ಕರೋನಾ ಟೆಸ್ಟ್ ಗೆ ಒಪ್ಪಿದ ಡಿಕೆಶಿ – ಸರ್ಕಾರದ ನೋಟಿಸ್ ಗೆ ಮೌನ…
ಪಾದಯಾತ್ರೆ ಶುರುವಾದಾಗಿನಿಂದ ಕರೊನ ಟೆಸ್ಟ್ ಮಾಡಿಸಿಕೊಳ್ಳಲ್ಲ ಅಂತಿದ್ದ ಡಿ ಕೆ ಶಿವಕುಮಾರ್ ಕೊನೆಗು ಕರೊನಾ ಪರೀಕ್ಷೆಗೆ ಒಪ್ಪಿಗೆ ಕೊಟ್ಟಿದ್ದಾರೆ. ವೈದ್ಯರ ತಂಡ ಕನಕಪುರದಲ್ಲಿರುವ ಡಿ ಕೆ ಶಿವಕುಮಾರ್ ಅವರ ಮನೆಗೆ ತೆರಳಿ ಗಂಟಲಿನ ಸ್ವಾಬ್ ಸ್ಯಾಂಪಲ್ ಕಲೆಕ್ಟ್ ಮಾಡಿದ್ದಾರೆ.
ಕರೊನಾ ಮತ್ತು ಒಮಿಕ್ರಾನ್ ಸೋಂಕುಗಳು ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಪಾದಯಾತ್ರೆ ಮಾಡಲು ಸರ್ಕಾರಕ್ಕೆ ಅವಕಾಶ ಕೊಟ್ಟಿದ್ದಕ್ಕೆ ಸರ್ಕಾರಕ್ಕೆ ಹೈ ಕೋರ್ಟ್ ಚಾಟಿ ಬಿಸಿದೆ. ಹೈಕೋರ್ಟ್ ತರಾಟೆಗೆ ತೆಗೆದುಕೊಂಡ ಬೆನ್ನಲ್ಲೆ ಸರ್ಕಾರ ಡಿ ಕೆ ಶಿವಕುಮಾರ್ ಅವರಿಗೆ ಪಾದಯಾತ್ರೆ ಮುಂದುವರೆಸದಂತೆ ನೋಟಿಸ್ ನೀಡಿ, ನಿರ್ಬಂಧ ವಿಧಿಸಿದೆ.
ಪಾದಯಾತ್ರೆ ನಡೆಸದಿರುವ ಬಗ್ಗೆ ನೊಟಿಸ್ ನೀಡಲು ಎ ಸಿ ಹಾಗು ಡಿವೈಎಸ್ ಪಿ ಗಳ ತಂಡ ಮನೆಗೆ ತರಳಿದಾಗ ನೋಟೀಸ್ ಸ್ವೀಕರಿಸಲು ಡಿ ಕೆ ಶಿವಕುಮಾರ್ ನಿರಾಕರಿಸಿದ್ದಾರೆ ಈ ಹಿನ್ನಲೆಯಲ್ಲಿ ಅಧಿಕಾರಿಗಳು ಮನೆಯ ಬಾಗಿಲಿಗೆ ನೋಟಿಸ್ ಹಚ್ಚಿ ತೆರಳಿದ್ದಾರೆ.