ಈಯಮ್ಮನನ್ನ ರಾಜ್ಯಸಭೆ ಸದಸ್ಯೆ ಮಾಡಿದ್ದು ಇದಕ್ಕೇನಾ : ಸಿದ್ದರಾಮಯ್ಯ
ಬೆಂಗಳೂರು : 15 ಕಮೀಷನ್ ನಿಂದ 5,495 ಕೋಟಿ ಬರಬೇಕು. ರಾಜ್ಯಕ್ಕೆ ಬರಬೇಕಾದ ಹಣ ಈ ಯಮ್ಮ ತಡೆದಿದ್ದಾರೆ. ಈಯಮ್ಮನನ್ನ ರಾಜ್ಯಸಭೆ ಸದಸ್ಯೆ ಮಾಡಿದ್ದು ಇದಕ್ಕೇನಾ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಸಚಿವೆ ನಿರ್ಮಲಾ ಸೀತಾರಾಮನ್ ಆರೋಪ ವಿಚಾರದ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಅವರು, 15 ಕಮೀಷನ್ ನಿಂದ 5,495 ಕೋಟಿ ಬರಬೇಕು. ರಾಜ್ಯಕ್ಕೆ ಬರಬೇಕಾದ ಹಣ ಈ ಯಮ್ಮ ತಡೆದಿದ್ದಾರೆ ಎಂದು ಆರೋಪಿಸಿದರು.
ಇನ್ನು ನಾನೇನು ಬೇರೆ ಕಡೆಯಿಂದ ಮಾಹಿತಿ ಪಡೆದ್ನಾ..? ನಾನು ಆಯೋಗದಿಂದಲೇ ಮಾಹಿತಿ ಪಡೆದಿದ್ದು, ಹಾಗಾದರೆ 15 ಪೇ ಕಮೀಷನ್ ಸುಳ್ಳು ಹೇಳುತ್ತಾ..? ಇದರ ಬಗ್ಗೆ ಯಡಿಯೂರಪ್ಪ ಕೂಡ ಮಾತನಾಡಿಲ್ಲ, ಒಂದು ಪತ್ರ ಬರೆದು ಸುಮ್ಮನಾದ್ರಾ(?) ಈಯಮ್ಮನನ್ನ ರಾಜ್ಯಸಭೆ ಸದಸ್ಯೆ ಮಾಡಿದ್ದು ಇದಕ್ಕೇನಾ ಎಂದು ಪ್ರಶ್ನಿಸಿದರು.
ಮನಮೋಹನ್ ಸಿಂಗ್ ಅವಧಿಯಲ್ಲಿ ಡಿಸೇಲ್ ಗೆ 3.45 ಪೈಸೆ ಸೆಸ್ ಇತ್ತು. ಆದರೆ, ಈಗ 31.84 ಪೈಸೆಗೆ ಏರಿಸಿದ್ದು ಯಾಕೆ..? ಆಗ ಪೆಟ್ರೋಲ್ ಮೇಲೆ 9.25 ಪೈಸೆ ಇತ್ತು. ಇವತ್ತು 32.92 ಪೈಸೆ ಸೆಸ್ ಹಾಕಿದ್ದಾರೆ. ಇದು ನಿರ್ಮಲಾ ಸೀತಾರಾಮನ್ ಗೆ ಗೊತ್ತಿಲ್ವೆ..? ಸೆಸ್ ತೆಗೆಯಿರಿ ಕಡಿಮೆ ಆಗುತ್ತೆ. ರಾಜ್ಯದವರು ಸೆಸ್ ಹಾಕಿದ್ದಾರೆ. ಅವರಿಗೂ ಕಡಿಮೆ ಮಾಡಿ ಅಂತ ಹೇಳುತ್ತೇನೆ. ಕೇಂದ್ರ ಸೆಸ್ ಹಾಕಿದ್ದು ಯಾಕೆ ಎಂದು ವಾಗ್ದಾಳಿ ನಡೆಸಿದರು.