ಕರ್ನಾಟಕ ಸರ್ಕಾರದಿಂದ ಅಧಿಕೃತವಾಗಿ ಓನಕೆ ಓಬವ್ವ ಜಯಂತಿ ಆಚರಣೆ.
ಕರ್ನಾಟದ ವೀರರಾಣಿಯರಾದ ಕಿತ್ತೂರು ಚೆನ್ನಮ್ಮ, ಅಬ್ಬಕ್ಕ ಅವರ ಸಾಲಿನಲ್ಲಿ ನಿಲ್ಲುವ ಮತ್ತೊಬ್ಬ ವೀರ ಮಹಿಳೆ ಓನಕೆ ಓಬವ್ವ ಅವರ ಜಯಂತಿಯನ್ನ ಅಧಿಕೃತವಾಗಿ ಆಚರಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ಧರಿಸದೆ.
ಒನಕೆ ಓಬವ್ವ ಎನ್ನುವ ಹೆಸರು ಚಿತ್ರದುರ್ಗದ ಇತಿಹಾಸದಲ್ಲಿ ಮರೆಯಲಾಗದ್ದು. 18 ನೇ ಶತಮಾನದಲ್ಲಿ ಚಿತ್ರದುರ್ಗ ಕೋಟೆಯ ಪಾಳೆಗಾರನಾಗಿದ್ದ ಮದಕರಿನಾಯಕರ ಕೋಟೆಯ ಕಾವಲುಗಾರ ಕಹಳೆ ಮುದ್ದಹನುಮಂತಪ್ಪನ ಹೆಂಡತಿ ಒನಕೆ ಓಬವ್ವ.
ಚಿತ್ರದುರ್ಗದ ಮೇಲೆ ಹೈದರಾಲಿಯ ಸೈನಿಕರು ಕಳ್ಳದಾರಿಯ ಮೂಲಕ ಒಳನುಸುಳುತ್ತಿರುವುದನ್ನ ನೋಡಿದಳು. ದೃತಿಗೆಡದೆ ಓಬವ್ವ ಮನೆಯಲ್ಲಿದ್ದ ಒನಕೆಯನ್ನ ಅಸ್ತ್ರವನ್ನಾಗಿ ಮಾಡಿಕೊಂಡು ಕೋಟೆಯ ಕಳ್ಳ ಗಿಂಡಿಯಿಂದ ಬಂದ ನೂರಾರು ಶತ್ರುಗಳನ್ನ ಏಕಾಂಗಿಯಾಗಿ ಸದೆಬಡೆದು ಕೋಟೆಯ ಕಾವಲಿಗೆ ನಿಲ್ಲುತ್ತಾಳೆ. ಇದೇ ವೇಳೆಯಲ್ಲಿ ಹೈದರಾಲಿಯ ಸೈನಿಕನೊಬ್ಬ ಬೆನ್ನ ಹಿಂದಿನಿಂದ ಬಂದು ಕತ್ತಿ ಬೀಸಿದ್ದನ್ನ ಗಮನಿಸದೆ ಓಬವ್ವ ವೀರ ಮರಣವನ್ನ ಹೊಂದುತ್ತಾಳೆ. ಅಂದಿನಿಂದ ಚಿತ್ರದುರ್ಗ ಮತ್ತು ಕರ್ನಾಟಕದ ಜನತೆಯಲ್ಲಿ ವೀರ ವನಿತೆ ಒನಕೆ ಓಬವ್ವ ಎಂದು ಚಿರಸ್ಥಾಯಿಯಾಗಿದ್ದಾಳೆ. ಕೋಟ್ಯಾಂತರ ಮಹಿಳೆಯರಿಗೆ ಧೈರ್ಯ ನೀಡುವ ಚೇತನವಾಗಿದ್ದಾಳೆ. ಅಂದಿನಿಂದ ಶತ್ರು ಸೈನಿಕರು ನುಸುಳಿಬಂದ ಕಿಂಡಿಯನ್ನ ಓಬವ್ವನ ಕಿಂಡಿ ಎಂದು ಕರೆಯಲಾಗುತ್ತದೆ.
ಇ ಮೇಲ್ಕಂಡ ಅಂಶಗಳ ಹಿನ್ನಲೆಯಲ್ಲಿ ಒನಕೆ ಓಬವ್ವನ ಜಯಂತಿಯನ್ನ ನವೆಂಬರ್ 11 ರಂದು ಅಧಿಕೃತವಾಗಿ ಆಚರಿಸುವಂತೆ ಕನ್ನಡ ಸಂಸ್ಕೃತಿ ಇಲಾಖೆ ಆದೇಶಿಸುವಂತೆ ಸುತ್ತೋಲೆಯನ್ನ ಹೊರಡಿಸಿದೆ.