ಜಾನಿ ಮಾಸ್ಟರ್ ಗೆ ಮಹೀಂದ್ರಾ ಥಾರ್ ಗಿಫ್ಟ್ ನೀಡಿದ ಕಿಚ್ಚ ಸುದೀಪ್
ಕಿಚ್ಚ ಸುದೀಪ್ ಗೆಳೆತನಕ್ಕೆ ಯಾವಾಗಲೂ ಮೊದಲ ಪ್ರಾಶಸ್ತ್ಯವನ್ನ ನೀಡುತ್ತಾರೆ. ಒಮ್ಮೆ ಫ್ರೆಂಡ್ಶಿಪ್ ಮಾಡಿದರೆ ಅವರ ಜತೆ ತುಂಬಾನೇ ಕ್ಲೋಸ್ ಆಗಿ ನಡೆದುಕೊಳ್ಳುತ್ತಾರೆ. ಇದಕ್ಕೆ ತಾಜಾ ಉದಾಹರಣೆ ವಿಕ್ರಾಂತ್ ರೋಣ’ ಚಿತ್ರದ ನೃತ್ಯ ನಿರ್ದೇಶಕ ಜಾನಿ ಮಾಸ್ಟರ್ಗೆ ಸುದೀಪ್ ಮಹಿಂದ್ರಾ ಥಾರ್ ಗಿಫ್ಟ್ ನೀಡಿದ್ದಾರೆ. ಈ ಫೋಟೋ ಹಂಚಿಕೊಂಡಿರುವ ಜಾನಿ ಅವರು ಕಿಚ್ಚ ಸುದೀಪ್ ಗೆ ಧನ್ಯವಾದ ತಿಳಿಸಿದ್ದಾರೆ. ನಿಗೆ ಧನ್ಯವಾದ ಹೇಳಿದ್ದಾರೆ. ಈ ಪೋಸ್ಟ್ ನೋಡಿದ ಅಭಿಮಾನಿಗಳು ಕಿಚ್ಚ ಅವರನ್ನು ಬಾಯ್ತುಂಬ ಹೊಗಳಿದ್ದಾರೆ.
Thank You for the Gift @KicchaSudeep sir & family ❤
The way you Treat me & Take care of me make me feel blessed 😇
Will always love you Sir, Happy to have you in my life 🙏🏼 pic.twitter.com/0U2Ldpv32A
— Jani Master (@AlwaysJani) March 25, 2022
ಜಾನಿ ಮಾಸ್ಟರ್ ಗೆ ಕನ್ನಡದ ಹಲವು ಸಿನಿಮಾಗಳಲ್ಲಿ ನೃತ್ಯ ನಿರ್ದೇಶಕನಾಗಿ ಕೆಲಸ ಮಾಡಿದ್ದಾರೆ. ನಮ್ಮ ಚಿತ್ರರಂಗದ ಜತೆ ಒಳ್ಳೆಯ ನಂಟಿದೆ. ಪುನೀತ್ ನಟನೆಯ ‘ರಾಜಕುಮಾರ’, ‘ನಟಸಾರ್ವಭೌಮ’, ‘ಯುವರತ್ನ’ ಸಿನಿಮಾದ ಕೆಲ ಹಾಡುಗಳಿಗೆ ಜಾನಿ ಅವರು ಕೊರಿಯೋಗ್ರಫಿ ಮಾಡಿದ್ದಾರೆ. ಟಾಲಿವುಡ್ನ ಅನೇಕ ಹಿಟ್ ಹಾಡುಗಳಿಗೆ ಇವರ ನೃತ್ಯ ನಿರ್ದೇಶನ ಇದ್ದೇ ಇರುತ್ತದೆ. ‘ವಿಕ್ರಾಂತ್ ರೋಣ’ ಸಿನಿಮಾದಲ್ಲಿನ ಹಾಡಿಗೆ ಜಾನಿ ಅವರು ಡ್ಯಾನ್ಸ್ ಕೋರಿಯೋಗ್ರಫಿ ಮಾಡಿದ್ದಾರೆ. ವಿಶೇಷ ಎಂದರೆ, ಸುದೀಪ್ ಅವರು ಜಾನಿಗೆ ಪ್ರೀತಿಯಿಂದ ಕಾರು ಗಿಫ್ಟ್ ಮಾಡಿದ್ದಾರೆ.
‘ಕಿಚ್ಚ ಸುದೀಪ್ ನಿಮ್ಮ ಉಡುಗೊರೆಗಾಗಿ ಧನ್ಯವಾದಗಳು. ನೀವು ನನ್ನನ್ನು ನೋಡಿಕೊಳ್ಳುವ ರೀತಿ ನಿಜಕ್ಕೂ ಖುಷಿ ನೀಡಿದೆ. ನಿಮ್ಮನ್ನು ಯಾವಾಗಲೂ ಪ್ರೀತಿಸುತ್ತೇನೆ. ನನ್ನ ಜೀವನದಲ್ಲಿ ನೀವು ಇರುವುದಕ್ಕೆ ಖುಷಿ ಇದೆ’ ಎಂದು ಬರೆದುಕೊಂಡಿದ್ದಾರೆ ಜಾನಿ. ಮಹಿಂದ್ರಾ ಥಾರ್ಅನ್ನು ಸುದೀಪ್ ಗಿಫ್ಟ್ ಆಗಿ ನೀಡಿದ್ದಾರೆ.