ಸಾಹಿತಿ ಕಲಾವಿದರಿಗೆ ಸಿಹಿ ಸುದ್ಧಿ ಸರ್ಕಾರದಿಂದ ಮಾಸಾಶನ ಬಿಡಗಡೆ
ಸಂಕಷ್ಟದಲ್ಲಿರುವ ಸಾಹಿತಿ-ಕಲಾವಿದರು ಮತ್ತು ವಿಧವಾ ವೇತನ ಪಡೆಯುತ್ತಿರುವ ಫಲಾನುಭವಿಗಳಿಗೆ ಮಾಸಾಶನ ನೀಡಲು ಹಣ ಬಿಡುಗಡೆ ಮಾಡಿರುವುದಾಗಿ ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್ ಹೇಳಿದ್ದಾರೆ.
2021 ನೇ ಸೆಪ್ಟೆಂಬರ್, ಅಕ್ಟೋಬರ್ ಮತ್ತು ನವೆಂಬರ್ ತಿಂಗಳುಗಳಿಗೆ ಮಾಸಾಶನ/ವಿಧವಾ ಮಾಸಾಶನ ಪಾವತಿಗೆ ಒಟ್ಟಾರೆ ರೂ. 12 ಕೋಟಿ 25 ಲಕ್ಷ ಬೇಕಾಗಿರುತ್ತದೆ. ಮೊದಲ ಕಂತಿನಲ್ಲಿ 6 ಕೋಟಿ ಎರಡನೇ ಕಂತಿನಲ್ಲಿ 6 ಕೋಟಿ ಬಿಡುಗಡೆ ಮಾಡುವುದಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹೇಳಿದೆ.
ಮಾಸಾಶನ ಇಲ್ಲದೆ ಸಾಹಿತಿ, ಕಲಾವಿದರು ಕಷ್ಟ ಅನುಭವಿಸುತ್ತಿದ್ದಾರೆ. ಈ ಹಣದಿಂದ ಅವರೆಲ್ಲರಿಗೂ ಸಹಾಯವಾಗುತ್ತದೆ ಎಂದು ಸಚಿವರು ಹೇಳಿದ್ದಾರೆ.
ಇಂದಿನಿಂದ BMTC ವಿದ್ಯಾರ್ಥಿ ರಿಯಾಯಿತಿ ಪಾಸ್ ಗೆ ಅರ್ಜಿ ಸಲ್ಲಿಕೆ ಆರಂಭ..!
ರಾಜ್ಯ ಶಾಲಾ ಶಿಕ್ಷಕಿಯರಿಗೆ ಗುಡ್ ನ್ಯೂಸ್ – ಶಿಶು ಪಾಲನಾ ರಜೆ ಮುಂಜೂರು..!
ರಾಜ್ಯದಲ್ಲಿ ಇನ್ನೂ 4 ದಿನ ಭಾರೀ ಮಳೆ : ಯೆಲ್ಲೋ ಅಲರ್ಟ್ ಘೋಷಣೆ