“ಸಿ.ಟಿ.ರವಿ ದುರಂಹಕಾರದ ಹೇಳಿಕೆ ನೀಡಿದ್ದಾರೆ” : ಸಿದ್ದರಾಮಯ್ಯ ಕಿಡಿ
ಬೆಂಗಳೂರು : “ನ್ಯಾಯಮೂರ್ತಿಗಳೇನು ಸರ್ವಜ್ಞರಲ್ಲ” ಎಂಬ ಸಿಟಿ ರವಿ ಹೇಳಿಕೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ಸಿ ಟಿ ರವಿ ದುರಂಹಕಾರದ ಹೇಳಿಕೆ ನೀಡಿದ್ದಾರೆ ಎಂದು ಕಿಡಿಕಾರಿದ್ದಾರೆ.
ನಗರದ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಉಡಾಫೆಯಿಂದ ದುರಂಹಕಾರದಿಂದ ಸಿ ಟಿ ರವಿ ಮಾತನಾಡಿದ್ದಾರೆ ಹೇಳಬಹುದು,
ಆದ್ರೆ ಕೇಂದ್ರದ ಸಚಿವರಾಗಿ ಉದ್ದಟನ ಹೇಳಿಕೆ ಕೊಟ್ಟಿದ್ದಾರೆ. ಸಿಎಂ ಆಗಿದ್ದವರು, ಕಾನೂನು ಸಚಿವರಾಗಿದ್ದವರು, ಸಿ ಟಿ ರವಿ ಮಟ್ಟಿಗೆ ಸದಾನಂದಗೌಡ ಇಳಿದು ಮಾತನಾಡಿರೋದು ನಾಚಿಕೆಗೇಡಿನ ಸಂಗತಿ. ಕೋರ್ಟ್ ಗಳು ಇರೋದು ಜನರ ಮೂಲಭೂತ ಕರ್ತವ್ಯಗಳನ್ನ ರಕ್ಷಣೆ ಮಾಡಲು, ಇದು ಇವರಿಗೆ ಗೊತ್ತಿಲ್ವಾ ಎಂದು ಪ್ರಶ್ನಿಸಿದ್ದಾರೆ.
ಇನ್ನು ಕೇಂದ್ರ ಸಚಿವರಾಗಿ ಸದಾನಂದಗೌಡ ಮುಂದುವರೆಯಬಾರದು. ಕೇಂದ್ರ ಸಚಿವ ಸ್ಥಾನದಿಂದ ಇಳಿಯಲಿ. ಸಿ ಟಿ ರವಿ ದುರಂಹಕಾರದ ಹೇಳಿಕೆ ನೀಡಿದ್ದಾರೆ. ಇಬ್ಬರು ಮಾತನಾಡಿಕೊಂಡು ಹೇಳಿಕೆ ಕೊಟ್ಟಿದ್ದಾರೆ. ನ್ಯಾಯ ವಿತರಣೆ ಮಾಡೋದು ನ್ಯಾಯಾಲಯಗಳು, ಆ ಕ್ಷೇತ್ರದಲ್ಲಿ ಅವರು ಪರಿಣಿತರಾಗಿದ್ದಾರೆ. ಹಾಗಾಗಿ ನ್ಯಾಯಾಧೀಶರಾಗಿರುತ್ತಾರೆ. ಇವರು ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಳ್ತಿದ್ದಾರೆ. ಪ್ರಜಾಪ್ರಭುತ್ವದ ಮೇಲೆ ಇವರಿಗೆ ನಂಬಿಕೆ ಇಲ್ಲ ಎಂದು ಕಿಡಿಕಾರಿದರು.
ರಾಜ್ಯದಲ್ಲಿ ಕೋವಿಡ್ ಪರೀಕ್ಷೆ ಕಡಿಮೆ ಮಾಡಬಾರದು. ಎಲ್ಲ ಕಡೆ ಕೊವಿಡ್ ಟೆಸ್ಟ್ ಮಾಡೋದನ್ನ ನಿಲ್ಲಿಸಿಬಿಟ್ಟಿದ್ದಾರೆ. ನಾನು ಮಾಹಿತಿ ಪಡೆದುಕೊಂಡಿದ್ದೇನೆ. ಪರೀಕ್ಷೆ ಹೆಚ್ಚಾದ್ರೆ ಮಾತ್ರ ನಿಯಂತ್ರಣ ಮಾಡಲು ಸಾಧ್ಯ. ಹೆಚ್ಚೆಚ್ಚು ಪರೀಕ್ಷೆ ಮಾಡಿದ್ರೆ ಪಾಸಿಟಿವ್ ಸೋಂಕಿತರನ್ನ ಪತ್ತೆ ಹಚ್ಚಲು ಸಾಧ್ಯ. ಪ್ರತಿಯೊಂದು ಕುಟುಂಬಕ್ಕೆ 10 ಕೆ ಜಿ ಅಕ್ಕಿ ಕೊಡಬೇಕು. ಇದೊಂದು ದಪ್ಪ ಚರ್ಮದ ಸರ್ಕಾರ ಎಂದು ವಾಗ್ದಾಳಿ ನಡೆಸಿದರು.