ತೆರಿಗೆ ಸಂಗ್ರಹಣೆ ಆಡಳಿತಾತ್ಮಕ ವಿಚಾರ : ಡಿಕೆಶಿಗೆ ಬಿಜೆಪಿ ಟಾಂಗ್
ಬೆಂಗಳೂರು : ತೆರಿಗೆ ಸಂಗ್ರಹಣೆ ಆಡಳಿತಾತ್ಮಕ ವಿಚಾರ ಎಂಬ ಸಣ್ಣ ಸಂಗತಿ ನಿಮಗೆ ಅರ್ಥವಾಗಿಲ್ಲವೇ ಎಂದು ರಾಜ್ಯ ಬಿಜೆಪಿ ಘಟಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಪ್ರಶ್ನಿಸಿದೆ.
ಉಪಚುನಾವಣೆಯ ಫಲಿತಾಂಶದಿಂದಾಗಿ ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಬೆಲೆ ಇಳಿಸಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿಕೆಗೆ ರಾಜ್ಯ ಬಿಜೆಪಿ ಘಟಕ ಟ್ವಿಟ್ಟರ್ ನಲ್ಲಿ ಟಾಂಗ್ ನೀಡಿದೆ.
ಬಿಜೆಪಿ ತನ್ನ ಟ್ವಿಟ್ಟರ್ ಖಾತೆಯಲ್ಲಿ… ಉಪಚುನಾವಣೆ ಫಲಿತಾಂಶದಿಂದ ಕೇಂದ್ರ ಸರ್ಕಾರ ತೈಲ ಬೆಲೆ ಇಳಿಸಿದೆ ಎಂಬುದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ವ್ಯಾಖ್ಯಾನ.
ಡಿಕೆಶಿ ಅವರೇ ಫಲಿತಾಂಶ ಪ್ರಭಾವ ಬೀರಿರುವುದು ಕಾಂಗ್ರೆಸ್ ಪಕ್ಷದಲ್ಲಿ. ಗೆಲುವಿನ ಯಶಸ್ಸಿಗೆ ಯಾರು ಪಿತಾಮಹ ಎಂಬ ಹೆಗ್ಗಳಿಕೆ ಪಡೆಯುವುದಕ್ಕಾಗಿ ಕಾಂಗ್ರೆಸ್ ಪಕ್ಷದಲ್ಲಿ ಈಗಾಗಲೇ ಕಲಹ ಆರಂಭಗೊಂಡಿದೆ.
ತೆರಿಗೆ ಹೆಸರಿನಲ್ಲಿ ಲೂಟಿ ಎಂದು ಆರೋಪಿಸುತ್ತಿರುವ ಡಿ.ಕೆ.ಶಿವಕುಮಾರ್ ಅವರೇ, ಕಾಂಗ್ರೆಸ್ ಪಕ್ಷ ಇಷ್ಟು ವರ್ಷ ದೇಶದಲ್ಲಿ ಮಾಡಿದ್ದು ಲೂಟಿಯೇ?
ತೆರಿಗೆ ಸಂಗ್ರಹಣೆ ಆಡಳಿತಾತ್ಮಕ ವಿಚಾರ ಎಂಬ ಸಣ್ಣ ಸಂಗತಿ ನಿಮಗೆ ಅರ್ಥವಾಗಿಲ್ಲವೇ?
ಲೂಟಿ ನಡೆಯುವುದು ವೈಯಕ್ತಿಕ ನೆಲೆಯಲ್ಲಿ. ಆಗ ಐಟಿ ದಾಳಿ ನಡೆಯುತ್ತದೆ. ತಿಹಾರ್ ಜೈಲು ಯಾತ್ರೆಯೂ ನಡೆಯುತ್ತದೆ ಎಂದು ಕುಟುಕಿದೆ.