ಮನೆಕೆಲಸದಾಕೆಗೆ ಚಿತ್ರಹಿಂಸೆ ಕೊಟ್ಟು ಕೊಟ್ಟು ಕೊಂದೇ ಬಿಟ್ಟಳು ಈ ರಾಕ್ಷಸಿ..!
ಸಿಂಗಾಪುರ್: ಮನೆಕೆಲಸದಾಕೆಗೆ ಮನೆಯ ಯಜಮಾನಿ ಊಟ ತಿಂಡಿ ನೀಡದೆ ಹೊಡೆದು ಬಡೆದು ಚಿತ್ರಹಿಂಸೆ ನೀಡಿ ಕೊಲೆ ಮಾಡಿರುವ ಅಮಾನವೀಯ ಘಟನೆ ಸಿಂಗಾಪುರ್ ನಲ್ಲಿ ನಡೆದಿದೆ. 40 ವರ್ಷದ ಮ್ಯಾನ್ಮಾರ್ ಮೂಲದ ಪಿಯಾಂಗ್ ನಾ ಡಾನ್ ಮೃತಮಹಿಳೆಯಾಗಿದ್ದಾರೆ. ಮ್ಯಾನ್ಮಾರ್ ನಿಂದ ಸಿಂಗಪುರಕ್ಕೆ ವಲಸೆ ಬಂದು ಮನೆಕೆಲಸ ಮಾಡಿಕೊಂಡಿದ್ದ ಈಕೆಗೆ 24 ವರ್ಷದ ಗಾಯತ್ರಿ ಮುರುಗಯನ್ ಎಂಬ ಮನೆಯೊಡತಿ ಚಿತ್ರಹಿಂಸೆ ನೀಡಿ ಕೊನೆಗೆ ಕೊಂದು ಇದೀಗ ಪೊಲೀಸರ ಅತಿಥಿಯಾಗಿದ್ದಾಳೆ.
ಸರ್ದಾರ್ ಪಟೇಲ್ ಸ್ಟೇಡಿಯಂ ಅಲ್ಲ.. ನರೇಂದ್ರ ಮೋದಿ ಸ್ಟೇಡಿಯಂ
ಪಿಯಾಂಗ್ ಕೆಲಸಕ್ಕೆ ಸೇರಿದ 5 ತಿಂಗಳ ಬಳಿಕ ಗಾಯತ್ರಿ ಆಕೆಗೆ ಟಾರ್ಚರ್ ಕೊಡಲು ಶುರು ಮಾಡಿದ್ದಾಳೆ. ಊಟಕೊಡದೆ, ಮನಬಂದತೆ ಥಳಿಸುವುದು, ಗುದ್ದುವುದು, ಕಾಲಲ್ಲಿ ಒದೆಯುವುದು, ತುಳಿಯುವುದು ಮಾಡುತ್ತಿದ್ದಳಂತೆ. ಅಲ್ಲದೇ ಈ ಟಾರ್ಚರ್ ಸಹಿಸಲಾಗದೇ ಮತ್ತೊಂದೆಡೆ ಊಟ ತಿಂಡಿ ಸಿಗದೇ ಪಿಯಾಂಗ್ ಕಸದ ಬುಟ್ಟಿಯಲ್ಲಿದ್ದ ಆಹಾರವನ್ನು ತಿನ್ನುತ್ತಿದ್ದಳು ಎಂದೂ ಸಹ ತಿಳಿದುಬಂದಿದೆ.
ರಾಜ್ಯ ದೇಹದ್ರಾಡ್ರ್ಯ ಸಂಸ್ಥೆಗೆ ನೂತನ ಪದಾಧಿಕಾರಿಗಳ ನೇಮಕ
ಹೀಗೆಯೇ ದಿನಗಳೆದಂತೆಲ್ಲಾ ಈಕೆಯ ರಾಕ್ಷಸಿಯ ಪ್ರೌವೃತ್ತಿ ಹೆಚ್ಚಾಗುತ್ತಲೇ ಹೋಗಿದೆ. ಒಂದು ದಿನ ಗಾಯತ್ರಿ ಮೆದುಳಿಗೆ ಹಾಗೂ ಕುತ್ತಿಗೆಗೆ ತೀವ್ರವಾಗಿ ಗಾಯ ಮಾಡಿ ಊಟ ನೀಡದೆ ಕಿಟಕಿಗೆ ಕಟ್ಟಿ ಹಾಕಿದ್ದಾಳೆ. ಈ ನೋವನ್ನು ತಾಳಲಾರದೆ ಪಿಯಾಂಗ್ ನೆರಳಿ ನರಳಿ ಪ್ರಾಣ ಬಿಟ್ಟಿದ್ದಾಳೆ. ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಗಾಯತ್ರಿಯನ್ನ ಪೊಲೀಸರು ಅರೆಸ್ಟ್ ಮಾಡಿ ಜೈಲಿಗೆ ತಳ್ಳಿದ್ದಾರೆ. ಇನ್ನೂ ಈಕೆ ವಿರುದ್ಧ 87 ಪ್ರಕರಣ ದಾಖಲಾಗಿದ್ದು, 28 ಆರೋಪಗಳನ್ನ ಮಾತ್ರವೇ ಒಪ್ಪಿಕೊಂಡಿದ್ದಾಳೆ. ಅಲ್ಲದೇ ಈಕೆಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಲಾಗಿದೆ.
ಡ್ರಗ್ಸ್ ದಂಧೆ : ಬಿಜೆಪಿ ಮುಖಂಡ ರಾಕೇಶ್ ಸಿಂಗ್ ಅರೆಸ್ಟ್