ADVERTISEMENT
Saturday, January 24, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ರಾಜ್ಯ

ಸಿಡಿದ ಸತೀಶ್ ಹೊಸ ಆಟ ಡಿಕೆಗೆ ಡಿಚ್ಚಿ.. ಸಿಗುತ್ತಾ ಕುರ್ಚಿ..? ಸೈಲೆಂಟ್ ಅಲ್ಲ ವೈಲೆಂಟ್ ಸಾಹುಕಾರ್

Satish Jarkiholi asks party high command to appoint new KPCC president as DKS’s term ended six months ago

Shwetha by Shwetha
January 16, 2025
in ರಾಜ್ಯ, Newsbeat, Politics, State, ರಾಜಕೀಯ
Share on FacebookShare on TwitterShare on WhatsappShare on Telegram

ಸತೀಶ್ ಜಾರಕಿಹೊಳಿ ಮತ್ತು ಡಿ.ಕೆ. ಶಿವಕುಮಾರ್ ನಡುವೆ ನಡೆಯುತ್ತಿರುವ ರಾಜಕೀಯ ಕದನವು ಇದೀಗ ಕಾಂಗ್ರೆಸ್ ಪಕ್ಷದ ಒಳಗೇ ದೊಡ್ಡ ರಾಜಕೀಯ ಬಿರುಗಾಳಿ ಎಬ್ಬಿಸಿದೆ. ಇದಕ್ಕೆಲ್ಲ ತಳಹದಿಯಾಗಿ 2023ರ ವಿಧಾನಸಭಾ ಚುನಾವಣೆಯ ಫಲಿತಾಂಶಗಳು, ಕಾಂಗ್ರೆಸ್ ಪಕ್ಷದ ಗೆಲುವು, ಮತ್ತು ನಂತರದ ಸರ್ಕಾರ ರಚನೆಗೆ ಸಂಬಂಧಿಸಿದ ತೀರ್ಮಾನಗಳು ಕಾರ್ಯನಿರ್ವಹಿಸಿವೆ.

ಅದು 2023… ಮೇ 18.. ಜಿದ್ದಾಜಿದ್ದಿನ ಕರ್ನಾಟಕ ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟವಾಗಿತ್ತು.. ಕಾಂಗ್ರೆಸ್ ಪಕ್ಷ ಇತಿಹಾಸದ ಗೆಲುವು ಸಾಧಿಸಿ ಮತ ಯುದ್ಧ ಗೆದ್ದಿತ್ತು.. ಸೋತು ಸೋತು ಸುಣ್ಣವಾಗಿದ್ದ ಕಾಂಗ್ರೆಸ್ ಗೆ ಕರ್ನಾಟಕ ಗೆಲುವು ಬೂಸ್ಟ್ ಕೊಟ್ಟಿತ್ತು.. ಆದ್ರೆ ಪಕ್ಷ ಅಧಿಕಾರಕ್ಕೆ ಬಂದು ಸಿಎಂ ಯಾರು ಅನ್ನೋ ಪ್ರಶ್ನೆಗೆ ದಿಲ್ಲಿಯಲ್ಲಿ ದೊಡ್ಡ ನಾಟಕವೇ ನಡೀತು.. ತುಟಿ ಬಿಚ್ಚದೆ ಸಿದ್ದರಾಮಯ್ಯ ದಾಳ ಉರುಳುಸ್ತಾ ಇದ್ರು.. ಇತ್ತ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಣ್ಣೀರಾಕಿ ಕೂಲಿ ಕೇಳ್ತಾ ಇದ್ರು.. ನಾನು ಅಧ್ಯಕ್ಷ ನನ್ನ ನಾಯಕತ್ವ ಅನ್ನೋ ಮಾತು ಪದೇ ಪದೇ ಕೇಳಿ ಬರ್ತಾ ಇತ್ತು.. ಆದ್ರೆ ಡಿಕೆ ಎದುರು ಇದ್ದದ್ದು ಕರ್ನಾಟಕದ ಅಹಿಂದ ಚಾಂಪಿಯನ್ ಸಿದ್ದರಾಮಯ್ಯ.. ಸಿದ್ದಣ್ಣನ ಗತ್ತು ತಾಕತ್ತು ಏನು ಅಂತಾ ಡಿಕೆ ಹಾದಿಯಾಗಿ ಎಲ್ಲಾ ಕಾಂಗ್ರೆಸ್ ನಾಯಕರಿಗೆ ಗೊತ್ತಿತ್ತು..
ಮತ್ತೊಂದು ಕಡೆ ಕಾಂಗ್ರೆಸ್ ಹೈ ಕಮಾಂಡ್ ಗೆ ಯಾವುದೇ ಗೊಂದಲ ಇಲ್ದೆ ಸಮಸ್ಯೆ ಬಗೆಹರಿಸೋ ಆತುರ.. ಹೈಕಮಾಂಡ್ ಮೊದಲಿಗೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಎಂಬ ರಾಜಕೀಯ ಫಾರ್ಮುಲಾವನ್ನು ರಚಿಸಿ ರಾಜ್ಯದಲ್ಲಿ ಸಮತೋಲನ ಕಾಯ್ದುಕೊಳ್ಳಲು ಪ್ರಯತ್ನಿಸಿತು… ಈ ಧರ್ಮ ಸಂಕಷ್ಟದಲ್ಲಿ ಹೈ ಕಮಾಂಡ್ ನಾಯಕರು ಹೆಣೆದ ಸೂತ್ರವೇ ಸಿದ್ದರಾಮಯ್ಯ ಸಿಎಂ, ಡಿಕೆ ಡಿಸಿಎಂ ಪ್ಲಸ್ ಕೆಪಿಸಿಸಿ ಅಧ್ಯಕ್ಷ ಹುದ್ದೆ..

Related posts

ಸರ್ಕಾರ VS ರಾಜ್ಯಪಾಲರು: ಭಾಷಣ ವಿಷಯದಲ್ಲಿ ತಾರಕಕ್ಕೇರಿದ ಸಂಘರ್ಷ

ಸರ್ಕಾರ VS ರಾಜ್ಯಪಾಲರು: ಭಾಷಣ ವಿಷಯದಲ್ಲಿ ತಾರಕಕ್ಕೇರಿದ ಸಂಘರ್ಷ

January 24, 2026
ಟ್ರಂಪ್ ಕೋಪಕ್ಕೆ ಗುರಿಯಾದ ಕೆನಡಾ: ಶಾಂತಿ ಮಂಡಳಿ ಆಹ್ವಾನ ವಾಪಸ್

ಟ್ರಂಪ್ ಕೋಪಕ್ಕೆ ಗುರಿಯಾದ ಕೆನಡಾ: ಶಾಂತಿ ಮಂಡಳಿ ಆಹ್ವಾನ ವಾಪಸ್

January 24, 2026

ಮೇ 18 ನೇ ತಾರೀಕು.. ರಾಹುಲ್ ಗಾಂಧಿ ಮುಂದೆ ಮಂಥನ ನಡೀತು.. ಅದಾದ ಬಳಿಕ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಸುದ್ದಿಗೋಷ್ಠಿ ನಡೆಸಿದ್ರು.. ಈ ವೇಳೆ ನಮ್ಮಲ್ಲಿ ಗೊಂದಲ ಇಲ್ಲ.. ಸಿದ್ದರಾಮಯ್ಯ ಸಿಎಂ, ಡಿ.ಕೆ. ಡಿಸಿಎಂ ಮತ್ತು ಮುಂದಿನ ಲೋಕಸಭಾ ಚುನಾವಣೆವರೆಗೂ ಅವ್ರೆ ಕೆಪಿಸಿಸಿ ಕ್ಯಾಪ್ತಾನ್ ಅಂದ್ರು.. ಅಲ್ಲಿಗೆ ಸರ್ಕಾರದಲ್ಲಿ ನಂಬರ್ 2 ಸ್ಥಾನ.. ಪಕ್ಷದಲ್ಲಿ ನಂಬರ್ 1 ಸ್ಥಾನಕ್ಕೆ ಡಿಕೆ ತೃಪ್ತಿ ಆದ್ರು..

ಪಂಚ ಗ್ಯಾರಂಟಿ ಸದ್ದಿನೊಂದಿಗೆ ಲೋಕಸಭಾ ಚುನಾವಣೆಗೆ ಹೋದ ಕಾಂಗ್ರೆಸ್ ಗೆ ನಿರಾಸೆ ಆಯ್ತು.. ಅಂದುಕೊಂಡಷ್ಟು ಸೀಟು ಕೈಗೆ ಬರ್ಲಿಲ್ಲ.. ಇಲ್ಲಿವರೆಗೂ ಒಂದಿಷ್ಟು ಗೊಂದಲದ ನಡುವೆ ಎಲ್ಲವೂ ಚೆನ್ನಾಗಿತ್ತು.. ಆಗಾಗ ಹೆಚ್ಚುವರಿ ಡಿಸಿಎಂ ಮಾತು ಬಂದ್ರೂ ಹೆಚ್ಚು ಸದ್ದು ಮಾಡಲಿಲ್ಲ.. ಜೊತೆಗೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಮಾತು ಬಂದ್ರೂ, ಹೈಕಮಾಂಡ್ ಸೊಪ್ಪಾಕಿಲ್ಲ, ಆದ್ರೆ ಈಗ ಸೀನ್ ಬದಲಾಗಿದೆ.. ಸಿಎಂ ಕುರ್ಚಿ ಕಾಳಗದ ನಡುವೆ ಕೆಪಿಸಿಸಿ ಕ್ಯಾಪ್ತನ್ಸಿ ಫೈಟ್ ಜೋರಾಗಿದೆ.. ಇದಕ್ಕೆ ಕಾರಣ ಸೈಲೆಂಟ್ ಮ್ಯಾನ್ ಸತೀಶ್ ಜಾರಕಿಹೊಳಿ..

ಹೌದು.. ಕಾಂಗ್ರೆಸ್‌ನಲ್ಲಿ ಪಟ್ಟಕ್ಕಾಗಿ ನಡೆಯುತ್ತಿರುವ ಫೈಟ್‌ ಈಗ ಹೊಸ ತಿರುವು ಪಡೆದುಕೊಂಡಿದೆ. ಇಷ್ಟು ದಿನ ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆಶಿ ನಡೆವೆ ನಡೆಯುತ್ತಿದ್ದ ಕುರ್ಚಿ ಕದನ.. ಈಗ ಸತೀಶ್‌ ಜಾರಕಿಹೊಳಿ ಹಾಗೂ ಡಿಕೆ ಶಿವಕುಮಾರ್‌ ಕಡೆ ತಿರುಗಿದೆ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಆಗಲೇಬೇಕು ಎಂದು ಸಾಹುಕಾರ್‌ ಪಟ್ಟು ಹಿಡಿದು ಕುಳಿತಿದ್ದಾರೆ. ಇಷ್ಟು ದಿನ ಬೂದಿ ಮುಚ್ಚಿದ ಕೆಂಡದಂತೆ ಇದ್ದ ಇವರಿಬ್ಬರ ಜಗಳ ಈಗ ಸ್ಫೋಟಗೊಂಡಿದೆ. ಇವರಿಬ್ಬರ ಕಾದಾಟ ಈಗ ಕಾಂಗ್ರೆಸ್‌ ಪಾಳೆಯದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ.. ಇಷ್ಟು ದಿನ ತಾನಾಯ್ತು ತಮ್ಮ ಪಾಡಾಯ್ತು ಅಂತ ಇದ್ದ ಸೈಲೆಂಟ್ ಸತೀಶ್‌ ಜಾರಕಿಹೊಳಿ ವೈಲೆಂಟ್‌ ಆಗಿದ್ದಾರೆ.. ಸಿಟಿ ರವಿ ಪ್ರಕರಣದಲ್ಲಿ ಯಾವಾಗ ಡಿಕೆಶಿ ಬೆಳಗಾವಿ ರಾಜಕಾರಣದಲ್ಲಿ ಹಸ್ತಕ್ಷೇಪ ಮಾಡಿದ್ರೋ ನೋಡಿ ಅಲ್ಲಿಂದ ಸಾಹುಕಾರ್‌ ಯುದ್ಧವನ್ನು ಘೋಷಿಸಿ ಬಿಟ್ಟಿದ್ದಾರೆ..

