ಹಾವು ಹಿಡಿಯಲು ಬಂದವರು ಪ್ರಾಣಾಪಾಯದಿಂದ ಪಾರು
ಹಾಸನ : ಹಾವು ಹಿಡಿಯಲು ಬಂದವರು ಹಾವಿನ ಕಡಿತದಿಂದ ಸ್ವಲ್ಪದರಲ್ಲಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಹಾಸನದಲ್ಲಿ ನಡೆದಿದೆ.
ಹಾಸನದ ಪಶು ವೈದ್ಯಕೀಯ ಕಾಲೇಜಿನ ಹಾಸ್ಟೆಲ್ ಒಳಗೆ ನಾಗರಹಾವು ನುಗ್ಗಿತ್ತು.
ಇದರಿಂದ ವಿದ್ಯಾರ್ಥಿಗಳು ಆತಂಕಗೊಂಡಿದ್ದರು. ಮಾಹಿತಿ ನೀಡುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಸ್ನೇಕ್ ಶೇಷಪ್ಪ, ಬರಿಗೈಯಲ್ಲಿ ನಾಗರಹಾವನ್ನು ಹಿಡಿದರು.
ಕೈಯಲ್ಲಿ ಹಿಡಿದು ತರಬೇಕಾದರೆ ಶೇಷಪ್ಪ ಅವರಿಗೆ ಹಾವು ಕಚ್ಚಲು ಮುಂದಾಗಿದ್ದು, ಕೂದಲೆಳೆ ಅಂತರದಲ್ಲಿ ಸ್ನೇಕ್ ಶೇಷಪ್ಪ ಪಾರಾಗಿದ್ದಾರೆ.
ನಂತರ ಹಾವನ್ನು ಕೆಳಗೆ ಬಿಟ್ಟು ಸ್ಟಿಕ್ ಮೂಲಕ ಹಿಡಿದು ಗೆಂಡೆಕಟ್ಟೆ ಅರಣ್ಯಕ್ಕೆ ಬಿಟ್ಟಿದ್ದಾರೆ.