ಜಮೀರ್ ಅಹ್ಮದ್ ವಿರುದ್ಧ ಸವಿತಾ ಸಮಾಜ ಗರಂ
ಬೆಂಗಳೂರು : ಮಾಜಿ ಸಚಿವ, ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಜಮೀರ್ ಅಹ್ಮದ್ ವಿರುದ್ಧ ರಾಜ್ಯ ಸವಿತಾ ಸಮಾಜ ಫುಲ್ ಗರಂ ಆಗಿದೆ.
ಜಮೀರ್ ಮಾತಿನ ಬರದಲ್ಲಿ ಕ್ಷೌರಿಕ ಸಮುದಾಯದವರನ್ನು ಹಜಾಮರು ಎಂದು ಕರೆದು ಯಡವಟ್ಟುಕೊಂಡಿದ್ದರು. ಸಚಿವರ ಈ ಹೇಳಿಕೆ ಖಂಡನೀಯ ಎಂದು ರಾಜ್ಯ ಸವಿತಾ ಸಮಾಜ ಆಕ್ರೋಶ ವ್ಯಕ್ತಪಡಿಸಿದೆ.
ಅಲ್ಲದೆ ಸಚಿವರ ಈ ಹೇಳಿಕೆಯಿಂದ ನಮ್ಮ ಸಮಾಜಕ್ಕೆ ಅವಮಾನವಾಗಿದೆ. ಇದನ್ನು ನಮ್ಮ ಕರ್ನಾಟಕ ರಾಜ್ಯ ಸವಿತಾ ಸಮಾಜ ಖಂಡಿಸುತ್ತದೆ.
ಕೂಡಲೇ ನಿಮ್ಮ ಹೇಳಿಕೆಯನ್ನು ಹಿಂಪಡೆದು, ಬೇಷರತ್ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಕಾನೂನಿನ ಹೋರಾಟಕ್ಕೆ ನಮ್ಮ ಸಮಾಜ ಮುಂದಾಗಲಿದೆ ಎಂದು ಎಚ್ಚರಿಕೆ ನೀಡಿದೆ.
ಜೂನ್ 9ರಂದು ಚಾಮರಾಜಪೇಟೆಯಲ್ಲಿ ನಡೆದ ಸರ್ವಧರ್ಮ ಸಮ್ಮೇಳನದ ಬಹಿರಂಗ ಕಾರ್ಯಕ್ರಮದಲ್ಲಿ ಮಾತಿನ ಬರದಲ್ಲಿ ಜಮೀರ್ ಅಹ್ಮದ್ ಕ್ಷೌರಿಕ ಸಮುದಾಯವನ್ನ ಹಜಾಮರು ಎಂಬ ಪದ ಬಳಕೆ ಮಾಡಿದ್ದರು.