ನಾನು ನಿಮ್ಮ ಖುರ್ಚಿಯಲ್ಲಿ ಕೂರುವ ದಿನ ದೂರವಿಲ್ಲ : ಸಿಎಂಗೆ ಸಿದ್ದರಾಮಯ್ಯ ಟಾಂಗ್
ಬೆಂಗಳೂರು : ನಾನು ನಿಮ್ಮ ಖುರ್ಚಿಯಲ್ಲಿ ಕೂರುವ ದಿನ ದೂರವಿಲ್ಲ. ಮುಂದಿನ ಬಾರಿ ಜನ ಮತ್ತೆ ಅವಕಾಶ ಕೊಡ್ತಾರೆ. ಆ ದಿನ ಶೀಘ್ರವೇ ಬರಲಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸಿಎಂ ಬಿ.ಎಸ್.ವೈಗೆ ಟಾಂಗ್ ನೀಡಿದ್ದಾರೆ.
ಇಂದು ಸದನದಲ್ಲಿ ಬಜೆಟ್ ಮೇಲೆ ಚರ್ಚೆ ನಡೆಯಿತು. ಈ ವೇಳೆ ಮಾತನಾಡುತ್ತಾ ಸಿದ್ದರಾಮಯ್ಯ ರಾಜಾಹುಲಿ ಬಜೆಟ್ ಅನ್ನು ತೀವ್ರವಾಗಿ ಟೀಕಿಸಿದ್ರು. ರಾಜ್ಯದ ಇತಿಹಾಸದಲ್ಲಿ ಇಂತಹ ಕೆಟ್ಟ ಬಜೆಟ್ ಅನ್ನು ನೋಡಿರಲಿಲ್ಲ ಎಂದು ಗುಡುಗಿದರು.
ಬಜೆಟ್ ನಲ್ಲಿ ಯಾವಾಗಲು ಖರ್ಚು-ವೆಚ್ಚ ಸಮತೋಲನವಿರಬೇಕು, ಆದರೆ ಈ ಬಾರಿ ಬಜೆಟ್ ವೆಚ್ಚವೇ ಅಧಿಕವಾಗಿದೆ ಎಂದ ಸಿದ್ದರಾಮಯ್ಯ, 2004-05ರಲ್ಲಿ ನಾನು ಹಣಕಾಸು ಮಂತ್ರಿಯಾಗಿದ್ದಾಗಿನಿಂದ ಇಲ್ಲಿಯವರೆಗೂ ಖರ್ಚು ವೆಚ್ಚಗಳನ್ನ ಮೇಂಟೆನ್ ಮಾಡಿದೆವು.
ಆದರೆ ಈ ಬಾರಿ ಎಲ್ಲಾ ಏರುಪೇರಾಗಿದ್ದು, ಬಜೆಟ್ ಗಾಗಿ 75 ಸಾವಿರ ಕೋಟಿ ರೂ. ಸಾಲ ತೆಗೆದುಕೊಳ್ಳಲಾಗಿದೆ. ಇದು ಸರ್ಕಾರದ ಮೇಲೆ ಪರಿಣಾಮ ಬೀರುತ್ತೆ.
ಇಂತಹ ಕೆಟ್ಟ ಬಜೆಟ್ ಅನ್ನ ನಾನು ಹಿಂದೆಂದೂ ನೋಡಿರಲಿಲ್ಲ ಅಂತ ಟೀಕೆ ಮಾಡಿದ್ರು.
ಈ ವೇಳೆ ಎದ್ದು ನಿಂತ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೊರೊನಾದಂತಹ ಪರಿಸ್ಥಿತಿಯಲ್ಲಿ ನನ್ನ ಸ್ಥಾನದಲ್ಲಿ ನೀವಿದ್ದಿದ್ದರೇ ಏನು ಮಾಡ್ತಿದ್ರಿ ಎಂದು ಪ್ರಶ್ನೆ ಮಾಡಿದ್ರು.
ಇದಕ್ಕೆ ತಮ್ಮದೇ ಶೈಲಿಯಲ್ಲಿ ಉತ್ತರಿಸಿದ ಸಿದ್ದರಾಮಯ್ಯ, ನಿಮ್ಮ ಸ್ಥಾನವನ್ನ ನೀವು ಬಿಟ್ಬಿಡಿ. ಆಗ ನಾನು ಅಲ್ಲಿದ್ದು ಹೇಳ್ತೀನಿ ಎಂದು ಬಿಎಸ್ ವೈಗೆ ಟಾಂಗ್ ನೀಡಿದ್ರು.
ಅಲ್ಲದೆ ನಾವು ನಿಮ್ಮ ಖುರ್ಚಿಯಲ್ಲಿ ಕೂರುವ ದಿನ ದೂರವಿಲ್ಲ. ಮುಂದಿನ ಬಾರಿ ಜನ ಮತ್ತೆ ಅವಕಾಶ ನೀಡುತ್ತಾರೆ. ಆ ದಿನ ಶೀಘ್ರವೇ ಬರಲಿದೆ ಎಂದು ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ರು.