ಯುಪಿಐ ವಹಿವಾಟು ವಿಫಲವಾಗಿ, ಕಡಿತಗೊಂಡ ಹಣ ಹಿಂತಿರುಗಿಸದಿದ್ದರೆ, ಬ್ಯಾಂಕ್ ನೀಡಲಿದೆ ಪರಿಹಾರ
ದೇಶದ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಬ್ಯಾಂಕುಗಳು ಹೊಸ ಹಣಕಾಸು ವರ್ಷದ ಮೊದಲ ದಿನ ಅಂದರೆ ಏಪ್ರಿಲ್ 1 ರಂದು ಮುಚ್ಚಲ್ಪಟ್ಟಿದ್ದವು. ಬ್ಯಾಂಕ್ ಮುಚ್ಚಿದ ಕಾರಣ, ಆನ್ಲೈನ್ ವಹಿವಾಟು ಹೆಚ್ಚಾಗಿ ನಡೆದಿದೆ. ಹಾಗಾಗಿ ಈ ಸಮಯದಲ್ಲಿ, ಗ್ರಾಹಕರು NEFT, IMPS, ಮತ್ತು UPI ಮೂಲಕ ಹಣವನ್ನು ವರ್ಗಾಯಿಸುವಲ್ಲಿ ತೊಂದರೆ ಎದುರಿಸಬೇಕಾಯಿತು. ಅನೇಕ ಬಾರಿ ಗ್ರಾಹಕರ ಯುಪಿಐ ವ್ಯವಹಾರ ವಿಫಲವಾಗಿದೆ.
ಆದರೆ ಯುಪಿಐ ವಹಿವಾಟು ವಿಫಲವಾದರೆ ಮತ್ತು ಖಾತೆಯಿಂದ ಕಡಿತಗೊಳಿಸಿದ ಹಣವನ್ನು ಸರಿಯಾದ ಸಮಯದಲ್ಲಿ ಹಿಂತಿರುಗಿಸದಿದ್ದರೆ, ಬ್ಯಾಂಕ್ ನಿಮಗೆ ಪ್ರತಿದಿನ 100 ರೂಪಾಯಿಗಳ ಪರಿಹಾರವನ್ನು ನೀಡುತ್ತದೆ.
ವಿಫಲವಾದ ವಹಿವಾಟಿಗೆ ಸಂಬಂಧಿಸಿದಂತೆ 2019 ರ ಸೆಪ್ಟೆಂಬರ್ನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಹೊಸ ಸುತ್ತೋಲೆ ಹೊರಡಿಸಿದೆ.
ಇದರ ಅಡಿಯಲ್ಲಿ, ಹಣವನ್ನು ಹಿಂತಿರುಗಿಸಲು ಸಮಯವನ್ನು ನಿಗದಿಪಡಿಸಲಾಗಿದೆ. ಈ ಸಮಯದೊಳಗೆ, ವಹಿವಾಟಿನ ಇತ್ಯರ್ಥ ಅಥವಾ ಹಿಂತಿರುಗಿಸದೆ ಇದ್ದರೆ ಬ್ಯಾಂಕ್ ಗ್ರಾಹಕರಿಗೆ ಪರಿಹಾರವನ್ನು ಪಾವತಿಸಬೇಕಾಗುತ್ತದೆ. ಸುತ್ತೋಲೆಯ ಪ್ರಕಾರ, ಗಡುವು ಮುಗಿದ ನಂತರ, ದಿನಕ್ಕೆ 100 ರೂ ದರದಲ್ಲಿ ಪರಿಹಾರವನ್ನು ನೀಡಬೇಕಾಗುತ್ತದೆ.
ನಿಮ್ಮ ಯುಪಿಐ ವಹಿವಾಟು ಹಣವನ್ನು ಹಿಂದಿರುಗಿಸದಿದ್ದರೆ, ನೀವು ಸೇವಾ ಪೂರೈಕೆದಾರರಿಗೆ ದೂರು ನೀಡಬಹುದು. ದೂರು ನೀಡಿದ್ದರೂ ಬ್ಯಾಂಕಿನಿಂದ ಯಾವುದೇ ಪ್ರತಿಕ್ರಿಯೆ ಇಲ್ಲದಿದ್ದರೆ, ನೀವು ಆರ್ಬಿಐನ 2019 ರ ಡಿಜಿಟಲ್ ವ್ಯವಹಾರಗಳ ಒಂಬುಡ್ಸ್ಮನ್ ಯೋಜನೆಯಡಿ ದೂರು ನೀಡಬಹುದು.
ಯುಪಿಐ ವಹಿವಾಟುಗಳು ಪ್ರತಿ ತಿಂಗಳು 19 ಪ್ರತಿಶತದಷ್ಟು ಹೆಚ್ಚಾಗುತ್ತವೆ ಮತ್ತು 2021 ರಲ್ಲಿ 5 ಲಕ್ಷ ಕೋಟಿ ರೂ ಹೆಚ್ಚಾಗಿದೆ. ದೇಶಾದ್ಯಂತ ಕ್ಯೂಆರ್ ಆಧಾರಿತ ಪಾವತಿಗಳ ಹೆಚ್ಚಳದಿಂದಾಗಿ ಯುಪಿಐ ವಹಿವಾಟು ಕಳೆದ ವರ್ಷದಲ್ಲಿ ಹೆಚ್ಚಾಗಿದೆ.
ಮಸ್ಕ್ ಮೆಲನ್ ಜ್ಯೂಸ್ ( ಕರಬೂಜ ಹಣ್ಣಿನ ಜ್ಯೂಸ್) https://t.co/YpaaM8RGBH
— Saaksha TV (@SaakshaTv) April 2, 2021
ಕಸೂರಿ ಮೇಥಿಯ ಆರೋಗ್ಯ ಪ್ರಯೋಜನಗಳು https://t.co/nPgU2tHyrz
— Saaksha TV (@SaakshaTv) April 2, 2021
ದಿನಕ್ಕೆ ಹಲವು ಬಾರಿ ತನ್ನ ಬಣ್ಣವನ್ನು ಬದಲಾಯಿಸುವ ಶಿವಲಿಂಗ#shivalinga https://t.co/oB5QJTgSMp
— Saaksha TV (@SaakshaTv) April 3, 2021
ಇನ್ನು ಮುಂದೆ ಈ ಪ್ರಮುಖ ಕೆಲಸಗಳಿಗೆ ಆಧಾರ್ ಕಾರ್ಡ್ನ ಅಗತ್ಯವಿಲ್ಲ ! https://t.co/CkNGTXImwd
— Saaksha TV (@SaakshaTv) April 2, 2021
ಕಬ್ಬಿನ ರಸವನ್ನು ಮನೆಮದ್ದಾಗಿ ಯಾವ ಕಾಯಿಲೆಗಳಿಗೆ ಬಳಸಬಹುದು ? ಮಾಹಿತಿ ಇಲ್ಲಿದೆhttps://t.co/lt5t3XcfTE
— Saaksha TV (@SaakshaTv) April 1, 2021
#UPItransaction #bankpay