ಶಿವಶಂಕರ್ ಮಾಸ್ಟರ್ ನೆರವಿಗೆ ಬಂದ ಸೋನು ಸೂದ್..!
ತಮ್ಮ ಸಾಮಾಜಿಕ ಕೆಲಸಗಳಿಂದ್ಲೇ ಜನರ ಪಾಲಿಗೆ ರಿಯಲ್ ಹೀರೋ ಆಗಿರುವ ಸೋನು ಸೂದ್ ಸದ್ಯ ಸಿನಿಮಗಳಿಗಿಂತ ಹೆಚ್ಚು ಮತ್ತಿರರಿಗೆ ನೆರವಾಗುತ್ತಲೇ ಜನಮನ ಸೆಳೆಯುತ್ತಾ ಬಂದಿದ್ದಾರೆ.. ಈ ನಡುವೆ ತೀವ್ರ ಕೊರೊನಾಕ್ಕೆ ತುತ್ತಾಗಿ ತೀವ್ರ ಗಂಭೀರ ಸ್ಥಿತಿಯಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತೆಲುಗು, ತಮಿಳಿನ ಜನಪ್ರಿಯ ನೃತ್ಯ ನಿರ್ದೇಶಕ ಶಿವಶಂಕರ್ ಮಾಸ್ಟರ್ ತೀವ್ರ ಸಂಕಷ್ಟದಲ್ಲಿದ್ದಾರೆ. ಹೈದರಾಬಾದ್ ನ ಎಐಜಿ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸ್ತಾಯಿದ್ದಾರೆ. ಅವರಿಗೆ ಮಾತ್ರವೇ ಅಲ್ಲದೆ ಅವರ ಕುಟುಂಬ ಸದಸ್ಯರಿಗೂ ಕೊರೊನಾ ಸೋಂಕು ತಗುಲಿದೆ. ಕುಟುಂಬದವರು ಆರ್ಥಿಕ ಸಂಕಷ್ಟದಲ್ಲಿದ್ದಾರೆ.
ಶಿವಶಂಕರ್ ಸ್ಥಿತಿಯ ಬಗ್ಗೆ ವಂಶಿ ಕಾಕ ಎಂಬುವರು ಟ್ವೀಟ್ ಮಾಡಿ ಸಹಾಯಕ್ಕೆ ಮನವಿ ಮಾಡಿದ್ದರು. ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ಸೋನು ಸೂದ್, ”ನಾನು ಈಗಾಗಲೇ ಶಿವ ಶಂಕರ್ ಅವರ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದು, ಅಗತ್ಯ ನೆರವನ್ನು ನೀಡುತ್ತಿದ್ದೇನೆ. ಅವರ ಜೀವ ಉಳಿಸಲು ನನ್ನ ಕೈಲಾದ ಸಹಾಯ ಮಾಡುತ್ತೇನೆ” ಎಂದಿದ್ದಾರೆ. ಶಿವಶಂಕರ್ ಶ್ವಾಸಕೋಶಕ್ಕೆ ಕೋವಿಡ್ನಿಂದ ಹಾನಿಯಾಗಿದ್ದು ವೈದ್ಯರು ಐಸಿಯುವಿನಲ್ಲಿಟ್ಟು ಚಿಕಿತ್ಸೆ ನೀಡುತ್ತಿದ್ದಾರೆ. ಶಿವಶಂಕರ್ ಅವರ ದೊಡ್ಡ ಮಗನಿಗೂ ಕೋವಿಡ್ ಆಗಿದ್ದು, ಅವರ ಆರೋಗ್ಯ ಪರಿಸ್ಥಿತಿಯೂ ಗಂಭೀರವಾಗಿದೆ. ಮನೆಯ ಇನ್ನಿಬ್ಬರು ಸದಸ್ಯರಿಗೂ ಕೋವಿಡ್ ಆಗಿದ್ದು ಅವರು ಕ್ವಾರಂಟೈನ್ ಆಗಿದ್ದಾರೆ. ಎಲ್ಲರನ್ನೂ ಕಿರಿಯ ಮಗ ಅಜಯ್ ಕೃಷ್ಣ ಮಾತ್ರವೇ ನೋಡಿಕೊಳ್ಳುತ್ತಿದ್ದಾರೆ. ಚಿಕಿತ್ಸೆ ವೆಚ್ಚ ಹೆಚ್ಚಾಗುತ್ತಿರುವ ಕಾರಣ ಆರ್ಥಿಕ ಸಹಾಯಕ್ಕೆ ಕುಟುಂಬ ಮನವಿ ಮಾಡಿದೆ.
ಉತ್ತರಾರ್ಧದಲ್ಲಿ ಲಕ್ಕಪ್ಪಗೌಡರು ಲಗುಭಗೆಯಲ್ಲಿ ಹೇಳುವ ಅಮೃತ ಅಪಾರ್ಟ್ಮೆಂಟ್ಸ್ ಮರ್ಡರ್ ಕಥೆ:
ಶಿವಶಂಕರ್ ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ ಜನಪ್ರಿಯ ನೃತ್ಯ ನಿರ್ದೇಶಕ. ಈವರೆಗೆ ಸುಮಾರು 800 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ನೃತ್ಯ ನಿರ್ದೇಶನಕ್ಕಾಗಿ ರಾಷ್ಟ್ರ ಹಾಗೂ ರಾಜ್ಯ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅಷ್ಟೇ ಅಲ್ಲ ಜನಪ್ರಿಯ ನೃತ್ಯ ನಿರ್ದೇಶಕ ಮತ್ತು ನಟ , ನಿರ್ದೇಶಕ ರಾಘವ್ ಲಾರೆನ್ಸ್ಗೆ ಗುರು ಸಹ ಆಗಿರುವ ಶಿವಶಂಕರ್ ತಮಿಳು ಹಾಗೂ ತೆಲುಗಿನಲ್ಲಿ ಹಲವು ಸಿನಿಮಾಗಳಲ್ಲಿ ನಟನೆ ಸಹ ಮಾಡಿದ್ದಾರೆ. ಜೊತೆಗೆ ಕೆಲವು ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಸಹ ಭಾಗವಹಿಸಿದ್ದಾರೆ.