ಆಟೋ ಲಾರಿ ಡಿಕ್ಕಿ 2 ತಿಂಗಳ ಮಗು ಸೇರಿದಂತೆ ಮೂವರ ಸಾವು
ಯಾದಗಿರಿ ನಗರ ಮುದ್ನಾಳ ಕ್ರಾಸ್ ಬಳಿ ಲಾರಿ ಮತ್ತು ಆಟೊ ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಲಕ್ಷ್ಮಣ ನಾಮದೇವ (26), ಜಯರಾಮ ರಾಮಚಂದ್ರ ಚವಾಣ್ (45), ಸೇರಿದಂತೆ ಎರಡು ತಿಂಗಳ ಹಸುಗೂಸು ಸಹ ಸಾವನ್ನಪ್ಪಿದೆ 6 ಜನರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಮುಂಬೈನಿಂದ ಟ್ರೈನ್ಗೆ ಬಂದು ಆಟೋದಲ್ಲಿ ಊರಿಗೆ ತೆರಳುತ್ತಿದ್ದಾಗ ದುರ್ಘಟನೆ ಸಂಭವಿಸಿದೆ ಶುಕ್ರವಾರ ಮಧ್ಯರಾತ್ರಿ ವಾಡಿ ಕಡೆಯಿಂದ ಆಗಮಿಸುತ್ತಿದ್ದ ಲಾರಿ, ಯಾದಗಿರಿಯಿಂದ ಕಂಚಗಾರಹಳ್ಳಿಗೆ ತೆರಳುತ್ತಿದ್ದ ಪ್ಯಾಸೆಂಜರ್ ಆಟೊ ಪರಸ್ಪರ ಡಿಕ್ಕಿಯಾಗಿವೆ.
ಮೃತರು ಯಾದಗಿರಿ ಜಿಲ್ಲೆಯ ಶಹಾಪುರ ಹತ್ತಿರದ ಹೊತಪೇಟ ತಾಂಡಾ, ಕಂಚಗಾರಹಳ್ಳಿ ತಾಂಡಾದ ನಿವಾಸಿಗಳು ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಯಾದಗಿರಿ ಸಂಚಾರ ಪೋಲಿಸರ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.