ಉಡುಪಿ | ಅಂಗಡಿ ಮಾಲೀಕನ ಮೇಲೆ ಯುವಕರಿಂದ ಹಲ್ಲೆ Udupi
ಉಡುಪಿ : ಗ್ರಾಮ ಪಂಚಾಯಿತಿ ಅಧ್ಯಕ್ಷನ ಮೇಲೆ ಯುವಕರು ಹಲ್ಲೆ ನಡೆಸಿರುವ ಘಟನೆ ಜಿಲ್ಲೆಯ ಮಜೂರು ಎಂಬಲ್ಲಿ ನಡೆದಿದೆ.
ಮಜೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಗಣೇಶ್ ಶೆಟ್ಟಿ ಮೇಲೆ ಯುವಕರು ನಿನ್ನೆ ರಾತ್ರಿ ಹಲ್ಲೆ ನಡೆಸಿದ್ದಾರೆ. ಚರಣ್ ಶೆಟ್ಟಿ, ಸ್ಟೀವನ್ ಹಲ್ಲೆ ಆರೋಪಿಗಳಾಗಿದ್ದಾರೆ.
ಕಳೆದ ತಡರಾತ್ರಿ ಬೈಕಿನಲ್ಲಿ ಬಂದಿದ್ದ ಚರಣ್ ಶೆಟ್ಟಿ, ಸ್ಟೀವನ್, ಗಣೇಶ್ ಮೇಲೆ ಹಲ್ಲೆ ನಡೆಸಿದ್ದಾರೆ.
ಅಲ್ಲದೆ ಬೈಕ್ ನಿಂದ ತಲ್ವಾರ್ ತೆಗೆದು ವಾರ್ನಿಂಗ್ ನೀಡಿದ್ದಾರೆ. ಈ ವೇಳೆ ಅಲ್ಲಿನ ಸ್ಥಳೀಯರು ಗಣೇಶ್ ಶೆಟ್ಟಿ ಬೆಂಬಲಕ್ಕೆ ಧಾವಿಸಿದ್ದಾರೆ.
ಇನ್ನು ಹಳೇ ದ್ವೇಷದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದು, ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.