ಬಹಿರಂಗವಾಗಿ ಡಿಕೆಶಿ ಅವರ ಅಧಿಕಾರಕ್ಕೆ ಸವಾಲು ನೀಡಲು ಸತೀಶ್ ಹೈಕಮಾಂಡ್ ಮುಂದೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯ ಪ್ರಸ್ತಾಪವನ್ನು ಬಿಗಿಯಾಗಿ ಮುಂದಿಟ್ಟಿದ್ದಾರೆ. ಪಕ್ಷದಲ್ಲಿ ದಕ್ಷತೆ ಮತ್ತು ಪ್ರಭಾವ ಹೊಂದಿರುವ ಹೊಸ ನಾಯಕನ ಅಗತ್ಯವನ್ನು ಮುಂದಿಟ್ಟಿದ್ದಾರೆ.. ಡಿಕೆ ಶಿವಕುಮಾರ್‌ ಬದಲಾವಣೆ ಆಗಲೇಬೇಕು ಅಂತ ಪಟ್ಟು ಹಿಡಿದು ಕುಳಿತಿದ್ದಾರೆ..

ಅಂದಹಾಗೆ ರಾಜ್ಯ ಕಾಂಗ್ರೆಸ್‌ನಲ್ಲಿ ಭುಗಿಲೆದ್ದಿದ್ದ ಅಸಮಾಧಾನವನ್ನು ತಣಿಸಲು ಸುರ್ಜೇವಾಲಾ ರಾಜ್ಯಕ್ಕೆ ಬಂದಿದ್ದರು, ಸರಣಿ ಸಭೆ ಮಾಡಿ ಶಾಸಕರು, ಸಚಿವರಿಗೆ ಕಿವಿ ಮಾತು ಹೇಳಿದ್ದರು.. ಪಕ್ಷ ತಾಯಿ ಇದ್ದಂತೆ.. ಸರ್ಕಾರ ಮಗು ಇದ್ದಂತೆ ಅಂತಾ ಶಿಸ್ತಿನ ಪಾಠ ಮಾಡಿ ಎಲ್ಲರಿಗೂ ವಾರ್ನ್ ಮಾಡಿದ್ರು.. ಆದ್ರೆ ಅದೇಲ್ಲ ಎಚ್ಚರಿಕೆ ಸಭೆಗೆ ಮಾತ್ರ ಸೀಮಿತವಾದಂತೆ ಇದೆ.. ಸುರ್ಜೇವಾಲಾ ಎಚ್ಚರಿಕೆಗೂ ಸತೀಶ್‌ ಜಾರಕಿಹೊಳಿ ಡೋಂಟ್‌ ಕೇರ್‌ ಅಂದಿದ್ದಾರೆ..

ನಮ್ಗೆ ಹೊಸ ಕೆಪಿಸಿಸಿ ಅಧ್ಯಕ್ಷರು ಬೇಕು, ಕೆಪಿಸಿಸಿ ಅಧ್ಯಕ್ಷರ ಆಯ್ಕೆಗೆ ಶಾಸಕರ ಅಭಿಪ್ರಾಯ ಆಲಿಸಿ, ಅಧ್ಯಕ್ಷರ ಬದಲಾವಣೆ ಬಗ್ಗೆ ಶಾಸಕರ ಅಭಿಪ್ರಾಯ ಸಂಗ್ರಹ ಆಗಬೇಕು, ಅಭಿಪ್ರಾಯ ಆಲಿಸಿ ಹೈಕಮಾಂಡ್‌ ತೀರ್ಮಾನಿಸಬೇಕು ಅಂತಾ ಬಿಗಿ ಪಟ್ಟು ಹಿಡಿದ್ದಾರೆ..

