ಕಿರುತೆರೆ ‘ಗೌರಿಪುರದ ಗಯ್ಯಾಳಿಗಳ’ಲ್ಲಿ ಸ್ಯಾಂಡಲ್ ವುಡ್ ಕಾಮಿಡಿ ಕಿಂಗ್ ಸಾಧು ಕೋಕಿಲ..!
ಸ್ಯಾಂಡಲ್ ವುಡ್ ನ ಕಾಮಿಡಿ ಕಿಂಗ್ ಸಾಧು ಕೋಕಿಲ ಸಕಲ ಕಲಾ ವಲ್ಲಭ. ತನ್ನ ಕಾಮಿಡಿ ಶೈಲಿಯಿಂದ ಜನರನ್ನ ಹೊಟ್ಟೆ ಹುಣ್ಣಾಗಿಸುವಷ್ಟು ನಕ್ಕಿ ನಲಿಸುವ ಸಾಧು ಕೋಕಿಲ ನಟನೆಯ ಜೊತೆಗೆ ಈಗಾಗಲೇ ಸಂಗೀತ ನಿರ್ದೇಶಕರಾಗಿ, ಸಿನಿಮಾ ನಿರ್ದೇಶಕನಾಗಿಯೂ ಗುರುತಿಸಿಕೊಂಡಿದ್ದಾರೆ. ಇದೀಗ ಸಾಧು ಕೋಕಿಲಾ ಧಾರಾವಾಹಿ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಹೌದು ಸಾದುಕೋಕಿಲ ಕಿರುತೆರೆ ಲೋಕದಲ್ಲಿ ರಂಜಿಸಲಿದ್ದಾರೆ. ಆದ್ರೆ ತಮ್ಮ ನಟನೆಯ ಮೂಲಕವಲ್ಲ. ಬದಲಾಗಿದೆ ಸಾಧು ಮಹಾರಾಜ್ ಧಾರಾವಾಹಿ ನಿರ್ಮಾಣದ ಮೂಲಕ ಕಿರುತೆರೆಯಲ್ಲಿ ಕಮಾಲ್ ಮಾಡಲು ಸಜ್ಜಾಗಿದ್ದಾರೆ. ಹೌದು, ನಟ ಸಾಧು ಕೋಕಿಲ ಅವರ ನಿರ್ಮಾಣದಲ್ಲಿ ಹೊಸ ಧಾರಾವಾಹಿ ಮೂಡಿಬರುತ್ತಿದೆ.
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಕಚ್ಚಾ ತೈಲ ಬೆಲೆ
ಈ ಧಾರವಾಹಿಗೆ ‘ಗೌರಿಪುರದ ಗಯ್ಯಾಳಿಗಳು’ ಎಂದು ಟೈಟಲ್ ಇಡಲಾಗಿದೆ. ಈ ಧಾರಾವಾಹಿ ಮಾರ್ಚ್ 15ರಿಂದ ಪ್ರತಿದಿನ ಸಂಜೆ 6.30ಕ್ಕೆ ಪ್ರಸಾರವಾಗಲಿದೆ. ಈ ಧಾರಾವಾಹಿಯ ಪ್ರೋಮೋ ಈಗಾಗಲೇ ಬಿಡುಗಡೆಯಾಗಿದ್ದು, ಪ್ರೇಕ್ಷಕರ ಕುತೂಹಲ ಹೆಚ್ಚಿಸಿದೆ.
ಮತ್ತೊಂದು ವಿಶೇಷತೆ ಎಂದ್ರೆ ಗೌರಿಪುರದ ಗಯ್ಯಾಳಿಗಳು ಧಾರಾವಾಹಿಗೆ ಬಂಡವಾಳ ಹೂಡುವ ಜೊತೆಗೆ ಸ್ವತಃ ಸಾಧು ಕೋಕಲ ಅವರೇ ಈ ಧಾರಾವಾಹಿಯ ಶೀರ್ಷಿಕೆ ಗೀತೆಗೆ ಧ್ವನಿ ನೀಡಿದ್ದಾರೆ.