`ದೇಶಕ್ಕಾಗಿ ಬೆಲೆ ಹೆಚ್ಚಾಗಲಿ ಅನ್ನೋರು ಲೀಟರ್ ಗೆ 1 ಸಾವಿರ ಕೊಡಲಿ’
ಚಾಮರಾಜನಗರ : ತೈಲ ಬೆಲೆ ಏರಿಕೆ ಸದ್ಯ ದೇಶದ ಟಾಕ್ ಆಫ್ ದಿ ಟೌನ್. ಯಾರ ಬಾಯಲ್ಲೂ ನೋಡಿದ್ರೂ ಬೆಲೆ ಏರಿಕೆಯದ್ದೇ ಮಾತು. ಈ ಪ್ರಮಾಣದ ಬೆಲೆ ಏರಿಕೆಯನ್ನ ಹಲವರು ಖಂಡಿಸುತ್ತಿದ್ದರೇ ಕೆಲವರು ಸರ್ಕಾರವನ್ನ ಸಮರ್ಥಿಸಿಕೊಳ್ಳುತ್ತಿದ್ದಾರೆ. ಅದರ ಮುಂದುವರಿದ ಭಾಗವಾಗಿ ಕಾಂಗ್ರೆಸ್ ಶಾಸಕ ಯು.ಟಿ.ಖಾದರ್ ಪೆಟ್ರೋಲ್, ಡಿಸೇಲ್ ದರ ಏರಿಕೆ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಅಲ್ಲದೇ ದೇಶದ ಅಭಿವೃದ್ಧಿಗಾಗಿ ಬೆಲೆ ಹೆಚ್ಚಾಗಲಿ, ಬೆಲೆ ಎಷ್ಟೇ ಆದ್ರೂ ಜನ ಹಣ ನೀಡಲಿ ಎನ್ನುವ ಭಕ್ತರಿಗೆ ಪ್ರತ್ಯೇಕ ಪೆಟ್ರೋಲ್ ಬಂಕ ನಿರ್ಮಿಸಿ ಒಂದು ಲೀಟರ್ ಗೆ 1 ಸಾವಿರ ರೂಪಾಯಿ ಕೊಡಲಿ ಎಂದು ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನ ಸಮರ್ಥಿಸಿಕೊಳ್ಳುತ್ತಿರುವ ಬೆಂಬಲಿಗರು ವಿರುದ್ಧ ವಾಗ್ದಾಳಿ ಹರಿಹಾಯ್ದಿದ್ದಾರೆ.
ಚಾಮರಾಜನಗರದಲ್ಲಿ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದಿನೇ ದಿನೆ ಪೆಟ್ರೋಲ್-ಡೀಸೆಲ್ ಬೆಲೆ ಹೆಚ್ಚಾಗುತ್ತಿದದ್ದು, ಶ್ರೀಸಾಮಾನ್ಯರು ದುಬಾರಿ ದೇಶದಲ್ಲಿ ಜೀವನ ಸಾಗಿಸಲು ಹೆಣಗಾಡುತ್ತಿದ್ದಾರೆ. ಹೀಗಿದ್ದರೂ ದೇಶದ ಅಭಿವೃದ್ಧಿಗಾಗಿ ಬೆಲೆ ಹೆಚ್ಚಾಗಲಿ, ಜನರು ಹಣ ಹೆಚ್ಚು ನೀಡಲಿ ಅಂತಾ ಭಕ್ತರು ಹೇಳುತ್ತಿದ್ದಾರೆ. ಅಂತಹವರಿಗೆ ಪ್ರತ್ಯೇಕ ಪೆಟ್ರೋಲ್ ಬಂಕ್ ನಿರ್ಮಿಸಿ 1 ಲೀಟರ್ಗೆ 1,000 ಸಾವಿರ ರೂ. ಕೊಡಲಿ ಎಂದು ಬಿಜೆಪಿ ಕಾರ್ಯಕರ್ತರ ವಿರುದ್ಧ ಹರಿಹಾಯ್ದರು.
ಇನ್ನು ತೈಲ ಬೆಲೆ ಏರಿಕೆಯಿಂದ ನಿತ್ಯ ಬಳಕೆ ವಸ್ತುಗಳ ಬೆಲೆಯೂ ಹೆಚ್ಚಾಗಿದೆ. ಬಿಜೆಪಿ ಸರ್ಕಾರಕ್ಕೆ ಕರುಣೆ, ಮಾನವೀಯತೆ ಇಲ್ಲ. ರಾಜ್ಯ ಹಾಗೂ ಕೇಂದ್ರ ಸರ್ಕಾರ ಎಂಜಿನ್ ಇಲ್ಲದ ಸರ್ಕಾರವಾಗಿದೆ ಎಂದು ಕೇಂದ್ರ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಖಾದರ್ ವಾಗ್ದಾಳಿ ನಡೆಸಿದರು.