿ ಐಯ್ಯರ್#Darshan #VinodhPrabhakar #gayathri #sandalwood https://t.co/ovvgICjjcW
— Saaksha TV (@SaakshaTv) April 20, 2021
ಬಿರುಬಿಸಿಲಿಗೆ ಚಾಕಲೇಟ್ ಮಿಲ್ಕ್ ಶೇಕ್#Saakshatv #cookingrecipe #chocolate #milkshake https://t.co/JCAQoyp8GI
— Saaksha TV (@SaakshaTv) April 20, 2021
ಕೋವಿಡ್ -19 ಎರಡನೇ ಅಲೆ ಪ್ರಕರಣಗಳು ಭಾರತದಲ್ಲಿ ಎಷ್ಟು ಸಮಯದ ಬಳಿಕ ಇಳಿಮುಖ ಕಾಣಲಿದೆ ?#covid19 #secondwave https://t.co/ViqnbxhzTN
— Saaksha TV (@SaakshaTv) April 20, 2021
#Saakshatv #healthtips #beneficialspices