ಚಿಂತಾಮಣಿ : ಕಂಠ ಪೂರ್ತಿ ಕುಡಿಸಿ ಸ್ನೇಹಿತನ ಕೊಲೆಗೆ ಯತ್ನ
ಚಿಕ್ಕಬಳ್ಳಾಪುರ : ವ್ಯಕ್ತಿವೊಬ್ಬ ಕಂಠ ಪೂರ್ತಿ ಕುಡಿಸಿ ತನ್ನ ಸ್ನೇಹಿತನನ್ನೇ ಕೊಲೆ ಮಾಡಲು ಯತ್ನಿಸಿರುವ ಘಟನೆ ಚಿಂತಾಮಣಿ ತಾಲೂಕಿನ ಗುಂಡಲಹಳ್ಳಿಯಲ್ಲಿ ನಡೆಸಿದೆ. ಕೊತ್ತಪಲ್ಲಿ ಗ್ರಾಮದ ನರಸಿಂಹ ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದು, ಕಾನಮಾಕಲಹಳ್ಳಿಯ ರವಿ ಹಲ್ಲೆಗೆ ಯತ್ನಿಸಿದ ಆರೋಪಿಯಾಗಿದ್ದಾನೆ.
ಕಳೆದ ಭಾನುವಾರ ಇಬ್ಬರು ಅನ್ಯ ಕಾರ್ಯದ ನಿಮಿತ್ತ ಯಗವಕೋಟೆಗೆ ತೆರಳಿದ್ದಾರೆ. ಬಳಿಕ ಸಂಜೆ ಇಬ್ಬರೂ ಸೇರಿ ಗುಂಡಾಕಿದ್ದಾರೆ. ಈ ವೇಳೆ ರವಿ, ನರಸಿಂಹನ ಮೇಲೆ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ್ದಾನೆ. ಹಲ್ಲೆಯಿಂದಾಗಿ ನರಸಿಂಹನಿಗೆ ಪ್ರಜ್ಞೆ ತಪ್ಪಿದ್ದು, ರವಿ ಅಲ್ಲಿಂದ ಪರಾರಿಯಾಗಿದ್ದಾನೆ.
ಮಧ್ಯರಾತ್ರಿ 12 ಗಂಟೆಯಲ್ಲಿ ನರಸಿಂಹನಿಗೆ ಎಚ್ಚರವಾಗಿದ್ದು, ಎದ್ದು ನೋಡಿದರೆ ಮುಖ ಮತ್ತು ಮೈಮೇಲೆ ಗಾಯಗಳಾಗಿರುವುದು ಗೊತ್ತಾಗಿದೆ. ಮತ್ತೆ ಹೇಗೋ ಅಲ್ಲಿಂದ ಆಸ್ಪತ್ರೆ ಸೇರಿದ್ದು, ರವಿ ಹಲ್ಲೆ ಮಾಡಿರುವುದಾಗಿ ಆರೋಪಿಸಿದ್ದಾನೆ.
ಸದ್ಯ ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಯಲ್ಲಿ ನರಸಿಂಹ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಸಂಬಂಧ ರವಿ ವಿರುದ್ಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.