ಸ್ಯಾಂಡಲ್ ವುಡ್ ನ ಖ್ಯಾತ ನಿರ್ದೇಶಕನ ವಿರುದ್ಧ ವಂಚನೆ ಪ್ರಕರಣ ದಾಖಲು..!
ಇತ್ತೇಚೆಗೆ ಸ್ಯಾಂಡಲ್ ವುಡ್ ನಟ ನಟಿಯರ ಮೇಲೆ ಸಂಕಷ್ಟಗಳು ಹೆಚ್ಚಾಗುತ್ತಿವೆ.. ಕಳೆದ 1 ವಾರದಿಂದ ಚಾಲೆಂಜಿಂಗ್ ಸ್ಟಾರ್ ದರ್ಶನ್ , ನಿರ್ಮಾಪಕ ಉಮಾಪತಿ ಸುದ್ದಿಯಲ್ಲಿದ್ದಾರೆ.. 25 ಕೋಟಿ ವಂಚನೆ ಪ್ರಕರಣ, ಜೊತೆಗೆ ಹೋಟೆಲ್ ಸಪ್ಲೈರ್ ಮೇಲೆ ದರ್ಶನ್ ರಿಂದ ಹಲ್ಲೆ ಸುದ್ದಿ ವ್ಯಾಪಕವಾಗಿ ಚರ್ಚೆಯಾಗ್ತಿದೆ.. ಈ ನಡುವೆ ಸ್ಯಾಂಡಲ್ ವುಡ್ ನ ಖ್ಯಾತ ನಿರ್ದೇಶಕ ಲವ್ ಗುರು ಖ್ಯಾತಿಯ ಪ್ರಶಾಂತ್ ರಾಜ್ ವಿರುದ್ಧ ವಂಚನೆ ಆರೋಪ ಕೇಳಿಬಂದಿದೆ.. ಇವರು ಈಗಾಗಲೇ ದಳಪತಿ, ಆರೆಂಜ್, ಗಾನ ಬಜಾನಾ, ಜೂಮ್ ನಂತಹ ಸಿನಿಮಾಗಳನ್ನ ಮಾಡಿದ್ದಾರೆ.
ರಾಮನಗರ ಅಕ್ಕೂರು ಪೊಲೀಸ್ ಠಾಣೆಯಲ್ಲಿ ನಿರ್ದೇಶಕ ಪ್ರಶಾಂತ್ ರಾಜ್ ವಿರುದ್ಧ ದೂರು ದಾಖಲಿಸಿದ್ದಾರೆ. ನಿರ್ದೇಶಕ ಪ್ರಶಾಂತ್ ರಾಜ್, ಶಬರೀಶ್ ಎಂಬ ಯುವನಟನಿಂದ ಕೆಲಸ ಮಾಡಿಸಿಕೊಂಡು ಹಣ ಕೊಡದೆ ಕಾರನ್ನು ನೀಡಿದ್ದರು. ಆದರೀಗ ಆ ಕಾರನ್ನು ವಾಪಸ್ ಕೊಡುವಂತೆ ಕಿರುಕುಳ ನೀಡುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಲವ್ ಗುರು – 2 ಸಿನಿಮಾ ಮಾಡೋ ಪ್ಲಾನ್ ಮಾಡಿದ್ದು, ಪ್ಯಾನ್ ಇಂಡಿಯಾ ಸಿನಿಮಾ ಮಾಡುತ್ತಿದ್ದೇನೆ, ಈ ಚಿತ್ರದಲ್ಲಿ ಅವಕಾಶ ಕೊಡ್ತೀನಿ ಅಂತ ಪ್ರಶಾಂತ್ ರಾಜ್ ಹೇಳಿದ್ದರು ಎಂದು ಆರೋಪಿಸಿದ್ದಾರೆ.
ಪ್ರಶಾಂತ್ ರಾಜ್, ಶಬರೀಶ್ ಗೆ 45 ಲಕ್ಷ ರೂ. ಕೊಡಬೇಕಿತ್ತು. ಆದರೆ 20 ಲಕ್ಷ ನೀಡಿ ಇನ್ನ ಉಳಿದ ಹಣಕ್ಕೆ ತನ್ನ ಬಳಿ ಇದ್ದ ಕಾರನ್ನು ನೀಡಿದ್ದರು. ಕಾರನ್ನು ಕೊಟ್ಟಿರುವುದಲ್ಲದೇ ಇದು ಅದೃಷ್ಟದ ಕಾರು, ಈ ಕಾರಿನಲ್ಲಿ ಯಶ್, ರಾಧಿಕಾ, ಗಣೇಶ್ ಕುಳಿತಿರುವ ಕಾರು. ಲಕ್ಷ್ಮೀ ಕಾರು, ಈ ತೆಗೆದುಕೊಳ್ಳಿ ಅದೃಷ್ಟಬದಲಾಗುತ್ತೆ ಎಂದು ಶಬರೀಶ್ಗೆ ಪ್ರಶಾಂತ್ ರಾಜ್ ನಂಬಿಸಿದ್ದರು ಎಂದು ಆರೋಪ ಮಾಡಿದ್ದಾರೆ.
ಆದರೀಗ ಆ ಅದೃಷ್ಟದ ಕಾರನ್ನು ವಾಪಸ್ ಕೊಡುವಂತೆ ಪ್ರಶಾಂತ್ ರಾಜ್ ಧಮ್ಕಿ ಹಾಕುತ್ತಿದ್ದಾರೆ ಎಂದು ಪ್ರಶಾಂತ್ ರಾಜ್ ಮತ್ತು ಸಹೋದರ ನವೀನ್ ರಾಜ್ ಮೇಲೆ ದೂರು ನೀಡಿದ್ದಾರೆ. ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಕೊನೆಯದಾಗಿ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ಆರೆಂಜ್ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಸದ್ಯ ಮತ್ತೆ ಗಣೇಶ್ ಜೊತೆ ಕೆಲಸ ಮಾಡುತ್ತಿದ್ದು, ಪ್ರಿ ಪ್ರೊಡಕ್ಷನ್ ಕೆಲಸದಲ್ಲಿ ನಿರತರಾಗಿದ್ದಾರೆ.