ಜನರಿಗೆ ಔಷಧ ಕೊಡದೆ ಕೊಲೆ ಮಾಡಿದ್ದಾರೆ : ಸರ್ಕಾರದ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ
ಬೆಂಗಳೂರು : ಸರ್ಕಾರದವರು ಸಂಪೂರ್ಣ ಮರ್ಡರ್ ಮಾಡಿದ್ದಾರೆ. ಜನರಿಗೆ ಔಷಧ ಕೊಡದೆ ಕೊಲೆ ಮಾಡಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸರ್ಕಾರದ ವಿರುದ್ಧ ಇಂದು ರಾಜ್ಯ ಕಾಂಗ್ರೆಸ್ ವಿಧಾನಸೌಧದ ಬಳಿ ಇರುವ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ಸಿದ್ದರಾಮಯ್ಯ, ಇಂದು ಸಾಂಕೇತಿಕವಾಗಿ ಪ್ರತಿಭಟನೆ ಮಾಡಿದ್ದೇವೆ. ನಾಯಕರು, ಸಂಸದರು, ಶಾಸಕರು ಧರಣಿ ನಡೆಸಿದ್ದೇವೆ.
ಕೋವಿಡ್ ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾಗಿದೆ. ಬೇರೆ ದೇಶಗಳನ್ನ ಸಮರ್ಥವಾಗಿ ತಡೆಗಟ್ಟುತ್ತಿವೆ. ಮೊದಲ ಅಲೆ ನವೆಂಬರ್, ಡಿಸೆಂಬರ್ ನಲ್ಲಿ ಬಂತು,
ಎರಡನೇ ಅಲೆ ಈಗ ಪ್ರಾರಂಭವಾಗಿದೆ. ಕೇಂದ್ರ ಸರ್ಕಾರ ತಜ್ಙರ ಸಲಹೆಗಳನ್ನ ಉದಾಸೀನ ಮಾಡ್ತು. ಅದರ ಪರಿಣಾಮ ಇಂತ ಕೆಟ್ಟ ಪರಿಸ್ಥಿತಿ ಬಂತು.
ಎರಡನೇ ಅಲೆ ಬಹಳ ವೇಗವಾಗಿ ಹರಡುತ್ತಿದೆ. ಮೊದಲ ಅಲೆ 60 ವರ್ಷ ಮೇಲ್ಪಟ್ಟವರಿಗೆ ಭಾದಿಸಿತ್ತು. ಇದು ಯುವಜನರನ್ನೇ ಬಲಿತೆಗೆದುಕೊಳ್ತಿದೆ.
ಇವರು ಸಿದ್ಧತೆ ಮಾಡಿಕೊಂಡಿದ್ದರೆ ಸಮಸ್ಯೆ ಆಗ್ತಿರಲಿಲ್ಲ. ಇವರು ಯಾವ ಸಿದ್ಧತೆಗಳನ್ನೂ ಮಾಡಿಕೊಳ್ಳಲಿಲ್ಲ. ಆಕ್ಸಿಜನ್ ರೆಡಿ ಇಟ್ಟುಕೊಳ್ಳಲಿಲ್ಲ.
ರೆಮಿಡಿಸಿವಿರ್ ಔಷಧಿ ಇಟ್ಕೊಳ್ಳಲಿಲ್ಲ. ಯುದ್ಧಕಾಲದಲ್ಲಿ ಶಸ್ತ್ರಾಭ್ಯಾಸ ಅನ್ನುವಂತೆ ಈಗ ಹೊರಟಿದ್ದಾರೆ ಎಂದು ಕೇಂದ್ರ, ರಾಜ್ಯದ ವಿರುದ್ಧ ಆಕ್ರೋಶ ಹೊರಹಾಕಿದರು.
ಇನ್ನು ಈಗ ಲಾಕ್ ಡೌನ್ ಮಾಡಿದ್ದಾರೆ. ಅದು ಕಟ್ಟುನಿಟ್ಟಾಗಿ ಲಾಕ್ ಡೌನ್ ಮಾಡಿಲ್ಲ. ಕಾರ್ಮಿಕರು ಕೆಲಸ ಕಳೆದುಕೊಂಡ್ರು, ಅವರಿಗೆ ಇವರು ಯಾವ ಪರಿಹಾರ ಕೊಟ್ಟಿಲ್ಲ.
ನಾನು ಆರ್ಥಿಕ ಪ್ಯಾಕೇಜ್ ಘೋಷಿಸಿ ಎಂದು ಒತ್ತಾಯಿಸಿದೆ, ಆದರೂ ಸರ್ಕಾರ ವಿಶೇಷ ಪ್ಯಾಕೇಜ್ ಕೊಟ್ಟಿಲ್ಲ.
ಯಡಿಯೂರಪ್ಪ ಯಾಕೆ ಸಿಎಂ ಆಗಿರಬೇಕು. ಸಚಿವರು ಯಾಕೆ ಮುಂದುವರಿಯಬೇಕು. ಸಮಸ್ಯೆ ಸರಿಮಾಡಲು ಆಗ್ದೆ ಯಾಕೆ ಇರಬೇಕು ಎಂದು ಪ್ರಶ್ನಿಸಿದರು.
ಹೆಲ್ತ್ ಮಿನಿಸ್ಟರ್ ಗೆ ರೆಕ್ಕೆಪುಕ್ಕ ಕತ್ತರಿಸಿದ್ದಾರೆ. ಆಕ್ಸಿಜನ್ ಸಿಗ್ತಿಲ್ಲ,ರೆಮಿಡಿಸಿವಿರ್ ಔಷಧಿ ಸಿಗ್ತಿಲ್ಲ. ಇವರು ಮೊದಲೇ ಸಿದ್ಧತೆ ಮಾಡಿಕೊಳ್ಳಬೇಕಲ್ವೇ..?
144 ಸೆಕ್ಷನ್ ಇರೋದ್ರಿಂದ ಸಣ್ಣದಾಗಿ ಮಾಡಿದ್ದೇವೆ. ಇವರು ಅಧಿಕಾರದಲ್ಲುಳಿಯಲು ನೈತಿಕತೆಯಿಲ್ಲ ಎಂದು ಕಿಡಿಕಾರಿದರು.
ಕೊರೊನ ಮಹಾಮಾರಿ:
ಕೊರೊನ ವೈರಸ್ ಗೆ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.