Telengana: ಮಹಿಳಾ ರಾಜ್ಯಪಾಲರ ನೋವನ್ನ ಇತಿಹಾಸದಲ್ಲಿ ಬರೆಯಲಾಗದುವುದು – ತಮಿಳಿಸೈ ಸೌಂದರರಾಜನ್
ತೆಲಂಗಾಣ ರಾಜ್ಯಪಾಲೆ ತಮಿಳಿಸೈ ಸೌಂದರರಾಜನ್ ಅವರಿಂದು ರಾಜ್ಯ ಸರ್ಕಾರ ತಮ್ಮ ಮೇಲೆ ತೋರಿಸುತ್ತಿರು ತಾರಮ್ಯದ ನೋವನ್ನ ಇಂದು ತೋಡಿಕೊಂಡಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಚಂದ್ರಶೇಖರ ರಾವ್ ಸರ್ಕಾರ ತೋರಿಸುತ್ತಿರುವ ತಾರತಮ್ಯವನ್ನು ಉಲ್ಲೇಖಿಸಿದ ಅವರು, ‘ಮಹಿಳಾ ರಾಜ್ಯಪಾಲರಿಗೆ ಹೇಗೆ ತಾರತಮ್ಯ ಮಾಡಲಾಯಿತು ಎಂಬುದು ರಾಜ್ಯದ ಇತಿಹಾಸದಲ್ಲಿ ಬರೆಯಲ್ಪಡುತ್ತದೆ’ ಎಂದು ಹೇಳಿದ್ದಾರೆ.
ರಾಜ್ಯಪಾಲ ಸೌಂದರರಾಜನ್ ಅವರು ಮಾತನಾಡಿ “ಗಣರಾಜ್ಯೋತ್ಸವದಂದು ತ್ರಿವರ್ಣ ಧ್ವಜವನ್ನು ಹಾರಿಸಲು ಮತ್ತು ಭಾಷಣ ಮಾಡಲು ಅವಕಾಶ ನೀಡಲಿಲ್ಲ. ಈಗಲೂ ನಾನು ಎಲ್ಲಿಗೆ ಹೋದರೂ ಪ್ರೋಟೋಕಾಲ್ ಅನುಸರಿಸುತ್ತಿಲ್ಲ. ರಾಜ್ಯಪಾಲರ ಕಚೇರಿಯ ಘನತೆ ಕಾಪಾಡಬೇಕು ಎಂದು ಹೇಳಿದರು.
ಸುಂದರರಾಜನ್ ಅವರು ಇಂದು ರಾಜಭವನದಲ್ಲಿ ಮೂರು ವರ್ಷಗಳನ್ನು ಪೂರೈಸಿದ್ದಾರೆ. ‘ತೆಲಂಗಾಣ ಜನತೆಯ ಸೇವೆಯಲ್ಲಿ ನಾಲ್ಕನೇ ವರ್ಷದ ಆರಂಭ’ ಕಾರ್ಯಕ್ರಮದಲ್ಲಿ ಭಾಗವಹಿಸಿದ ರಾಜ್ಯಪಾಲರು ಮುಖ್ಯಮಂತ್ರಿ ಕೆಸಿಆರ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ರಾಜ್ಯಪಾಲರ ಕಚೇರಿಗೆ ಅವಮಾನ ಮಾಡಲಾಗಿದೆ ಎಂದು ನೋವು ತೋಡಿಕೊಂಡಿದ್ದಾರೆ.
ಇತ್ತೀಚೆಗೆ ದಕ್ಷಿಣ ಪ್ರಾದೇಶಿಕ ಸಭೆ ನಡೆಸಲಾಗಿತ್ತು. ನಾನು ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಆಗಿ ಅದರಲ್ಲಿ ಭಾಗವಹಿಸಿದ್ದೆ ಮತ್ತು ಆ ಸಭೆಯಲ್ಲಿ 75 ಪ್ರತಿಶತ ಸಮಸ್ಯೆಗಳು ತೆಲಂಗಾಣ ಮತ್ತು ಆಂಧ್ರಪ್ರದೇಶದವುಗಳಾಗಿವೆ. ಎಲ್ಲ ಮುಖ್ಯಮಂತ್ರಿಗಳು ಅಲ್ಲಿದ್ದರು, ಮುಖ್ಯಮಂತ್ರಿ ಕೆಸಿಆರ್ ಏಕೆ ಹಾಜರಾಗಲಿಲ್ಲ? ಕೇಂದ್ರ ಗೃಹ ಸಚಿವರು ಸಮಸ್ಯೆ ಬಗೆಹರಿಸಲು ಮುಂದಾದಾಗ ನಿಮಗೇನು ಸಮಸ್ಯೆ, ಆ ಅವಕಾಶವನ್ನು ಏಕೆ ಬಳಸಿಕೊಳ್ಳುತ್ತಿಲ್ಲ? ಹಾಗಾಗಿ ಕೇಂದ್ರ ಸರ್ಕಾರದೊಂದಿಗೆ ಉತ್ತಮ ಬಾಂಧವ್ಯ ಹೊಂದಬೇಕು ಎಂದು ಭಾಷಣದಲ್ಲಿ ಹೇಳಿದ್ದಾರೆ.
ಸರಕಾರಿ ಆಸ್ಪತ್ರೆಗಳ ಸ್ಥಿತಿ ನಿಜಕ್ಕೂ ಹದಗೆಟ್ಟಿದ್ದು, ಸರಕಾರಿ ಆಸ್ಪತ್ರೆಯ ನಿರ್ದೇಶಕರು ಖಾಸಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ, ರಾಜಕಾರಣಿಗಳು ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗುತ್ತಿದ್ದಾರೆ ಎಂದು ರಾಜ್ಯಪಾಲರು ತಿಳಿಸಿದ್ದಾರೆ.