‘ದೀದಿ’ಗೆ ಶಾಕ್ ಮೇಲೆ ಶಾಕ್ : ಶತಾಬ್ದಿ ರಾಯ್ ಫೇಸ್ ಬುಕ್ ಪೋಸ್ಟ್ ನಿಂದ TMC ಗೆ ಆಘಾತ..!
ಕೋಲ್ಕತ್ತಾ : ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆ ಸಮೀಪದಲ್ಲಿರುವಾಗಲೇ ಸಿಎಂ ಮಮತಾ ಬ್ಯಾನರ್ಜಜಿ ಹಾಗೂ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಆಗಾತಗಳು ಎದುರಾಗ್ತಲೇ ಇವೆ. ಇತ್ತೀಚೆಗಷ್ಟೇ ಮುಂದಿನ ತಿಂಗಳಷ್ಟರ ಹೊತ್ತಿಗೆ TMCಯ 50 ಶಾಸಕರು ಬಿಜೆಪಿಗೆ ಸೇರ್ಪಡೆಯಾಲಿದ್ದಾರೆ ಎಂದು ಪಶ್ಚಿಮ ಬಂಗಾಳ ಬಿಜೆಪಿ ಮುಖಂಡ ದಿಲೀಪ್ ಘೋಷ್ ಹೇಳಿಕೆ ನೀಡಿದ ಬೆನ್ನಲ್ಲೇ ಪಕ್ಷಕ್ಕೆ ಮತ್ತೊಂದು ಆಘಾತವಾಗಿದೆ.
ಸಹೋದ್ಯೋಗಿಯ ಮೇಲೆಯೇ ಅತ್ಯಾಚಾರಗೈದ ಪೊಲೀಸ್ ಪರಾರಿ.!
ಬಿರ್ಭಮ್ ತೃಣಮೂಲ ಸಂಸದೆ ಹಾಗೂ ನಟಿ ಶತಾಬ್ದಿ ರಾಯ್ ಅವರು ಫೇಸ್ ಬುಕ್ ನಲ್ಲಿ ಮಾಡಿರುವ ಪೋಸ್ಟ್ ಒಂದು ಇದೀಗ TMCಗೆ ಶಾಕ್ ಕೊಟ್ಟಿದೆ. ಹೌದು ಫೇಸ್ ಬುಕ್ ನಲ್ಲಿ ಶತಾಬ್ದಿ ರಾಯ್, ಅವರು ‘ನಾನು ಒಂದು ಮುಖ್ಯ ತೀರ್ಮಾನ ತೆಗೆದುಕೊಳ್ಳಲಿದ್ದೇನೆ. ಆ ತೀರ್ಮಾನವನ್ನು ಶೀಘ್ರವೇ ನಿಗಮೆ ತಿಳಿಸಲಿದ್ದೇನೆ’ ಎಂದಿದ್ದಾರೆ.
ಆದ್ರೆ ಶಾಕಿಂಗ್ ಮತ್ತೆ ಕುತೂಹಲಕಾರಿ ವಿಚಾರ ಅಂದ್ರೆ ಈ ಪೋಸ್ಟ್ ಹಾಕಿದ ನಂತರ ರಾಯ್ ಫೋನ್ ಸ್ವಿಚ್ ಆಫ್ ಆಗಿದೆ ಎನ್ನಲಾಗ್ತಿದ್ದು, ಅವರು ಪಕ್ಷ ತೊರೆಯುವ ಮುನ್ಸೂಚನೆ ಕೊಟ್ರಾ ಅನ್ನೋ ಚರ್ಚೆಗಳು ಆರಂಭವಾಗಿದೆ. ಇದಕ್ಕೆ ಮತ್ತೊಂದು ಕಾರಣ ಅಂದ್ರೆ ಶತಾಬ್ಧಿ ಅವರಿಗೆ ಪಕ್ಷದ ಮೇಲೆ ಅಸಮಾಧಾನನವಿದೆ ಎಂಬ ಊಹಾಪೋಹಳು ಹಲವು ದಿನಗಳಿಂದಲೂ ಹರಿದಾಡ್ತಿವೆ.
ಅಲ್ಲದೇ ಈ ಬಗ್ಗೆ ಹೇಳಿಕೊಂಡಿದ್ದ ಸಂಸದೆ ‘ಪಕ್ಷದ ಹಲವು ಕಾರ್ಯಕ್ರಮಗಳಿಗೆ ಆಹ್ವಾನಿಸದ ಕಾರಣ ನಾನು ನೊಂದಿದ್ದೇನೆ. ಅನೇಕ ಕಾರ್ಯಕ್ರಮಗಳ ಬಗ್ಗೆ ನನಗೆ ಮಾಹಿತಿಯನ್ನೇ ನೀಡುತ್ತಿಲ್ಲ. ಹೀಗಿದ್ದಾಗ ನಾನು ಕಾರ್ಯಕ್ರಮಗಳಿಗೆ ಹೇಗೆ ಹೋಗಲಿ? ಇದು ನನಗೆ ತುಂಬಾ ಬೇಸರ ತಂದಿದೆ’ ಎಂದು ಬರೆದುಕೊಂಡಿದ್ದರು.
ಚಿಕನ್ ಪ್ರಿಯರಿಗೆ ಗುಡ್ ನ್ಯೂಸ್ : ಹಕ್ಕಿಜ್ವರದ ರಿಪೋರ್ಟ್ ನಿಂದ ಬಿಗ್ ರಿಲೀಫ್..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel