ನೇಗಿಲು ಹಿಡಿದು ಪಾದಯಾತ್ರೆಗೆ ಹೊರಟ ಹುಲಿಯಾ – ಡಿಕೆಶಿ
ಬೆಂಗಳೂರು : ಬೆಲೆ ಏರಿಕೆ ಖಂಡಿಸಿ ಸರ್ಕಾರದ ವಿರುದ್ಧ ರಾಜ್ಯ ಕಾಂಗ್ರೆಸ್ ಬೃಹತ್ ಪಾದಯಾತ್ರೆ ಹಮ್ಮಿಕೊಂಡಿದ್ದು, ಕೆಪಿಸಿಸಿ ಕಚೇರಿಯಿಂದ ಕಾಂಗ್ರೆಸ್ ನಾಯಕರು ದೇವನಹಳ್ಳಿಯತ್ತ ಹೊರಟಿದ್ದಾರೆ.
ದೇವನಹಳ್ಳಿಗೆ ಕಾಂಗ್ರೆಸ್ ನಾಯಕರನ್ನ ಕರೆದೊಯ್ಯಲು ಬಂದ ಬಸ್ ಗೆ ಸಿದ್ದರಾಮಯ್ಯ ಹಾಗೂ ಡಿಕೆಶಿವಕುಮಾರ್ ಪೂಜೆ ಮಾಡುವುದರ ಮೂಲಕ ಚಾಲನೆ ನೀಡಿದರು.
ಬಳಿಕ ಉಭಯರು ಹೆಗಲ ಮೇಲೆ ನೇಗಿಲನ್ನ ಹೊತ್ತಿಕೊಂಡು ಮುಂದೆ ಸಾಗಿದ್ರು.
ಇನ್ನು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಜನಧ್ವನಿ ಜಾಥಾ ವಾಹನದಲ್ಲಿ ಹೆಗಲ ಮೇಲೆ ನೇಗಿಲನ್ನ ಹೊತ್ತುಕೊಂಡು ಮೆರವಣಿಗೆ ಹೊರಟಿದ್ದಾರೆ.
ಇನ್ನು ದೇವನಹಳ್ಳಿಯಲ್ಲಿ ನಡೆಯಲಿರುವ ಸಮಾವೇಶದಲ್ಲಿ ಮಲ್ಲಿಕಾರ್ಜುನ ಖರ್ಗೆ, ಹೆಚ್.ಕೆ. ಪಾಟೀಲ್, ಜಿ. ಪರಮೇಶ್ವರ್,
ಕೆ.ಹೆಚ್. ಮುನಿಯಪ್ಪ, ದಿನೇಶ್ ಗುಂಡೂರಾವ್, ಕೃಷ್ಣ ಭೈರೇಗೌಡ, ಎಸ್.ಆರ್. ಪಾಟೀಲ್, ರಮೇಶ್ ಕುಮಾರ್, ಸೇರಿದಂತೆ ಪ್ರಮುಖ ನಾಯಕರು ಭಾಗಿಯಾಗಲಿದ್ದಾರೆ.