ಹಿರಿಯ ನಟ ಶಿವರಾಂ ನಿಧನಕ್ಕೆ ಹೆಚ್ ಡಿಕೆ ಕಂಬನಿ H D kumaraswamy Saaksha tv
ಬೆಂಗಳೂರು: ಹಿರಿಯ ನಟ ಶಿವರಾಂ ಅವರ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕಂಬನಿ ಮಿಡಿದಿದ್ದಾರೆ.
ಕನ್ನಡ ಚಿತ್ರರಂಗದ ಶ್ರೇಷ್ಠ ನಟರಲ್ಲಿ ಒಬ್ಬರು, ಚಿತ್ರರಂಗದ ಆಸ್ತಿಯಾಗಿದ್ದ ಹಿರಿಯ ನಟ ಶಿವರಾಂ ಅವರು ನಿಧನರಾದ ಸುದ್ದಿ ತಿಳಿದು ದಿಗ್ಭ್ರಮೆ ಆಯಿತು. ನಮ್ಮ ಚಿತ್ರರಂಗದ ಎಲ್ಲ ಆಗುಹೋಗುಗಳಿಗೆ ಸದಾ ಮಿಡಿಯುತ್ತಿದ್ದ ಅವರ ಅಗಲಿಕೆ ನನಗೆ ಬಹಳ ದುಃಖವುಂಟು ಮಾಡಿದೆ ಎಂದು ಕುಮಾರಸ್ವಾಮಿ ಟ್ವಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.
ಶರಪಂಜರ, ನಾಗರಹಾವು, ಗುರುಶಿಷ್ಯರು, ಗೆಜ್ಜೆಪೂಜೆ, ಉಪಾಸನೆ ಸೇರಿದಂತೆ ಅನೇಕ ಸ್ಮರಣಿಯ ಚಿತ್ರಗಳಲ್ಲಿ ನಟಿಸಿದ್ದ ಶಿವರಾಂ ಅವರು ಚಿತ್ರರಂಗದ ಅಭಿವೃದ್ಧಿಯ ಎಲ್ಲ ಹಂತಗಳಿಗೂ ಸಾಕ್ಷಿಯಾಗಿದ್ದವರು. ದೈವಭಕ್ತರೂ ಆಗಿದ್ದ ಅವರು ಅಧ್ಯಾತ್ಮದತ್ತ ಒಲವು ಹೊಂದಿದ್ದರಲ್ಲದೆ, ಇತರರಲ್ಲೂ ಸಾತ್ವಿಕತೆಯನ್ನು ಮೂಡಿಸುತ್ತಿದ್ದರು.
ವೈಯಕ್ತಿಕವಾಗಿ ಶಿವರಾಂ ಅವರ ನಿಧನ ನನಗೆ ತೀವ್ರ ನೋವು ಉಂಟು ಮಾಡಿದೆ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಅವರ ಕುಟುಂಬ ವರ್ಗದವರು, ಅಭಿಮಾನಿಗಳು, ಚಿತ್ರರಂಗಕ್ಕೆ ನೋವನ್ನು ಭರಿಸುವ ಶಕ್ತಿಯನ್ನು ದೇವರು ದಯಪಾಲಿಸಲಿ ಎಂದು ಕುಮಾರಸ್ವಾಮಿ ಪ್ರಾರ್ಥಿಸಿದ್ದಾರೆ.