ಅಲ್ಲದೆ ಸುರ್ಜೇವಾಲರನ್ನು ಸತೀಶ್‌ ಭೇಟಿಯಾಗಿದ್ದಾರೆ. ಬಳಿಕ ಮಾಧ್ಯಮದ ಮುಂದೆ ಮಾತನಾಡಿದ ಅವರು, ಆದಷ್ಟು ಬೇಗ ಹೊಸ ಅಧ್ಯಕ್ಷರ ನೇಮಕ ಆಗಬೇಕು ಎಂದು ಹೇಳಿದ್ದೇನೆ. ಸದ್ಯ ಡಿಕೆ ಶಿವಕಮಾರ್ ಅವರು ಅಧ್ಯಕ್ಷರಾಗಿದ್ದು, ಇವರನ್ನೇ ಮುಂದುವರಿಸುವುದಾದರೆ ಅದನ್ನು ಸ್ಪಷ್ಟಪಡಿಸಿ ಅಂತ ಹೇಳಿದ್ದೇನೆ. ನಮಗೆ ಪೂರ್ಣಪ್ರಮಾಣದ ಅಧ್ಯಕ್ಷರು ಬೇಕು. ಮತ ಸೆಳೆಯುವವರನ್ನು ಹಾಗೂ ವರ್ಚಸ್ಸು ಇರುವವರನ್ನು ಅಧ್ಯಕ್ಷರನ್ನಾಗಿ ಮಾಡಿ ಅಂತ ಹೇಳಿದ್ದೇನೆ. ಪಕ್ಷದ ಸಂಘಟನೆಯ ದೃಷ್ಟಿಯಿಂದ 2023 ರಲ್ಲಿ ಇದ್ದ ವೇಗ ಕುಂಠಿತವಾಗಿದೆ. ಲೋಕಸಭೆ ಚುನಾವಣೆ ಆದಮೇಲೆ ಅಧ್ಯಕ್ಷರನ್ನು ಬದಲಾವಣೆ ಮಾಡ್ತೀವಿ ಎಂಬುದು ಎಐಸಿಸಿ ನೋಟ್ ಇದೆ. ಕೆಸಿ ವೇಣುಗೋಪಾಲ ಅವರೇ ಬರೆದ ನೋಟ್ ಇದೆ. ಲೋಕಸಭೆ ಚುನಾವಣೆ ಮುಗಿದು ಆರು ತಿಂಗಳ ಮೇಲಾಯಿತು. ಅದನ್ನು ಜಾರಿಗೆ ಅನುಷ್ಟಾನಕ್ಕೆ ತರಬೇಕಲ್ವಾ? ಎಂದು ಸತೀಶ್ ಜಾರಕಿಹೊಳಿ ಪ್ರಶ್ನಿಸಿದರು.

ಅಲ್ಲಿಗೆ ಬೆಳಗಾವಿ ಸಾಹುಕಾರ್ ರ ಟಾರ್ಗೆಟ್ ಸ್ಪಷ್ಟ.. ಅದು ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಮಾಡ್ಬೇಕು.. ಅಲ್ಲಿದ್ರಲ್ಲಿ ಅವ್ರೇ ಕೂತ್ಕೋಬೇಕು..

