ಪತ್ನಿಯನ್ನು ಗುಂಡಿಕ್ಕಿ ಕೊಂದ ಪತಿ
ಜಾರ್ಖಂಡ: ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ಪತ್ನಿಯನ್ನು ಪತಿಯೇ ಗುಂಡಿಕ್ಕಿ ಕೊಂದಿರುವ ಘಟನೆ ಹಜಾರಿಬಾಗ್ ಬಡಾ ಬಜಾರ್ ಪ್ರದೇಶದ ಮಲ್ಲಾಹ್ ಟೋಲಿ ಬಳಿ ನಡೆದಿದೆ.
ವಂದನಾ ದೇವಿ (27) ಮೃತ ದುರ್ದೈವಿ. ರಾಜೇಶ್ ಸೋಂಕರ್ ಕೊಲೆ ಆರೋಪಿ ಎಂದು ಗುರುತಿಸಲಾಗಿದೆ. ಪ್ರಕರಣ ಸಂಭಂದ ಬಡಾ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಮೃತದೇಹವನ್ನು ಹಜಾರಿಬಾಗ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿದ್ದಾರೆ.
ನಡೆದಿದ್ದು ಏನು? ಒಂದು ವರ್ಷದ ಹಿಂದೆ ವಂದನಾ ದೇವಿ ಮತ್ತು ರಾಜೇಶ್ ಸೋಂಕರ್ ವಿವಾಹವಾಗಿದ್ದಾರೆ. ಧಂಪತಿಗೆ 15 ದಿನದಗಳ ಪುಟ್ಟ ಮಗುವಿದೆ. ಪಾಪಿ ಪತಿಯ ತೆಲೆಯಲ್ಲಿ ಅನುಮಾನದ ಪಿಶಾಚಿ ಹೊಕ್ಕಿದೆ. ಹೀಗಾಗಿ ಪತಿ ಪತ್ನಿಯೊಂದಿಗೆ ಪ್ರತಿನಿತ್ಯ ಜಗಳವಾಡುತ್ತಿದ್ದನಂತೆ.
ಅಲ್ಲದೇ ಪತಿ ಕಳೆದ ಒಂದು ತಿಂಗಳಿನಿಂದ ತನ್ನ ವ್ಯಾಪಾರವನ್ನು ಬಿಟ್ಟು ಪತ್ನಿಯನ್ನು ಹಿಂಬಾಲಿಸುತ್ತಿದ್ದನಂತೆ. ಅಲ್ಲದೇ ಆಕೆ ಕರೆಯ ಮೇಲು ನಿಗಾ ಇಟ್ಟಿದ್ದನಂತೆ. ಈ ವಿಚಾರವಾಗಿ ಪ್ರತಿದಿನ ಜಗಳವಾಡುತ್ತಿದ್ದನು. ಜಗಳ ವಿಕೋಪಕ್ಕೆ ತಿರುಗಿ ಪತಿ ತನ್ನ ಬಳಿ ಇದ್ದ ಬಂದೂಕಿನಿಂದ ಗುಂಡು ಹಾರಿಸಿ ಪತ್ನಿಯನ್ನು ಕೊಂದಿದ್ದಾನೆ.
ನಂತರ ರಾಜೇಶ್ ಮಗುವನ್ನು ಮನೆಯಲ್ಲಿ ಕೂಡಿ ಹಾಕಿ ಪರಾರಿಯಾಗಿದ್ದಾನೆ. ಮಗು ಅಳಲು ಶುರು ಮಾಡಿದ್ದು, ಮಗುವಿನ ಶಬ್ದ ಕೇಳಿ ವಂದನಾ ಮೈದುನ ಸೋನು ಮನೆಯ ಬಾಗಿಲ ಬೀಗ ಒಡೆದು ನೋಡಿದಾಗ ಸಹೋದರಿ ರಕ್ತದ ಮಡುವಿನಲ್ಲಿ ಬಿದ್ದಿದ್ದನ್ನು ಕಂಡಿದ್ದು, ಕೂಡಲೇ ಆಕೆ ಆಸ್ಪತ್ರೆ ಕರೆದೊಯ್ದರಾದರೂ ಅದಾಗಲೇ ವಂದನಾ ಸಾವನ್ನಪ್ಪಿದ್ದರು ಎನ್ನಲಾಗುತ್ತಿದೆ.
ವಿಷಯವನ್ನು ಪೊಲೀಸರಿಗೆ ತಿಳಿಸಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಆರೋಪಿಯ ಕಿರಿಯ ಸಹೋದರ ಸೋನು ಕುಮಾರ್ ಮತ್ತು ಆತನ ತಾಯಿಯನ್ನು ವಿಚಾರಣೆಗೆ ಒಳಪಡಿಸಿದ್ದು, ಘಟನೆ ನಡೆದಾಗ ಆರೋಪಿ ಸಹೋದರ ಟ್ಯೂಷನ್ಗೆ ಹೋಗಿದ್ದು, ತಾಯಿ ನೆರೆಮನೆಗೆ ಹೋಗಿದ್ದರು ಎಂದು ತಿಳಿದು ಬಂದಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಕೆ ಮುಂದುವರೆಸಿದ್ದಾರೆ.