ಕುಡಿದ ಮತ್ತಿನಲ್ಲಿ ಪೊರಕೆಯಲ್ಲಿ ಹೊಡೆದು ಅತ್ತೆಯ ಕೊಲೆಗೈದ ಅಳಿಯ murderd saaksha tv
ಚಿಕ್ಕಮಗಳೂರು : ಮದ್ಯದ ನಶೆಯಲ್ಲಿ ಅಳಿಯನೇ ಅತ್ತೆಯನ್ನ ಪೊರೆಕೆಯಲ್ಲಿ ಹೊಡೆದು ಕೊಲೆ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಕಿಚ್ಚಬ್ಬಿ ಗ್ರಾಮದಲ್ಲಿ ನಡೆದಿದೆ. 60 ವರ್ಷದ ಕಾಳಮ್ಮ ಮೃತರಾಗಿದ್ದು, 35 ವರ್ಷದ ರಮೇಶ್ ಕೊಲೆ ಆರೋಪಿಯಾಗಿದ್ದಾನೆ,
ಹಳ್ಳಿ ಹಳ್ಳಿಗಳ ಮೇಲೆ ಕೆಲಸಕ್ಕೆ ಹೋಗುವ ರಮೇಶ್ ಭಾನುವಾರ ಅತ್ತೆ ಕಾಳಮ್ಮ ಅವರ ಮನೆಗೆ ಬಂದಿದ್ದಾರೆ.
ಬಂದ ಕೂಡಲೇ ಜಗಳ ತೆಗೆದು ಸುಮ್ಮನಾಗಿದ್ದ ರಮೇಶ್ ಬಳಿಕ ಸಂಜೆ ಆತನೇ ಹೋಗಿ 5 ಕ್ವಾಟರ್ ಎಣ್ಣೆ, 1 ಕೆ.ಜಿ. ಚಿಕನ್ ಹಾಗೂ ಪೋರ್ಕ್ ತಂದಿದ್ದನು.
ರಾತ್ರಿ ಆರೋಪಿ ರಮೇಶ್, ಪತ್ನಿ ಮಂಜುಳಾ ಹಾಗೂ ಅತ್ತೆ ಕಾಳಮ್ಮ ಎಲ್ಲರೂ ಕೂತು ಮದ್ಯ ಸೇವಿಸಿ ಊಟ ಮಾಡಿದ್ದಾರೆ.
ಬಳಿಕ ಮತ್ತೆ ಮಾತಿಗೆ ಮಾತು ಬೆಳೆದು ಇಬ್ಬರು ನಡುವೆ ಜಗಳ ನಡೆದಿದೆ. ಈ ವೇಳೆ ಆರೋಪಿ ರಮೇಶ್ ಮೃತ ಕಾಳಮ್ಮ ಮೇಲೆ ಹಲ್ಲೆ ಮಾಡಿ ರಾತ್ರಿ ಹೊರಗಡೆ ತಳ್ಳಿದ್ದಾನೆ.
ಇತ್ತ ಕಾಳಮ್ಮ ಇಡೀ ರಾತ್ರಿ ಚಳಿಯಲ್ಲಿ ಹೊರಗಿದ್ದು ಸಾವನ್ನಪ್ಪಿದ್ದಾಳೆ. ಬೆಳಗ್ಗೆ ವಿಷಯ ತಿಳಿದು ರಮೇಶ್ ನಾಪತ್ತೆಯಾಗಿದ್ದು, ಸದ್ಯ ಪೊಲೀಸರು ಆರೋಪಿ ರಮೇಶ್ನನ್ನ ಬಂಧಿಸಿದ್ದಾರೆ.
ಈ ಸಂಬಂಧ ಬಾಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.