ತಮ್ಮ ಗುರಿ ಬಗ್ಗೆ ಸ್ಪಷ್ಟತೆ ಹೊಂದಿರುವ ಸತೀಶ್ ಜಾರಕಿಹೊಳಿ, ತಿಂಗಳಾಂತ್ಯಕ್ಕೆ ದೆಹಲಿಗೆ ತೆರಳಲಿದ್ದಾರೆ. ಜನವರಿ 27 ಅಥವಾ 28ರಂದು ದೆಹಲಿಗೆ ಹೈಕಮಾಂಡ್ ನಾಯಕರ ಭೇಟಿ ಮಾಡಿ ತಮ್ಮ ಸ್ಪಷ್ಟ ಅಭಿಪ್ರಾಯ ತಿಳಿಸಲಿದ್ದಾರೆ. ಅಲ್ಲಿಗೆ ಶತಾಯಗತಾಯ ಕೆಪಿಸಿಸಿ ಹುದ್ದೆ ಪಡಿಯಲೇಬೇಕು ಅಂತಾ ಸಾಹುಕಾರ್ ಪಣ ತೊಟ್ಟಿದ್ದಾರೆ.. ಹಾಗಾದ್ರೆ ಸತೀಶ್ ಜಾರಕಿಹೊಳಿ ಗುರಿ ಕೇವಲ ಕೆಪಿಸಿಸಿ ಸ್ಥಾನ ಮಾತ್ರಾನಾ..? ಅಧ್ಯಕ್ಷ ಹುದ್ದೆಗೆ ಸತೀಶ್ ಫೈಟ್ ನಡಿಸ್ತಿರೋದು ಯಾಕೆ.. ಅವರ ಲೆಕ್ಕಾಚಾರ ಏನು..? ಅಂತಾ ಗೊತ್ತಾಗಬೇಕಾದರೆ, ಸತೀಶ್ ಜಾರಕಿಹೊಳಿ ಮಹತ್ವಾಕಾಂಕ್ಷೆ ಬಗ್ಗೆ ನೀವು ತಿಳಿದುಕೊಳ್ಳಬೇಕು.. ಅದೇನು ಅಂತೀರಾ ಅದುವೇ.. ಕರ್ನಾಟಕ ಸಿಎಂ ಕುರ್ಚಿ… ಸತೀಶ್ ಜಾರಕಿಹೊಳಿ ಎಂಬ ಹೆಸರಿನ ನಾನು ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕರಿಸುತ್ತೇನೆ.. ಅಂದ್ರೆ ರಾಜ್ಯದ ಸಿಎಂ ಆಗೋದು ಅವರ ಪರಮೋಚ್ಚ ಕನಸು..

ಆಗಾದ್ರೆ ಸತೀಶ್ ಜಾರಕಿಹೊಳಿ ಈಗ್ಲೇ ಸಿಎಂ ಸ್ಥಾನಕ್ಕೆ ಪೈಪೋಟಿ ಕೊಡ್ಬೊದಲ್ವಾ ಕೆಪಿಸಿಸಿ ಕುರ್ಚಿ ಯಾಕೆ ಅಂದ್ರೆ ಈಗ ಸಿಎಂ ಸ್ಥಾನದಲ್ಲಿ ಇರೋದು ಅವರ ಪ್ರೀತಿಯ ಗುರು ಸಿದ್ದಣ್ಣ.. ಸಿದ್ದಣ್ಣ ಸಿಎಂ ಆಗಿ ಇರೋರೆಗೂ ಸತೀಶ್ ಸಿಎಂ ಕುರ್ಚಿಯತ್ತ ಕಣ್ಣೆತ್ತಿ ಸಹ ನೋಡಲ್ಲ.. ಇದೆ ಕಾರಣಕ್ಕೆ ಸತೀಶ್ ಜಾರಕಿಹೊಳಿ ಆಗಾಗ ನಾನು ಈಗ ಫೈಟ್ ಮಾಡಲ್ಲ, 2028ಕ್ಕೆ ಫೈಟ್ ಮಾಡುತ್ತೇನೆ ಅಂತ ಹೇಳ್ತಾನೆ ಇರ್ತಾರೆ.. ಅಲ್ಲದೆ ಮೊನ್ನೆ ಶಿಗ್ಗಾಂವಿ ಉಪಚುನಾವಣೆಯಲ್ಲೂ ತನ್ನ ಶಕ್ತಿ ಏನು ಅಂತಾ ತೋರಿಸಿದ್ದರು, ಅಲ್ಪಸಂಖ್ಯಾತರನ್ನ ಸೆಳೆಯುವಲ್ಲಿ ಸಕ್ಸಸ್ ಆಗಿದ್ದರು. ಈಗ ಹಿಂದುಳಿದವರನ್ನ ಸೆಳೆಯುವ ಕೆಲಸವನ್ನೂ ಮಾಡುತ್ತಿದ್ದಾರೆ. ಈ ಮೂಲಕ ಭವಿಷ್ಯದ ಅಹಿಂದ ಚಾಂಪಿಯನ್ ಆಗಬಹುದು ಎನ್ನುವ ಲೆಕ್ಕಾಚಾರವೂ ಇದೆ.

