ಕಾಮಾತುರಾಣಾಂ ನ ಭಯಂ ನ ಲಜ್ಜಾ
ಚೆನ್ನೈ: ಮಹಿಳೆಯೊಬ್ಬರು ರಾತ್ರಿ ವೇಳೆ ಬಸ್ ನಲ್ಲಿ ಸಂಚರಿಸುವಾಗ ಕಿರುಕುಳ ನೀಡಿದ ವ್ಯಕ್ತಿಗೆ ಸೇಫ್ಟಿ ಪಿನ್ನಿಂದ ಚುಚ್ಚಿ ಪೋಲಿಸರಿಗೆ ಒಪ್ಪಿಸಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ಖಾಸಗಿ ಸುದ್ದಿ ಸಂಸ್ಥೆ ವರದಿ ಮಾಡಿರುವ ಪ್ರಕಾರ ಮಹಿಳಾ ವಕೀಲರೊಬ್ಬರು ಏಪ್ರಿಲ್ 1 ರಂದು ರಾತ್ರಿ 10ಕ್ಕೆ ಬಸ್ ನಲ್ಲಿ ಚಲಿಸುತ್ತಿದ್ದರು. ಈ ಸಮಯದಲ್ಲಿ ರಾಘವ್ ಎಂಬ ವ್ಯಕ್ತಿ ಬಸ್ ಸೀಟ್ಗಳ ನಡುವಿನಿಂದ ಮೈಯೆಲ್ಲಾ ಮುಟ್ಟಿ, ಅನುಚಿತವಾಗಿ ವರ್ತಿಸಿದ್ದ.
ಇದನ್ನು ವಿರೋಧಿಸಿದ ಮಹಿಳೆ ಆರಂಭದಲ್ಲಿ ಆತನ ಕೈಯನ್ನು ತಳ್ಳಲು ಪ್ರಯತ್ನಿಸಿದ್ದಾರೆ. ಆದರೂ ಬಿಡದ ಕಾಮಾಂದ ವ್ಯಕತಿ ಮತ್ತೆ ಕೈ ಹಾಕಿದ್ದಾನೆ. ಇದರಿಂದ ರೋಸಿದ್ದ ಮಹಿಳೆ ವಿಚಲಿತರಾಗಿ ವ್ಯಕ್ತಿ ಮಾಡುತ್ತಿದ್ದ, ಅಸಭ್ಯ ವರ್ತನೆಯನ್ನು ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿದ್ದಾರೆ. ನಂತರ ಆತನ ಕೈಗೆ ಸೇಫ್ಟಿ ಪಿನ್ ನಿಂದ ಚುಚ್ಚಿದ್ದಾರೆ.
ನಂತರ ಅವರು ವ್ಯಕ್ತಿಯೊಂದಿಗೆ ಗಲಾಟೆ ಮಾಡಿದ್ದಾರೆ. ಆಗ ವ್ಯಕ್ತಿ ಮಹಿಳೆಯನ್ನು ಅವಾಚ್ಯವಾಗಿ ನಿಂದಿಸಿದ್ದಾನೆ. ನಂತರ ಸಹ ಪ್ರಯಾಣಿಕರು ಇವರನ್ನು ಬಸ್ ನಿಂದ ಕೆಳಗಿಳಿಸಿ ಪ್ರಯಾಣ ಮುಂದುವರೆಸುವಂತೆ ಸೂಚಿಸಿದರು. ಆದರೆ, ಕೆಲವು ನಿಮಿಷಗಳ ವಿಳಂಬದಿಂದ ಯಾವುದೇ ನಷ್ಟವಾಗುವುದಿಲ್ಲ ಎಂದು ಮಹಿಳೆ ಹೇಳಿದರು. ನಂತರ ಆತನ ವಿರುದ್ಧ ಪೊಲೀಸ್ ದೂರು ದಾಖಲಿಸಲು ತನ್ನೊಂದಿಗೆ ಬರುವಂತೆ ಪ್ರಯಾಣಿಕರನ್ನು ಒತ್ತಾಯಿಸಿದರು.
ನಂತರ ಆ ಮಹಿಳೆ ಆತನನ್ನು ಪೊಲೀಸ್ ಸ್ಟೇಷನ್ಗೆ ಕರೆದೊಯ್ದಿದ್ದಾಳೆ. ತಮಿಳುನಾಡು ಮಹಿಳಾ ಕಿರುಕುಳ ನಿಷೇಧ ಕಾಯ್ದೆಯಡಿಯಲ್ಲಿ ಮಹಿಳೆಯರ ಮೇಲಿನ ಹಲ್ಲೆ ಅಥವಾ ಕ್ರಿಮಿನಲ್ ಬಲ ಸೇರಿದಂತೆ ಸೆಕ್ಷನ್ಗಳ ಅಡಿಯಲ್ಲಿ ರಾಘವನ್ನನ್ನು ಬಂಧಿಸಲಾಗಿದೆ ಎಂದು ಕೋಯಂಬೇಡು ಸಹಾಯಕ ಪೊಲೀಸ್ ಆಯುಕ್ತ ರಮೇಶ್ ಬಾಬು ತಿಳಿಸಿದ್ದಾರೆ.