ಇಲಿ-ಹುಲಿ ಫೋಟೋ : ಅಂಬರೀಶ್ ಗೆ ರಾಜಕೀಯ ಮರುಜೀವ ಕೊಟ್ಟಿದ್ದೇ ಜೆಡಿಎಸ್
ಮಂಡ್ಯ : ನಟ ಅಂಬರೀಶ್ ಮುಂದೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕೈಕಟ್ಟಿ ನಿಂತ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಈ ಫೋಟೋಗೆ ತಮ್ಮದೇಯಾದ ಟೈಟಲ್ ಕೊಟ್ಟಿಕೊಂಡು ಅವರ ಅವರ ಅಭಿಮಾನಿಗಳು ಶೇರ್ ಮಾಡಿಕೊಳ್ಳುತ್ತಿದ್ದಾರೆ.
ಸದ್ಯ ಈ ಫೋಟೋ ಜೆಡಿಎಸ್ ಪಾಳಯದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರನವಾಗಿದೆ.
ಈ ಮಧ್ಯ ಈ ಫೋಟೋ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಜೆಡಿಎಸ್ ಎಂಎಲ್ ಸಿ ಕೆ.ಟಿ.ಶ್ರೀಕಂಠೇಗೌಡ, ಅಂಬರೀಶ್ ಅವರ ಪಾರ್ಥಿವ ಶರೀರವನ್ನು ಮಂಡ್ಯಕ್ಕೆ ತೆಗೆದುಕೊಂಡು ಬಂದಿದ್ದೇ ಕುಮಾರಸ್ವಾಮಿ. ಆ ಫೋಟೋಗಳನ್ನು ಕೂಡ ವೈರಲ್ ಮಾಡಲಿ ಎಂದು ಸವಾಲ್ ಹಾಕಿದ್ದಾರೆ.
ಅಂಬರೀಶ್ ಒಳ್ಳೆಯ ನಟ, ಅವರಿಗೆ ಎಲ್ಲರೂ ಗೌರವ ಕೊಡುತ್ತೇವೆ. ಕುಮಾರಸ್ವಾಮಿ ಅವರು ಸಹ ಗೌರವ ಕೊಡುತ್ತಿದ್ದರು.
ಅದನ್ನು ಹೀಗೆ ಫೋಟೋ ವೈರಲ್ ಮಾಡೋದು ಸರಿಯಲ್ಲ. ಅಂಬರೀಶ್ ಗೆ ಜೆಡಿಎಸ್ ರಾಜಕೀಯ ಮರುಜೀವ ಕೊಟ್ಟಿದೆ.
ಅವರನ್ನು ಸಂಸದರನ್ನಾಗಿ ಮಾಡಿದ ಫೋಟೋವನ್ನು ಕೂಡ ವೈರಲ್ ಮಾಡಲಿ. ಆ ದಿನಗಳಲ್ಲಿ ಕುಮಾರಸ್ವಾಮಿ ಅವರನ್ನು ಹೇಗೆ ನೋಡುತ್ತಿದ್ದರು ಅನ್ನೋದನ್ನು ವೈರಲ್ ಮಾಡಲಿ.
ಅಂಬರೀಶ್ ಅವರ ಪಾರ್ಥಿವ ಶರೀರವನ್ನು ತಂದಿದ್ದೆ ಕುಮಾರಸ್ವಾಮಿ, ಆಗ ಸುಮಲತಾ ಬೇಡಾ ಅಂತ ಹೇಳಿದ್ರು. ಈ ಫೋಟೋವನ್ನು ಸಹ ವೈರಲ್ ಮಾಡಲಿ ಎಂದು ಕೆ.ಟಿ.ಶ್ರೀಕಂಠೇಗೌಡ ಒತ್ತಾಯಿಸಿದ್ದಾರೆ.