ಕೊನೆ ಎರಡ್ಮೂರು ವರ್ಷವಾದರೂ ಸಿಎಂ ಆಗಬೇಕೆಂದು ಡಿಕೆ ಶಿವಕುಮಾರ್ ಕಸರತ್ತು ನಡೆಸಿದ್ದಾರೆ. ಆದ್ರೆ, ಇದಕ್ಕೆ ಅಹಿಂದ ನಾಯಕರು ವಿರೋಧಿಸುತ್ತಿದ್ದಾರೆ. ಈಗ ಸದ್ಯಕ್ಕೆ ಅಂತರೂ ಸಿಎಂ ಸ್ಥಾನ ಸಿಗುವುದಿಲ್ಲ ಎಂದು ಅರಿತ ಸತೀಶ್ ಜಾರಕಿಹೊಳಿ, 2028ರ ಮೇಲೆ ಕಣ್ಣಿಟ್ಟಿದ್ದಾರೆ. 2028ಕ್ಕೆ ಸಿಎಂ ಆಗುತ್ತೇನೆ ಎಂದು ಸ್ವತಃ ಅವರೇ ಹೇಳಿಕೊಂಡಿದ್ದಾರೆ. ಹೀಗಾಗಿ ಸತೀಶ್ ಜಾರಕಿಹೊಳಿ ಮೊದಲು ಕೆಪಿಸಿಸಿ ಅಧ್ಯಕ್ಷರಾಗಿ ಇಮೇಜ್ ಹೆಚ್ಚಿಸಿಕೊಳ್ಳುವ ಮೂಲಕ ಎಲ್ಲಾ ಸಮುದಾಯದ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಲೆಕ್ಕಾಚಾರದಲ್ಲಿದ್ದಾರೆ. ಇದರಿಂದ ಮೊದಲಿಗೆ ಸತೀಶ್ ಜಾರಕಿಹೊಳಿ ಅವರ ಟಾರ್ಗೆಟ್ ಕೆಪಿಸಿಸಿ ಅಧ್ಯಕ್ಷರಾಗುವುದು.

ShareTweetSendShare
Join us on:

Related Posts

ಸರ್ಕಾರ VS ರಾಜ್ಯಪಾಲರು: ಭಾಷಣ ವಿಷಯದಲ್ಲಿ ತಾರಕಕ್ಕೇರಿದ ಸಂಘರ್ಷ

ಸರ್ಕಾರ VS ರಾಜ್ಯಪಾಲರು: ಭಾಷಣ ವಿಷಯದಲ್ಲಿ ತಾರಕಕ್ಕೇರಿದ ಸಂಘರ್ಷ

by Shwetha
January 24, 2026
0

ಕರ್ನಾಟಕದಲ್ಲಿ ರಾಜ್ಯ ಸರ್ಕಾರ ಮತ್ತು ರಾಜ್ಯಪಾಲರ ನಡುವಿನ ಸಾಂವಿಧಾನಿಕ ಸಂಘರ್ಷ ಮತ್ತಷ್ಟು ತೀವ್ರಗೊಂಡಿದೆ. ವಿಧಾನಮಂಡಲ ವಿಶೇಷ ಅಧಿವೇಶನದ ಎರಡನೇ ದಿನದ ಕಲಾಪದ ವೇಳೆ, ರಾಜ್ಯಪಾಲರ ಭಾಷಣ ವಿಷಯವೇ...

