ಸಿದ್ದರಾಮಯ್ಯ ಒಂತರಾ ಜಂಗ್ಲಿ ಇದ್ದಂಗೆ : ಸೊಗಡು ಶಿವಣ್ಣ ಕಿಡಿ
ತುಮಕೂರು : ಸಿದ್ದರಾಮಯ್ಯ ಒಂತರಾ ಜಂಗ್ಲಿ ಇದ್ದಂಗೆ, ಎಲ್ಲಾ ಕಡೆ ತಿರುಗಿ ಹತಾಶನಾಗಿದ್ದಾನೆ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಕಿಡಿಕಾರಿದ್ದಾರೆ.
ಆರ್ ಎಸ್ ಎಸ್ ತಾಲಿಬಾನ್ ಇದ್ದಂತೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ತುಮಕೂರಿನಲ್ಲಿ ತಿರುಗೇಟು ನೀಡಿದ ಸೊಗಡು ಶಿವಣ್ಣ, ಸಿದ್ದರಾಮಯ್ಯ ಮೀರ್ ಸಾದಿಕ್ ಇದ್ದ ಹಾಗೆ.
ಅವನಿಗೆ ಮಾನ ಮರ್ಯಾದೆ ಏನು ಇಲ್ಲ, ಇದ್ದಿದ್ರೆ ಹೀಗೆ ಮಾತನಾಡುತ್ತಿರಲಿಲ್ಲ. ಜೆಡಿಎಸ್ ನಲ್ಲಿ ಇದ್ದಾಗ ಕಾಂಗ್ರೆಸ್ ಅವರನ್ನ ಜೈಲಿಗೆ ಹಾಕಿಸ್ತೀನಿ ಅಂತಿದ್ದ.
ಕಾಂಗ್ರೆಸ್ ಗೆ ಹೋಗಿ ಮುಖ್ಯಮಂತ್ರಿಯಾದ. ತನ್ನ ಅಧಿಕಾರದ ಅವಧಿಯಲ್ಲಿ ಜಾತಿ ಜಾತಿಗಳನ್ನು ವಿಭಜನೆ ಮಾಡಿದ.
ಹಿಂದುಗಳನ್ನು ಒಡೆಯುವುದು, ಮುಸಲ್ಮಾನರನ್ನು ಓಲೈಸುವುದನ್ನ ಮಾಡಿದ್ದಾನೆ ಎಂದು ಏಕವಚನದಲ್ಲಿ ದಾಳಿ ಮಾಡಿದ್ದಾರೆ.
ಇದೇ ವೇಳೆ ಆರ್ ಎಸ್ ಎಸ್ ಗೆ ನೂರು ವರ್ಷದ ಇತಿಹಾಸ ಇದೆ ಎಂದ ಸೊಗಡು ಶಿವಣ್ಣ, ಆರ್ ಎಸ್ ಎಸ್ ದೇಶಕ್ಕೆ ಪ್ರಾಣತ್ಯಾಗ ಮಾಡಿದೆ.
ಆರ್ ಎಸ್ ಎಸ್ ಹುಟ್ಟಿದಾಗ ಸಿದ್ದರಾಮಯ್ಯ ಹುಟ್ಟೇ ಇರಲಿಲ್ಲ. ಸಿದ್ದರಾಮಯ್ಯ ಒಂತರಾ ಜಂಗ್ಲಿ ಇದ್ದಂಗೆ, ಎಲ್ಲಾ ಕಡೆ ತಿರುಗಿ ಹತಾಶನಾಗಿದ್ದಾನೆ ಎಂದು ವ್ಯಂಗ್ಯವಾಡಿದರು.