ಮುತ್ತು ಕೊಡೋಳು ಬಂದಾಗ ತುತ್ತುಕೊಟ್ಟವಳನ್ನೇ ಕೊಂದ
ಯಾದಗಿರಿ: ಹೆಂಡತಿಯ ಮೇಲಿನ ವ್ಯಾಮೋಹಕ್ಕೆ ತಾಯಿಯನ್ನೇ ಕೊಲೆಮಾಡಿರುವ ಘಟನೆ ಯಾದಗಿರಿ ಜಿಲ್ಲೆಯ ಶಹಪೂರ ತಾಲೂಕಿನ ಶಿರವಾಳ ಗ್ರಾಮದಲ್ಲಿ ನಡೆದಿದೆ.
ರಾಚಮ್ಮ ಮೃತ ದುರ್ದೈವಿ. ನಾಗಣ್ಣ ಕೊಲೆ ಆರೋಪಿಯಂದು ಗುರುತಿಸಲಾಗಿದೆ. ಭೀಮರಾಯನ ಗುಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಾಗಣ್ಣ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ನಿವಾಸಿಯಾಗಿದ್ದು, ತನ್ನ ಸ್ನೇಹಿತರೊಂದಿಗೆ ಸೇರಿ ತಾಯಿಯನ್ನು ಕೊಲೆ ಮಾಡಿದ್ದಾನೆ.
ತಾಯಿ, ಹೆಂಡತಿಯೊಂದಿಗೆ ಸದಾ ಜಗಳವಾಡುತ್ತಾಳೆಂದು, ನಾಗಣ್ಣ ತನ್ನ ಸ್ನೇಹಿತರೊಂದಿಗೆ ಸೇರಿ ತಾಯಿನ್ನು ಶಿರವಾಳ ಗ್ರಾಮದ ಸನಿಹದಲ್ಲಿರುವ ಭೀಮಾನದಿಗೆ ತಳ್ಳಿ ಹತ್ಯೆಗೈದಿದ್ದಾನೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿ ನಾಗಣ್ಣ ಹಾಗೂ ಆತನ ಸ್ನೇಹಿತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇದೀಗ ಪೊಲೀಸರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.