ಟ್ರಂಪ್ ಕೋಪಕ್ಕೆ ಗುರಿಯಾದ ಕೆನಡಾ: ಶಾಂತಿ ಮಂಡಳಿ ಆಹ್ವಾನ ವಾಪಸ್

ಟ್ರಂಪ್ ಕೋಪಕ್ಕೆ ಗುರಿಯಾದ ಕೆನಡಾ: ಶಾಂತಿ ಮಂಡಳಿ ಆಹ್ವಾನ ವಾಪಸ್

by Shwetha
January 24, 2026
0

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕೋಪಕ್ಕೆ ಕೆನಡಾ ಗುರಿಯಾಗಿದೆ. ಗಾಜಾ ಪ್ರದೇಶದಲ್ಲಿ ಶಾಂತಿ ಸ್ಥಾಪಿಸುವ ಉದ್ದೇಶದಿಂದ ರೂಪಿಸಲಾಗಿರುವ ಅಂತರರಾಷ್ಟ್ರೀಯ ಶಾಂತಿ ಮಂಡಳಿಗೆ ಸೇರಿಕೊಳ್ಳುವಂತೆ ಕೆನಡಾಕ್ಕೆ...

‘G RAM G’ ಕಾಯ್ದೆ ವಿರುದ್ಧ ತಮಿಳುನಾಡು ವಿಧಾನಸಭೆಯಲ್ಲಿ ನಿರ್ಣಯ

‘G RAM G’ ಕಾಯ್ದೆ ವಿರುದ್ಧ ತಮಿಳುನಾಡು ವಿಧಾನಸಭೆಯಲ್ಲಿ ನಿರ್ಣಯ

by Shwetha
January 24, 2026
0

‘VB–G RAM G’ ಕಾಯ್ದೆಯ ವಿರುದ್ಧ ನಿರ್ಣಯ ಅಂಗೀಕರಿಸಿದ ರಾಜ್ಯಗಳ ಪಟ್ಟಿಗೆ ಇದೀಗ ತಮಿಳುನಾಡು ಕೂಡ ಸೇರ್ಪಡೆಯಾಗಿದೆ. ತಮಿಳುನಾಡು ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಈ ನಿರ್ಣಯವನ್ನು...

Lamp Characteristics: What should a god's lamp look like inside the house?

ದೀಪ ಲಕ್ಷಣ: ಮನೆಯೊಳಗೆ ದೇವರ ದೀಪ ಹೇಗಿರ ಬೇಕು?

by admin
January 24, 2026
0

ದೀಪ ಲಕ್ಷಣ: ಮನೆಯೊಳಗೆ ದೇವರ ದೀಪ ಹೇಗಿರ ಬೇಕು? ಇದೊಂದು ಮಹಾ ಜಿಜ್ಞಾಸೆಯ ವಿಷಯ ಆಗಿದೆ. ಒಬ್ಬೊಬ್ಬರು ಒಂದೊಂದು ತರಹ ಹೇಳಿ ತಲೆ ಕೆಡಿಸಿ ಬಿಡುತ್ತಾರೆ. ನಿಜವಾದ...

ಉದ್ಯೋಗಾಂಕ್ಷಿಗಳಿಗೆ ಹಬ್ಬವೋ ಹಬ್ಬ: ಇನ್ಫೋಸಿಸ್ ನಲ್ಲಿ ಖಾಲಿ ಇವೆ 20,000 ಹುದ್ದೆಗಳು

ಉದ್ಯೋಗಾಂಕ್ಷಿಗಳಿಗೆ ಹಬ್ಬವೋ ಹಬ್ಬ: ಇನ್ಫೋಸಿಸ್ ನಲ್ಲಿ ಖಾಲಿ ಇವೆ 20,000 ಹುದ್ದೆಗಳು

by Shwetha
January 24, 2026
0

ಬೆಂಗಳೂರು: ಕೃತಕ ಬುದ್ಧಿಮತ್ತೆ ಅಥವಾ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ತಂತ್ರಜ್ಞಾನದ ಅಬ್ಬರಕ್ಕೆ ಸಿಲುಕಿ ಜಾಗತಿಕ ಮಟ್ಟದಲ್ಲಿ ಉದ್ಯೋಗ ಕಡಿತದ ಭೀತಿ ಎದುರಾಗಿರುವಾಗಲೇ, ಭಾರತದ ಸಾಫ್ಟ್ವೇರ್ ದಿಗ್ಗಜ ಇನ್ಫೋಸಿಸ್...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram