ವಿತ್ರ ವ್ರತಾಚರಣೆಯಲ್ಲಿ “ಪ್ರದೋಷ ವ್ರತ”ವೂ ಒಂದು. ವಿಶೇಷ ಹಿನ್ನೆಲೆಯನ್ನು ಹೊಂದಿರುವ ಪ್ರದೋಷ ವ್ರತ ಆಚರಣೆ ಮಾಡುವುದರಿಂದ ಸಾಕಷ್ಟು ಪುಣ್ಯ ಲಭಿಸುವುದು ಎಂದು ಹೇಳಲಾಗುತ್ತದೆ.
ವ್ರತ, ಉಪವಾಸ ಮತ್ತು ಆಚರಣೆಗೆ ಹಿಂದೂ ಧರ್ಮದಲ್ಲಿ ವಿಶೇಷವಾದ ಸ್ಥಾನವಿದೆ. ದೇಹವನ್ನು ದಂಡಿಸುವುದರ ಮೂಲಕ ಆತ್ಮ ಶುದ್ಧಿ ಮಾಡಿಕೊಳ್ಳುವ ವಿಧಾನವೇ ವ್ರತ ಆಚರಣೆ. ದೈವ ಶಕ್ತಿಯನ್ನು ಸಂತುಷ್ಟಗೊಳಿಸಿ, ಧನಾತ್ಮಕ ಶಕ್ತಿಯನ್ನು ಪಡೆದುಕೊಳ್ಳುವ ವಿಧಾನವನ್ನು ವ್ರತಾಚರಣೆ ಎಂದು ಹೇಳಲಾಗುತ್ತದೆ. ವ್ರತಾಚರಣೆಯನ್ನು ಸಾಮಾನ್ಯವಾಗಿ ವಿಶೇಷವಾದ ದಿನಗಳಲ್ಲಿ ಹಾಗೂ ಹಬ್ಬ-ಹರಿದಿನಗಳಲ್ಲಿ ಮಾತ್ರ ಆಚರಿಸಲಾಗುವುದು. ಅಂತಹ ಪವಿತ್ರ ವ್ರತಾಚರಣೆಯಲ್ಲಿ “ಪ್ರದೋಷ ವ್ರತ”ವೂ ಒಂದು. ವಿಶೇಷ ಹಿನ್ನೆಲೆಯನ್ನು ಹೊಂದಿರುವ ಪ್ರದೋಷ ವ್ರತ ಆಚರಣೆ ಮಾಡುವುದರಿಂದ ಸಾಕಷ್ಟು ಪುಣ್ಯ ಲಭಿಸುವುದು. ಶನಿವಾರದಂದು ಬರುವಂತಹ ಶನಿಪ್ರದೋಷಕ್ಕೆ ಹಿಂದೂ ಧರ್ಮದಲ್ಲಿ ಬಹಳ ಮಹತ್ವವಿದೆ. ಹಾಗಾಗಿ ಪ್ರದೋಷ ಎಂದರೇನು ? ಪ್ರದೋಷದ ಮಹತ್ವ, ಶನಿಯ ಆರಾಧನೆ ಯಾಕೆ ಮಾಡಬೇಕು ? ಎನ್ನುವುದರ ಕುರಿತಾಗಿ ಪಂಡಿತ್ ಜ್ಞಾನೇಶ್ವರ್ ರಾವ್ ಅವರು ಮಾಹಿತಿ ತಿಳಿಸಿಕೊಡುತ್ತಾರೆ
ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ, ಶತ್ರುನಾಶ, ಸ್ತ್ರೀ– ಪುರುಷ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ರಕ್ತೇಶ್ವರೀ ದೇವಿಯ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564
ಹಿಂದೂ ಧರ್ಮದಲ್ಲಿ ಪ್ರದೋಷವನ್ನು ಪ್ರದೋಷ ವ್ರತ ವೆಂದು ಆಚರಿಸಲಾಗುತ್ತದೆ. ಪ್ರತಿ ತಿಂಗಳೂ ಎರಡು ಬಾರಿ ಬರುವ ಶುಕ್ಲ ಪಕ್ಷ ಹಾಗೂ ಕೃಷ್ಣ ಪಕ್ಷದ ತ್ರಯೋದಶಿಯಂದು ಸೂರ್ಯಾಸ್ತದ ಸಮಯದ ಮೂರು ಗಂಟೆಗಳ ಅವಧಿಯನ್ನು ಪ್ರದೋಷ ಕಾಲ ಎಂದು ಕರೆಯಲಾಗುತ್ತದೆ. ಇದು ಬಹಳ ಮಹತ್ವದ ದಿನವಾಗಿದ್ದು ಈ ದಿನ ಶಿವನ ಆರಾಧನೆಯನ್ನು ಮಾಡಲಾಗುತ್ತದೆ. ಈ ಬಾರಿ ಶನಿ ಪ್ರದೋಷವು ಡಿಸೆಂಬರ್ 12 ರಂದು ಅಂದರೆ ಇಂದು ನಡೆಯಲಿದೆ.
