BJP ನಾಯಕನ ರೆಸಾರ್ಟ್ ಧ್ವಂಸ: ಕಾಲುವೆಯಲ್ಲಿ ಶವ ಪತ್ತೆ…
ಉತ್ತರಖಂಡ ಬಿಜೆಪಿ ನಾಯಕ ಪುತ್ರನಿಂದ ಹತ್ಯೆಗೀಡಾಗಿದ್ದ ಮಹಿಳಾ ರೆಸಿಪ್ಶನಿಸ್ಟ್ ಅವರ ಶವವನ್ನ ಚೀಲಾ ಕಾಲುವೆಯಿಂದ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪ್ರಕರಣದ ಕುರಿತು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಟ್ವಿಟ್ ಮಡಿದ್ದು ಘಟನೆಯಿಂದ ನನಗೆ ತೀವ್ರ ನೋವಾಗಿದೆ ಎಂದು ತಿಳಿಸಿದ್ದಾರೆ.
ಸಂತ್ರಸ್ತ ಯುವತಿ ಪ್ರಕರಣದ ಪ್ರಮುಖ ಆರೋಪಿ ಪುಲ್ಕಿತ್ ಆರ್ಯ ಅವರ ರೆಸಾರ್ಟ್ ನಲ್ಲಿ ರೆಸಿಪ್ಶನಿಸ್ಟ್ ಆಗಿ ಕೆಲಸ ಮಾಡುತ್ತಿದ್ದರು. ಪುಲ್ಕಿತ್ ಆರ್ಯ, ರೆಸಾರ್ಟ್ ಮಾಲಿಕ ಹರಿದ್ವಾರದ ಬಿಜೆಪಿ ಮುಖಂಡ ವಿನೋದ್ ಆರ್ಯ ಅವರ ಪುತ್ರ. ಈ ರಾಜಕಾರಣಿ ಈ ಹಿಂದೆ ಉತ್ತರಾಖಂಡದ ಮತಿ ಕಲಾ ಮಂಡಳಿಯ ಅಧ್ಯಕ್ಷರಾಗಿದ್ದರು.
19 ರ ಹರೆಯದ ಯುವತಿಯ ಹತ್ಯೆಯ ಕುರಿತು ತ್ವರಿತ ತನಿಖೆ ನಡೆಸಲು ಡಿಐಜಿ ಪೊಲೀಸ್ ಪಿ ರೇಣುಕಾ ದೇವಿ ನೇತೃತ್ವದಲ್ಲಿ ಎಸ್ಐಟಿ ರಚಿಸಲಾಗಿದೆ. ಪೌರಿ ಜಿಲ್ಲೆಯ ಯಮಕೇಶ್ವರ ಬ್ಲಾಕ್ನಲ್ಲಿ ಬಿಜೆಪಿ ನಾಯಕನ ಮಗ ಅಕ್ರಮವಾಗಿ ನಿರ್ಮಿಸಿದ್ದ ರೆಸಾರ್ಟ್ ಅನ್ನು ಶುಕ್ರವಾರ ತಡರಾತ್ರಿ ಕೆಡವಲಾಗಿದೆ ಎಂದು ಧಾಮಿ ಹೇಳಿದ್ದಾರೆ.
ಪುಲ್ಕಿತ್ ಆರ್ಯ, ರೆಸಾರ್ಟ್ ಮ್ಯಾನೇಜರ್ ಸೌರಭ್ ಭಾಸ್ಕರ್ ಮತ್ತು ಸಹಾಯಕ ಮ್ಯಾನೇಜರ್ ಅಂಕಿತ್ ಗುಪ್ತಾ ಅವರನ್ನು ಶುಕ್ರವಾರ ಬಂಧಿಸಲಾಗಿದ್ದು, ಬಾಲಕಿಯನ್ನು ಕೊಂದು ಆಕೆಯ ದೇಹವನ್ನು ಚೀಲಾ ಕಾಲುವೆಗೆ ಎಸೆದಿರುವುದಾಗಿ ಅವರು ಒಪ್ಪಿಕೊಂಡಿದ್ದಾರೆ.
ಆರಂಭದಲ್ಲಿ, ಆರೋಪಿಗಳು ಪೊಲೀಸರನ್ನು ದಾರಿತಪ್ಪಿಸಲು ಪ್ರಯತ್ನಿಸಿದರು, ಆದರೆ ಕಠಿಣ ವಿಚಾರಣೆ ನಡೆಸಿದಾಗ ಅಪರಾಧವನ್ನು ಒಪ್ಪಿಕೊಂಡಿದ್ದಾರೆ ಎಂದು ಪೌರಿ ಎಎಸ್ಪಿ ಶೇಖರ್ ಚಂದ್ರ ಸುಯಲ್ ಶುಕ್ರವಾರ ಹೇಳಿದ್ದಾರೆ.
ಯುವತಿ ಶವವಾಗಿ ಪತ್ತೆಯಾಗುವ ಮೊದಲು, ಸೋಮವಾರ ಬೆಳಿಗ್ಗೆ ತನ್ನ ಕೋಣೆಯಲ್ಲಿ ಕಾಣದ ಹಿನ್ನೆಲೆಯಲ್ಲಿ ಆಕೆಯ ಪೋಷಕರು ಕಂದಾಯ ಪೊಲೀಸ್ ಹೊರ ಠಾಣೆಯಲ್ಲಿ ಹುಡುಗಿ ಕಾಣೆಯಾಗಿದ್ದಾರೆ ಎಂದು ಪ್ರಕರಣ ದಾಖಲಿಸಿದ್ದಾರೆ.