ರಸ್ತೆ ಅಫಘಾತ, ಕಾರಿನ ಮೇಲೆ ಕಾರು ಬಿದ್ದು ಮೂವರು ಸಾವು
ಕರ್ನಾಟಕದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಸಾಕಷ್ಟು ಅವಾಂತರಗಳು ಸೃಷ್ಠಿಯಾಗುತ್ತಿವೆ.. ಬೆಂಗಳೂರು ಏರರ್ಪೋರ್ಟ್ ರಸ್ತೆಯ ಬೆಟ್ಟ ಹಲಸೂರು ರಸ್ತೆಯಲ್ಲಿ ಡಿವೈಡರ್ ಗೆ ಕಾರು ಡಿಕ್ಕಿಯಾಗಿ ಮೂವರು ಸಾವನ್ನಪ್ಪಿರುವ ಘಟನೆ ರಾತ್ರಿ ಸುಮಾರು 9 ಗಂಟೆಯ ವೇಳೆಗೆ ನಡೆದಿದೆ.
ದೇವನಹಳ್ಳಿ ಕಡೆಯಿಂದ ಬೆಂಗಳೂರು ಕಡೆಗೆ ಬರುತ್ತಿರುವ ಕಾರು ಬೆಟ್ಟಹಲಸೂರು ಫ್ಲೈ ಓವರ್ ಬಳಿ ಅಫಘಾತ ಸಂಭವಿಸಿದೆ. ಭಾರಿ ಮಳೆಯಿಂದಾಗಿ ರಸ್ತೆ ಕಾಣದೆ ಡಿವೈಡರ್ ಗೆ ಡಿಕ್ಕಿಯಾಗಿ ಇನ್ನೋಂದು ಕಡೆ ಬರುತ್ತಿದ್ದ ಕಾರಿನ ಮೇಲೆ ಬಿದ್ದಿದೆ. ಕಾರ್ ನಲ್ಲಿದ್ದ ಮೂವರು ಸಾವನ್ನಪ್ಪಿದ್ದು ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ.
ಮಳೆ ಹಿನ್ನಲೆ ಕಾರಿನಲ್ಲಿದ್ದ ಮೃತದೇಹ ತೆಗೆಯಲು ಹರಸಾಹಸ ಪಡಬೇಕಾಗಿತು. ಚಿಕ್ಕಜಾಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭಾರಿ ಮಳೆ ಹಿನ್ನಲೆ ಕೋಲಾರ – ಚಿಕ್ಕಬಳ್ಳಪುರ ಶಾಲೆಗಳಿಗೆ ರಜೆ
ಸರಣಿ ಗೆಲ್ಲುವ ಕಡೆ ಟೀಮ್ ಇಂಡಿಯಾ ಗಮನ, ರಾಂಚಿಯಲ್ಲಿ ಕದನ ಕುತೂಹಲ