ಪ್ರದೋಷವು ಸೋಮವಾರ ದಂದು ಬಂದರೆ ಸೋಮ ಪ್ರದೋಷ ವೆಂದು, ಮಂಗಳವಾರ ಬಂದರೆ ಭೌಮ ಪ್ರದೋಷ ವೆಂದೂ ಹಾಗೂ ಶನಿವಾರ ಬಂದರೆ ಶನಿ ಪ್ರದೋಷ ವೆಂದೂ ಕರೆಯಾಗುತ್ತದೆ. ಈ ಎಲ್ಲಾ ಪ್ರದೋಷಗಳಿಗಿಂತಲೂ ಸೋಮ ಪ್ರದೋಷ ಹಾಗೂ ಶನಿ ಪ್ರದೋಷ ಅತ್ಯಂತ ಮಹತ್ವವನ್ನು ಪಡೆದಿದೆ.
ಪ್ರದೋಷ ಕಾಲ ಶನಿವಾರ ಬಂದರೆ ಅದನ್ನು ಶನಿ ಪ್ರದೋಷ ವ್ರತ ವೆಂದು ಕರೆಯಲಾಗುತ್ತದೆ. ಹಿಂದೂ ಜ್ಯೋತಿಷ್ಯದ ಪ್ರಕಾರ ಶನಿ ಸಮಸ್ಯೆಗಳನ್ನು ಸೃಷ್ಟಿಸುವ ದೇವರು. ಹಾಗಾಗಿ ಶನಿದೋಷದಿಂದ ಬರುವ ಕಷ್ಟಗಳನ್ನು ನಿವಾರಿಸಲು ಶನಿ ಪ್ರದೋಷ ಕಾಲದಲ್ಲಿ ಉಂಟಾಗುವಂತಹ ಶನಿಯ ದುಷ್ಪರಿಣಾಮಗಳಿಂದ ಪಾರಾಗಬಹುದು.
ಪ್ರದೋಷವೆಂದರೆ…?
ಪ್ರದೋಷ ಎಂದರೆ ಪಾಪಗಳನ್ನು ತೆಗೆದುಹಾಕುವುದು ಎಂದರ್ಥ. ಈ ಪುಣ್ಯ ಕಾಲವು ನಾವು ಮಾಡುವಂತಹ ಕರ್ಮವನ್ನು ಹಾಗೂ ಕರ್ಮಶಕ್ತಿಯನ್ನು ತೆಗೆದುಹಾಕಲು ಇರುವಂತಹ ಅವಕಾಶವಾಗಿದೆ. ಪ್ರಕಾಶಮಾನವಾಗಿ ಕಂಗೊಳಿಸುವ ಚಂದ್ರನ ಹದಿಮೂರನೇ ಹಂತವಾದ ಪ್ರದೋಷವು ವ್ಯಕ್ತಿಯಲ್ಲಿರುವಂತಹ ಕೆಟ್ಟ ಕರ್ಮವನ್ನು ತೆಗೆದುಹಾಕಲು ಶಿವನಿಗೆಂದು ಮೀಸಲಾದ ಸಮಯವಿದು.
ಶ್ರೀ ಕ್ಷೇತ್ರ ದುರ್ಗಾಪರಮೇಶ್ವರೀ,ದೇವಸ್ಥಾನ ಕಟೀಲು
ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ ತಾಂತ್ರಿಕ ಶ್ರೀ ಜ್ಞಾನೇಶ್ವರ್ ರಾವ್ 85489 98564 ದೈವಶಕ್ತಿ ಜ್ಯೋತಿಷ್ಯರು ಅಥರ್ವಣವೇದ ಆಧಾರಿತ ಅಷ್ಟಮಂಗಳ ಪ್ರಶ್ನೆ ಅಂಜನ ಶಾಸ್ತ್ರ ದೈವಪ್ರಶ್ನೆ ಜಾತಕ ಆಧಾರಿತವಾಗಿ ನಿಮ್ಮ ಸಮಸ್ಯೆಗಳಿಗೆ ಶ್ರೀ ಕಟೀಲು ದುರ್ಗಾಪರಮೇಶ್ವರಿ ಅಮ್ಮನವರ ದೈವಿಕ ಪೂಜಾ ಶಕ್ತಿಯಿಂದ ನಿಮ್ಮ ಸಮಸ್ಯೆಗಳಿಗೆ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದಿಂದ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ದೂರವಾಣಿ ಸಂಖ್ಯೆ:-call/WhatsApp 85489 98564
ಶನಿ ಪ್ರದೋಷದ ಮಹತ್ವ
ಹಿಂದೂ ಪುರಾಣಗಳ ಪ್ರಕಾರ, ಶನಿವಾರವನ್ನು ನವಗ್ರಹಗಳಲ್ಲಿ ಒಬ್ಬನಾದ ಶನೈಶ್ಚರ ದೇವನಿಗೆ ಅರ್ಪಿಸಲಾಗಿದೆ. ಭಗವಾನ್ ಶನಿಯು ಕರ್ಮಫಲಗಳನ್ನು ನೀಡುವವನು ಹಾಗಾಗಿ ಜ್ಯೋತಿಷ್ಯವನ್ನು ನಂಬುವ ಎಲ್ಲಾ ಹಿಂದೂಗಳು ಶನಿಯೆಂದರೆ ಭಯಪಡುತ್ತಾರೆ. ಶನಿಯಿಂದಾಗುವ ತೊಂದರೆಗಳನ್ನು ನಿವಾರಿಸಲು ಶನಿವಾರದಂದು ವ್ರತ, ಉಪವಾಸಗಳನ್ನು ಕೈಗೊಳ್ಳುತ್ತಾರೆ. ಶನಿವಾರದಂದು ಬರುವ ಪ್ರದೋಷದಂದು ಶನೈಶ್ಚರನ ಅಶುಭ ಪ್ರಭಾವವನ್ನು ತಗ್ಗಿಸಲು ಶನಿಯ ಆರಾಧನೆ ಮಾಡಿದರೆ ಹಗಲಿನಲ್ಲಿ ಶಿವನ ಆರಾಧನೆ ಮಾಡುತ್ತಾರೆ.
ಶನಿಪ್ರದೋಷದ ದಿನದಂದು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಆಚರಿಸಲಾಗುತ್ತದೆ. ಸಂಜೆಯ ಪೂಜೆಯೊಂದಿಗೆ ಉಪವಾಸ ವ್ರತವನ್ನು ಕೈಬಿಡಲಾಗುತ್ತದೆ. ಪ್ರದೋಷ ಎಂದರೆ ಸೂರ್ಯಾಸ್ತದ ಮೊದಲು ಮತ್ತು ಸೂರ್ಯಾಸ್ತದ ನಂತರದ ಅವಧಿ ಎಂದರ್ಥ. ಸೂರ್ಯಾಸ್ತದ ಒಂದೂವರೆ ಗಂಟೆಗಳ ಮೊದಲು ಹಾಗೂ ಸೂರ್ಯಾಸ್ತದ ನಂತರದ ಒಂದು ಗಂಟೆಗಳ ಅವಧಿಯನ್ನು ಪ್ರದೋಷಕಾಲ ವೆಂದು ಹೇಳಲಾಗುತ್ತದೆ. ಈ ದಿನ ಹೆಚ್ಚಿನವರು ಆಹಾರ ಸೇವನೆಯಿಂದ ದೂರವಿದ್ದು, ಬರಿ ನೀರು ಕುಡಿಯುವ ಮೂಲಕ ಕಟ್ಟುನಿಟ್ಟಾದ ಉಪವಾಸವನ್ನು ಆಚರಿಸುತ್ತಾರೆ. ಕೆಲವರು ಹಣ್ಣುಗಳು ಹಾಗೂ ನೀರನ್ನು ಸೇವಿಸುವ ಮೂಲಕ ಉಪವಾಸ ವ್ರತಾಚರಣೆ ಮಾಡುತ್ತಾರೆ. ಸಂಜೆ ಪ್ರದೋಷ ಪೂಜೆಯ ನಂತರ ಪ್ರಸಾದವನ್ನು ಮಾತ್ರ ಸೇವನೆ ಮಾಡಿ. ಮರುದಿನ ಬೆಳಗ್ಗೆಯಿಂದ ಎಂದಿನಂತೆ ಆಹಾರವನ್ನು ಸೇವಿಸುತ್ತಾರೆ. ಉಪವಾಸದ ಸಂದರ್ಭದಲ್ಲಿ ಭಕ್ತರು ಶಿವ ದೇವಾಲಯಗಳಿಗೂ ಭೇಟಿ ನೀಡುತ್ತಾರೆ.
ಹಿಂದೂ ನಂಬಿಕೆಯ ಪ್ರಕಾರ ಶಿವನು ಶನಿಯ ದಿನದಂದು ಹಾಲಾಹಲವನ್ನು ಸೇವಿಸಿದನೆಂದೂ ಹೀಗಾಗಿ ಈ ದಿನವನ್ನು ಶನಿ ಪ್ರದೋಷವೆಂದೂ ಕರೆಯಲಾಗುತ್ತದೆ. ಸಾಡೇ ಸಾತಿ ಅಂದರೆ ಏಳೂವರೆ ಶನಿಯ ಪ್ರಭಾವಕ್ಕೆ ಒಳಗಾದವರು. ಪ್ರಸ್ತುತ ಧನುಸ್ಸು, ಮಕರ, ಕುಂಭ ರಾಶಿಯವರು ಶನಿ ಪ್ರದೋಷ ವ್ರತವನ್ನಾಚರಿಸಿದರೆ ಒಳ್ಳೆಯದೆಂದು ಹೇಳಲಾಗುತ್ತದೆ. ಪ್ರದೋಷ ಸಮಯದಲ್ಲಿ ಅರಿಶಿನ, ಕುಂಕುಮ, ಜೇನುತುಪ್ಪ , ಅಕ್ಕಿ ಪುಡಿಯಿಂದ ಮಾಡುವ ಶಿವನ ಅಭಿಷೇಕವು ಹೆಚ್ಚು ಫಲ ನೀಡುತ್ತದೆ.
ಶಿವನು ಈ ದಿನದಂದು ಶನಿಯ ಮೇಲೆ ಹೆಚ್ಚು ಪ್ರಭಾವ ಬೀರುತ್ತಾನೆ. ಹಾಗಾಗಿ ನಮ್ಮನ್ನು ಮಿತಿಗೊಳಿಸುವ ಕೆಲವು ಕರ್ಮದ ಬಂಧನಗಳನ್ನು ಬಿಡಿಸಲು ಅಥವಾ ಕರ್ಮಬಂಧನದಿಂದ ಬಿಡುಗಡೆಗೊಳಿಸಲು ಶನಿಯ ಆರಾಧನೆ ಹಾಗೂ ಶಿವನ ಆರಾಧನೆಯನ್ನು ಈ ದಿನ ಮಾಡಿದರೆ ಒಳ್ಳೆಯದು. ವಿಶೇಷವಾದ ಪ್ರದೋಷ ವ್ರತ
ಪ್ರದೋಷ ವ್ರತವನ್ನು ಎಲ್ಲಾ ವಯೋಮಾನದವರು ಸಹ ಕೈಗೊಳ್ಳಬಹುದು. ಪ್ರದೋಷ ವ್ರತ ವಿಶೇಷವಾಗಿ ಶನಿವಾರ ಬಂದರೆ ಅತ್ಯಂತ ಪವಿತ್ರ ಹಾಗೂ ಶ್ರೇಷ್ಠವಾದ ಸಮಯ ಎಂದು ಪರಿಗಣಿಸಲಾಗುವುದು. ಪ್ರದೋಷದ ವ್ರತವನ್ನು ವಾರದ ಎಲ್ಲಾ ದಿನಗಳಲ್ಲೂ ಅಚರಿಸಬಹುದು. ಅದರಲ್ಲಿ ಶನಿವಾರದಂದು ಬರುವ ಪ್ರದೋಷ ವ್ರತವು ಹೆಚ್ಚು ಮಹತ್ವವನ್ನು ಪಡೆದುಕೊಂಡಿದೆ ಎಂದು ಹೇಳಲಾಗುವುದು.
ಶನಿ ಮತ್ತು ಶಂಕರ ದೇವರಿಗೆ ಸಲ್ಲುವುದು
ಪ್ರದೋಷದ ಆಚರಣೆಯು ಮಹಾನ್ ಶಕ್ತಿ ದೇವನಾದ ಶಿವನಿಗೆ ಮೀಸಲಾಗಿರುವುದು. ಪ್ರದೋಷದ ದಿನ ಶಿವನನ್ನು ಭಕ್ತಿ ಭಾವದಿಂದ ಪೂಜಿಸಬೇಕು. ಜೊತೆಗೆ ವ್ರತಾಚರಣೆಯನ್ನು ಕೈಗೊಳ್ಳಬೇಕು. ಆಗ ಭಕ್ತರ ಮನದಿಂಗಿತಗಳು ಸಂಪೂರ್ಣವಾಗಿ ನೆರವೇರುವುದು. ಶನಿವಾರವು ಶನಿ ದೇವನಿಗೆ ಮೀಸಲಾದ ದಿನ. ಶಿವನ ಮಾರ್ಗದಲ್ಲಿ ನಡೆಯುವ ದೇವನು ಶನೈಶ್ಚರ. ಅತ್ಯಂತ ಕಠಿಣ ಹಾಗೂ ಸತ್ಯದ ಮಾರ್ಗದಲ್ಲಿ ಸಾಗುವ ದೇವ ಶನಿ. ವ್ಯಕ್ತಿಯ ಕುಂಡಲಿಯಲ್ಲಿ ಶನಿಯ ದೋಷ ಅಥವಾ ವಕ್ರದೃಷ್ಟಿ ಇದ್ದರೆ ಶನಿವಾರದ ಪ್ರದೋಷ ವ್ರತವನ್ನು ಕೈಗೊಳ್ಳಬೇಕು. ಇದರಿಂದ ಶನಿ ದೇವನು ಸಂತುಷ್ಟನಾಗುವನು. ಜೊತೆಗೆ ತನ್ನ ಭಕ್ತರಿಗೆ ವಿಶೇಷ ಆಶೀರ್ವಾದ ನೀಡುವನು. ಅಲ್ಲದೇ ಜೀವನದಲ್ಲಿ ಇದ್ದ ದೋಷಗಳನ್ನು ಕಳೆದುಕೊಳ್ಳಬಹುದು. ಈ ವಿಶೇಷ ದಿನದಂದು ಶನಿ ಮತ್ತು ಶಿವನಿಗೆ ಆರಾಧನೆ ಹಾಗೂ ವ್ರತಾಚರಣೆ ಕೈಗೊಳ್ಳುವುದರಿಂದ ಸಾಕಷ್ಟು ಧನಾತ್ಮಕ ಫಲವನ್ನು ಪಡೆದುಕೊಳ್ಳಬಹುದು. ಶನಿ ತೊಂದರೆ ಅಥವಾ ಕುಂಡಲಿಯಲ್ಲಿ ದುರ್ಬಲನಾದ ಶನಿಯಿದ್ದರೆ ಪ್ರದೋಷದ ಪೂಜೆಯು ಸಕಾರಾತ್ಮಕ ಫಲವನ್ನು ತಂದುಕೊಡುವುದು.
ಪ್ರದೋಷದ ಶುಭ ಮುಹೂರ್ತ
ಡಿಸೆಂಬರ್ 12, 2020ರಂದು ಪ್ರದೋಷ ವ್ರತ ಕೈಗೊಳ್ಳಬಹುದು. ಅಂದು ಮುಂಜಾನೆ 6:36ಕ್ಕೆ ಸೂರ್ಯೋದಯವಾಗುವುದು. ಸಂಜೆ 05.51ಕ್ಕೆ ಸೂರ್ಯಾಸ್ತದ ಸಮಯ. ತ್ರಯೋದಶಿಯು ಶನಿವಾರ ಡಿಸೆಂಬರ್ 12, 2020ರಂದು ಮುಂಜಾನೆ 04:36ಕ್ಕೆ ಪ್ರಾರಂಭವಾಗುತ್ತದೆ. ಅಂತೆಯೇ ಡಿಸೆಂಬರ್ 12, 2020ರಂದು ರಾತ್ರಿ 02:15 ಗಂಟೆಗೆ ಕೊನೆಗೊಳ್ಳುವುದು.
ಪ್ರದೋಷದ ಅನುಕೂಲತೆಗಳು
ಶನಿವಾರ ಶನಿ ದೇವರಿಗೆ ಮೀಸಲಾಗಿರುತ್ತದೆ ಎನ್ನುವುದು ಎಲ್ಲರೂ ತಿಳಿದಿರುವ ಸತ್ಯ. ಅಂತೆಯೇ ಶನಿ ದೇವನ್ನು ಅತ್ಯಂತ ಕೋಪಿಷ್ಟ ಹಾಗೂ ಕರ್ಮ ದೇವ ಎಂದು ಪರಿಗಣಿಸುತ್ತೇವೆ. ವ್ಯಕ್ತಿಯ ಕರ್ಮಗಳಿಗೆ ಹಾಗೂ ಸತ್ಯ-ಧರ್ಮಗಳ ಅನುಸಾರ ಶಿಕ್ಷೆ ಹಾಗೂ ಅದೃಷ್ಟವನ್ನು ನೀಡುವನು. ಈ ಪವಿತ್ರವಾದ ದಿನದಲ್ಲಿ ಪ್ರದೋಷವು ಕಾಣಿಸಕೊಂಡರೆ ಕಷ್ಟದಲ್ಲಿ ಇರುವವರು ತಪ್ಪದೇ ವ್ರತವನ್ನು ಆಚರಿಸಬಹುದು. ಈ ದಿನದಂದು ಶನಿಗೆ ಸಂಬಂಧಿಸಿದ ಮಂತ್ರ, ಸಹಸ್ರನಾಮ, ಶ್ಲೋಕವನ್ನು ಹೇಳಬೇಕು. ಇದರಿಂದ ಮಕ್ಕಳಿಲ್ಲದವರು ಮಕ್ಕಳನ್ನು ಪಡೆದುಕೊಳ್ಳುವರು. ಜೊತೆಗೆ ಜೀವನದಲ್ಲಿ ಎದುರಿಸುತ್ತಿರುವ ಕಷ್ಟ, ನಷ್ಟ ಹಾಗೂ ಜೀವನದ ಆಗು ಹೋಗುಗಳ ಮೇಲೆ ಧನಾತ್ಮಕ ಪ್ರಭಾವವನ್ನು ನೀಡುವನು.
