ಇಬ್ಬರು ಅಂಧರ ಬಾಳಿಗೆ ಬೆಳಕಾಗಿ ಬಾರದಲೋಕಕ್ಕೆ ಸಂಚಾರಿ ವಿಜಯ್ SANCHARI VIJAY
ಬೆಂಗಳೂರು : ಇಬ್ಬರು ಅಂಧರ ಬಾಳಿಗೆ ಬೆಳಕಾಗಿ ಇಹಲೋಕದ ಸಂಚಾರ ಮುಗಿಸಿ ಬಾರದ ಲೋಕಕ್ಕೆ ನಟ ಸಂಚಾರಿ ವಿಜಯ್ ಪಯಣಿಸಿದ್ದಾರೆ.
ಅಪಘಾತದಲ್ಲಿ ಮೃತಪಟ್ಟ ಸಂಚಾರಿ ವಿಜಯ್ ಅವರ ಅಂಗಾಂಗಗಳನ್ನು ದಾನ ಮಾಡಲಾಗಿದೆ.
ಅವರ ಕಿಡ್ನಿಯನ್ನು ಎಂ.ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಮಹಿಳೆಯೊಬ್ಬರಿಗೆ ಟ್ರಾನ್ಸ್ ಪ್ಲಾಂಟೇಷನ್ ಮಾಡಲಾಗಿದೆ.
ಅವರ ಕಣ್ಣುಗಳನ್ನು ಬೆಂಗಳೂರಿನ ಮಿಂಟೋ ಆಸ್ಪತ್ರೆಯಲ್ಲಿ ಇಬ್ಬರಿಗೆ ಕಣ್ಣುಗಳ ಜೋಡಣೆ ಮಾಡಲಾಗುತ್ತಿದೆ.
ಈಗಾಗಲೇ ಒಬ್ಬರಿಗೆ ಕಣ್ಣು ಜೋಡಣೆ ಕಾರ್ಯ ಮುಕ್ತಾಯವಾಗಿದ್ದು, ಮತ್ತೊಬ್ಬರಿಗೆ ಜೋಡಣೆ ಕಾರ್ಯ ನಡೀತಿದೆ.
ಇನ್ನು ಅವರ ಅಂತ್ಯ ಸಂಸ್ಕಾರ ತಮ್ಮ ಹುಟ್ಟೂರಿನಲ್ಲಿ ನಡೆಯಲಿದೆ. ಇದಕ್ಕಾಗಿ ಸಕಲ ಸಿದ್ಧತೆಗಳು ನಡೆಯುತ್ತಿವೆ.