ಸುಧಾಕರ್ ಗಿಲ್ಟಿ ಮೈಂಡ್ ನಿಂದ ಹೇಳಿಕೆ ಕೊಟ್ಟಿದ್ದಾನೆ : ಸಿದ್ದರಾಮಯ್ಯ
ಬೆಂಗಳೂರು : ಸಚಿವ ಸುಧಾಕರ್ ಗಿಲ್ಟಿ ಮೈಂಡ್ ನಿಂದ ಹೇಳಿಕೆ ಕೊಟ್ಟಿದ್ದಾನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಸಿದ್ದರಾಮಯ್ಯ, ಹೆಚ್ ಡಿ ಕುಮಾರಸ್ವಾಮಿ, ಡಿ.ಕೆ.ಶಿವಕುಮಾರ್ ಏಕಪತ್ನಿವತ್ರಸ್ಥರಾ ಎಂಬ ಸುಧಾಕರ್ ಹೇಳಿಕೆಗೆ ಬುಧವಾರ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿ, 225 ಶಾಸಕರ ಬಗ್ಗೆ ಸುಧಾಕರ್ ಮಾತನಾಡಿದ್ದಾನೆ. ಮನೆಯವರಿಗೂ ಈಗ ಸಂಶಯ ಬಂದು ಬಿಡುತ್ತೆ. ಸುಧಾಕರ್ ಎಲ್ಲರ ಮೇಲೆ ಸಂಶಯ ಬರುವ ರೀತಿ ಮಾತನಾಡಿದ್ದಾನೆ. ಸದನ ನಡೆಯುವ ಸಮಯದಲ್ಲಿ ಈ ರೀತಿ ಮಾತನಾಡಿ ಸದನಕ್ಕೆ ಅಗೌರವ ತೋರಿದ್ದಾರೆ. ಅವನ ಸಿಡಿ ಇದೆ ಹೀಗಾಗಿ ವಿಲವಿಲ ಅಂತ ಓದಾಡುತ್ತಿದ್ದಾನೆ. ಗಿಲ್ಟಿ ಮೈಂಡ್ ನಿಂದ ಅವನು ಹೇಳಿಕೆ ಕೊಟ್ಟಿದ್ದಾನೆ ಎಂದು ಕಿಡಿಕಾರಿದ್ದಾರೆ.
ಇನ್ನ ಸಿಡಿ ಪ್ರಕರಣದ ಬಗ್ಗೆ ನಾವು ಕೋರ್ಟ್ ಗೆ ಹೋಗುತ್ತೇವೆ. ಕಾನೂನು ತಜ್ಞರ ಜೊತೆ ಚರ್ಚೆ ಮಾಡಿ ಕಾನೂನು ಹೋರಾಟ ಮುಂದುವರೆಸುತ್ತೇವೆ. ಸಿಎಂ ಹಾಗು ಸ್ಪೀಕರ್ ಗೆ ಪತ್ರ ಕೊಡುತ್ತೇವೆ. ಜನರಲ್ಲಿ ಈಗ ಎಲ್ಲರ ಬಗ್ಗೆ ಸಂಶಯ ಬಂದಿದೆ. ಹೀಗಾಗಿ ಹೈಕೋರ್ಟ್ ಹಾಲಿ ಮುಖ್ಯ ನ್ಯಾಯಮೂರ್ತಿ ನಿಗಾ ದಲ್ಲಿ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.