ಈ ಮೇಷ, ಕನ್ಯ,ಧನು,ಕಟಕ,ಸಿಂಹ,ಕುಂಭ ರಾಶಿಯ
ವ್ಯಕ್ತಿ ಸಾಕಷ್ಟು ಶುಭ ಫಲಗಳನ್ನೇ ಪಡೆದುಕೊಳ್ಳುವನು.
ಭವಿಷ್ಯದ ಕುರಿತು ನಿಮಗೆ ಆತಂಕವಿದೆಯೇ..? ಜ್ಯೋತಿಷಕ್ಕೆ ಸಂಬಂಧಿಸಿದ ಪ್ರಶ್ನೆಗಳಿವೆಯೇ? ನಿಮ್ಮಲ್ಲಿನ ಗೊಂದಲಗಳನ್ನು ಬಗೆಹರಿಸಲು ನಿಮ್ಮ ವೈಯಕ್ತಿಕ ಪ್ರಶ್ನೆಗಳನ್ನು ಕೇಳಿ ಪರಿಹಾರ ಪಡೆದುಕೊಳ್ಳಬಹುದು ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ನಿಮ್ಮ ಜೀವನದ ಯಾವುದೇ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ವೈವಾಹಿಕ ವ್ಯವಹಾರಿಕ ಸಮಸ್ಯೆಗಳಿಗೆ ಕಟೀಲು ಶ್ರೀ ರಕ್ತೇಶ್ವರೀ ದೇವಿಯ ಪೂಜಾ ಪದ್ದತಿಯಿಂದ ಶಾಶ್ವತ ಪರಿಹಾರ ತಿಳಿಯಲು ಸಮಸ್ಯೆಗಳನ್ನು ಬರೆದು ಕಳುಹಿಸಿ ಉತ್ತರ ಪಡೆದುಕೊಳ್ಳಿ call/WhatsApp 85489 98564.
ಸಾಡೇಸಾತ್ ಸಮಸ್ಯೆ ನಿವಾರಣೆಯಾಗುವುದು
ಪ್ರದೋಷದ ದಿನ ಶನಿ ಮತ್ತು ಶಿವನನ್ನು ಧ್ಯಾನಿಸಿ ವ್ರತವನ್ನು ಕೈಗೊಳ್ಳಬೇಕು. ಸಾಡೇಸಾತ್, ಅರ್ಧಾಷ್ಟಮ, ಪಂಚಮ, ಶನಿ ಸೇರಿದಂತೆ ಅನೇಕ ಇನ್ನಿತರ ಶನಿ ತೊಂದರೆಯಿಂದ ಪಾರಾಗಬಹುದು. ಈ ಪವಿತ್ರ ದಿನದಂದು ಹನುಮಂತನ ದೇವಾಲಯದಲ್ಲಿ, ಬ್ರಾಹ್ಮಣನಿಗೆ, ಇತರೆ ಸತ್ಪಾತ್ರರಿಗೆ ತೈಲದಾನ ಮಾಡುವುದರಿಂದ ಸಾಕಷ್ಟು ದೋಷಗಳು ಹಾಗೂ ತೊಂದರೆಗಳು ನಿವಾರಣೆಯಾಗುತ್ತವೆ. ಜೊತೆಗೆ ಶಾಶ್ವತ ಆಸ್ತಿಯನ್ನು ಸಹ ಖರೀದಿಸುವ ಸಾಧ್ಯತೆಗಳಿರುತ್ತವೆ ಎನ್ನುವ ನಂಬಿಕೆಯಿದೆ. ಒಟ್ಟಿನಲ್ಲಿ ವ್ಯಕ್ತಿ ಸಾಕಷ್ಟು ಶುಭ ಸಂಗತಿಗಳನ್ನು ಶನಿವಾರದ ಪ್ರದೋಷ ವ್ರತ ಆಚರಣೆ ಮಾಡುವುದರ ಮೂಲಕ ಪಡೆದುಕೊಳ್ಳುವನು