ಸುಪ್ರಭಾತ ಸೇವೆಗೆ ಅವಕಾಶ ನೀಡಬೇಕು | ಧಾರ್ಮಿಕ ದತ್ತಿಗೆ ಹಿಂದೂ ಮುಖಂಡರ ಪತ್ರ
ಬೆಂಗಳೂರು: ಹಿಂದೂ ಮುಖಂಡರು ರಾಜ್ಯದಲ್ಲಿ ಮತ್ತೊಂದು ಅಭಿಯಾನವನ್ನು ಪ್ರಾರಂಭಿಸಿದ್ದು, ದೇವಸ್ಥಾನಗಳಲ್ಲಿ ಸುಪ್ರಭಾತ ಸೇವೆಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ ಹಿಜಾಬ್ , ಹಲಾಲ್, ಆಜಾನ್ ಹೀಗ ಅನೇಕ ವಿಷಯಗಳ ವಿವಾದ ನಡೆಯುತ್ತಿದ್ದು, ಈ ವಿವಾದದ ಬಿಸಿ ಆರುವ ಮುನ್ನವೇ ಸುಪ್ರಭಾತ ಸೇವೆಗೆ ಅವಕಾಶ ನೀಡಬೇಕೆಂದು ಆಗ್ರಹಿಸಿದ್ದಾರೆ. ಈ ಕುರಿತು ಹಿಂದೂ ಮುಖಂಡ, ಧಾರ್ಮಿಕ ಪರಿಷತ್ ಸದಸ್ಯ ಹರ್ಷ ಮುತಾಲಿಕ್ ಧಾರ್ಮಿಕ ದತ್ತಿಗೆ ಪ್ರತಿದಿನ ಬೆಳಗ್ಗೆ ಸುಪ್ರಭಾತ ಸೇವೆಗೆ ಅನುಮತಿ ನೀಡಿ ಎಂದು ಮನವಿ ಪತ್ರ ಬರೆದಿದ್ದಾರೆ.
ಇನ್ನೂ ಪತ್ರದಲ್ಲಿ:ರಾಜ್ಯದ ಎಲ್ಲಾ ಧಾರ್ಮಿಕ ದತ್ತಿ ಇಲಾಖೆಗೆ ಒಳಪಡುವ ದೇವಸ್ಥಾನಗಳಿಗೆ ಪ್ರತಿದಿನ ಬೆಳಗ್ಗೆ ಸುಪ್ರಭಾತ ಹಾಕಲು ಹಾಗೂ ವಿಶೇಷ ದಿನಗಳಲ್ಲಿ ಪೂಜೆ ಮತ್ತು ಕೈಕರ್ಯಗಳನ್ನು ಮೈಕ್ನ ಮೂಲಕ ಪಠಿಸಲು ಸರಿಯಾದ ಉಪಕರಣಗಳನ್ನು ಬಳಸಲು ನೀಡಬೇಕು.
ದೇವಸ್ಥಾನಗಳಲ್ಲಿ ಸುಪ್ರಭಾತ, ಪೂಜಾ ಮಂತ್ರ ಪಠಿಸುವುದನ್ನು ಭಕ್ತಾದಿಗಳಿಗೆ ಮಟ್ಟಿಸಲು ಮೈಕ್ ಅಗತ್ಯವಾಗಿದೆ. ಹೀಗಾಗಿ ಲೌಡ್ ಸ್ಪೀಕರ್, ಸೌಂಡ್ ಸಿಸ್ಟಂ, ಮೈಕ್ ಅಳವಡಿಕೆಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಲಾಗಿದೆ.