ನಮ್ಮ ಮೇಲೆ ಯಾವುದೇ ರೇಪ್ ಕೇಸ್ ಇಲ್ಲ – ಡಾ.ಕೆ.ಸುಧಾಕರ್
ಬೆಂಗಳೂರು : ನಮ್ಮ ಮೇಲೆ ಯಾವುದೇ ರೇಪ್ ಕೇಸ್ ಇಲ್ಲ ಎಂದು ಡಾ.ಕೆ.ಸುಧಾಕರ್ ಕೋರ್ಟ್ ಮೊರೆ ಹೋಗಿದ್ದಕ್ಕೆ ಸ್ಪಷ್ಟೀಕರಣ ಕೊಟ್ಟಿದ್ದಾರೆ.
ವಿಧಾನಸಭೆಯಲ್ಲಿ ನಾವು ಯಾಕೆ ನ್ಯಾಯಾಲಯಕ್ಕೆ ಹೋಗಿದ್ದೇವೆ ಎಂಬ ಪ್ರಶ್ನೆಗೆ ಉತ್ತರಿಸುತ್ತಾ, ಪರಿಶೀಲನೆ ಮಾಡದೆ ಸುದ್ದಿ ಪ್ರಕಟ ಮಾಡಬಾರದು ಎಂಬ ಕಾರಣಕ್ಕೆ ಕೋರ್ಟ್ ಮೊರೆ ಹೋಗಿದ್ದಾಗಿ ಸುಧಾಕರ್ ಹೇಳಿದ್ದಾರೆ.
ಸಮ್ಮಿಶ್ರ ಸರ್ಕಾರ ಪತನಕ್ಕೆ ಕಾರಣರಾದವರ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ. ಹಾಗಾಗಿ ಕಾನೂನು ವ್ಯಾಪ್ತಿಯಲ್ಲಿರುವ ಅವಕಾಶವನ್ನು ನಾವು ಬಳಸಿಕೊಂಡಿದ್ದೇವೆ. ನಾವು ಯಾವುದೇ ತಪ್ಪು ಮಾಡಿಲ್ಲ. ಆದರೆ ಆಧುನಿಕ ತಂತ್ರಜ್ಞಾನ ಬಳಸಿ ಹೇಗೆ ಬೇಕಾದರೂ ವಿಡಿಯೋ ಮಾಡಬಹುದು ಎಂದು ಸುಧಾಕರ್ ಹೇಳಿದರು.
ವಿರೋಧ ಪಕ್ಷದ ನಾಯಕರು ಕೋರ್ಟ್ಗೆ ಏಕೆ ಹೋಗಿರುವುದಾಗಿ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಮಾಧ್ಯಮಗಳು ಆ ಸಂದರ್ಭದಲ್ಲಿ ಸಿಗುವ ದಾಖಲೆ, ಸಿಡಿ ಯನ್ನು ಪ್ರಸಾರ ಮಾಡುತ್ತವೆ. ಆದರೆ ಇದರಿಂದ ಪ್ರಜಾಪ್ರತಿನಿಧಿಗಳಿಗೆ ಅವಮಾನ ಆಗುವಂತಹ ಸನ್ನಿವೇಶ ಏರ್ಪಡುತ್ತದೆ . ಸತ್ಯಾಸತ್ಯತೆ ಪರಿಶೀಲನೆ ಮಾಡಬೇಕಲ್ವಾ?. ಇಂದಿನ ತಂತ್ರಜ್ಞಾನದಲ್ಲಿ ಏನು ಬೇಕಾದರೂ ಮಾಡಬಹುದು, ಫೇಕ್ ವಿಡಿಯೋ ಕೂಡ ಮಾಡಬಹುದು ಎಂದು ಅವರು ಹೇಳಿದ್ದಾರೆ.
ಕಲ್ಲಂಗಡಿ ಹಣ್ಣಿನ ಆರೋಗ್ಯ ಪ್ರಯೋಜನಗಳು ಮತ್ತು ತಿನ್ನುವ ಮೊದಲು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು https://t.co/ebHn79UbYs
— Saaksha TV (@SaakshaTv) March 19, 2021
ಐಟಿಆರ್ ಮರುಪಾವತಿ ಭರ್ತಿ ಮಾಡಿದ ನಂತರ ಈ ಅಂಶಗಳನ್ನು ಪರಿಶೀಲಿಸಿ https://t.co/tsMNkVA0BK
— Saaksha TV (@SaakshaTv) March 19, 2021
ನಾನು ರಾಮ ಮತ್ತು ಕೃಷ್ಣನನ್ನು ನಂಬುವುದಿಲ್ಲ.. ಯಾವುದೇ ಹಿಂದೂ ದೇವರನ್ನು ಪೂಜಿಸುವುದಿಲ್ಲ – ಐಪಿಎಸ್ ಅಧಿಕಾರಿಯಿಂದ ವಿದ್ಯಾರ್ಥಿಗಳಿಗೆ ಪ್ರಮಾಣವಚನ https://t.co/Ts767i1Wrv
— Saaksha TV (@SaakshaTv) March 19, 2021
ದೊಣ್ಣೆ ಮೆಣಸಿನ ವಾಂಗಿಬಾತ್ https://t.co/AL3rMRyFF5
— Saaksha TV (@SaakshaTv) March 19, 2021