ವ್ಯಾಕ್ಸಿನೇಷನ್ ಬಿಗ್ ಫ್ರಾಡ್, ಶೀಘ್ರದಲ್ಲೇ ಸುದ್ದಿಗೋಷ್ಠಿ : ಡಿಕೆಶಿ ಹೊಸ ಬಾಂಬ್
ಬೆಂಗಳೂರು : ಕೊರೊನಾ ಲಸಿಕೆ ನೀಡಿಕೆ ಒಂದು ದೊಡ್ಡ ಬೋಗಸ್, ಎಲ್ಲಾ ದಾಖಲೆಗಳು ನನ್ನ ಬಳಿ ಇವೆ. ಅದಕ್ಕೆ ಪ್ರತ್ಯೇಕ ಸುದ್ದಿಗೋಷ್ಠಿ ನಡೆಸುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೊಸ ಬಾಂಬ್ ಸಿಡಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಅನ್ ಲಾಕ್ ಬಗ್ಗೆ ಪ್ರತಿಕ್ರಿಯೆ ನೀಡಿ, ಅನ್ ಲಾಕ್ ವಿಚಾರದಲ್ಲಿ ಸರ್ಕಾರ ಏನು ತೀರ್ಮಾನ ಕೈಗೊಳ್ಳುತ್ತೊ ಕೈ ಗೊಳ್ಳಲಿ. ಏನೇ ಆದರು ಜನರಿಗೆ ಅನುಕೂಲವಾಗುವಂತೆ ಮಾಡಲಿ ಎಂದು ಹೇಳಿದರು.
ಇನ್ನು ಲಸಿಕೆ ನೀಡಿಕೆ ಒಂದು ದೊಡ್ಡ ಬೋಗಸ್ ಎಲ್ಲಾ ದಾಖಲೆಗಳು ಇವೆ ಅದಕ್ಕೆ ಪ್ರತ್ಯೇಕ ಸುದ್ದಿಗೋಷ್ಠಿ ನಡೆಸುತ್ತೇನೆ. ಏನು ಮಂತ್ರಿ ಹೇಳ್ತಿದ್ದಾರೆ ಅದೆಲ್ಲ ಬರೀ ಸುಳ್ಳು. ನನ್ನ ಬಳಿ ಮಾಹಿತಿ ಇದೆ ಅದರ ಬಗ್ಗೆ ಸದ್ಯದಲ್ಲೇ ಸುದ್ದಿಗೋಷ್ಠಿ ಮಾಡುತ್ತೇನೆ ಎಂದು ತಿಳಿಸಿದರು.
ಪಕ್ಷ ಬಿಟ್ಟವರನ್ನು ಪಕ್ಷಕ್ಕೆ ವಾಪಸ್ ಕರೆತರುವ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿ, ನಾನು ಪಕ್ಷ ಬಿಟ್ಟುಹೋದ ಆ 17 ಜನಕ್ಕೆ ಅಂತ ಹೇಳಿಲ್ಲ. ಯಾರೆಲ್ಲಾ ನಮ್ಮ ಪಕ್ಷಕ್ಕೆ ಬರಬೇಕು ಅಂತಿದ್ದಾರೆ ಅವರಿಗೆ ಹೇಳಿದ್ದೇನೆ.
ಯಾರಿಗೆ ನಮ್ಮ ಲೀಡರ್ ಶಿಪ್, ನಮ್ಮ ಸಿದ್ಧಾಂತದ ಮತ್ತು ಪಕ್ಷದ ಬಗ್ಗೆ ಒಪ್ಪಿಗೆ ಇದೆಯೋ ಅವರೆಲ್ಲ ಅರ್ಜಿ ಹಾಕಬಹುದು. ಮೊದಲು ಅರ್ಜಿ ಹಾಕಲಿ ಬಳಿಕ ನೋಡೋಣ.
ಯಾರಬೇಕಾದ್ರು ಅರ್ಜಿ ಹಾಕ್ಲಿ. ಯಾರು ಅರ್ಜಿ ಹಾಕಿದ್ದಾರೆ ಅನ್ನೋದನ್ನು ಈಗ ತಿಳಿಸುವ ಅವಶ್ಯಕತೆ ಇಲ್ಲ. ಯಾರು ಬೇಕಾದರೂ ಅರ್ಜಿ ಹಾಕಬಹುದು ಎಂದಿದ್ದಾರೆ.
ಇದೇ ವೇಳೆ ಎಂಟಿಬಿ ನಾಗರಾಜ್ ಗೆ ಟಿಕೆಟ್ ಕೊಡಿಸಿದ್ದು ನಾನು ಎಂದ ಡಿಕೆಶಿವಕುಮಾರ್, ಡಿಕೆ ಶಿವಕುಮಾರ್ ಎದೆಯಲ್ಲಿ ಇದ್ದಾರೆ ಅಂತ ತೋರಿಸಿದೋವರು ಇದ್ದಾರೆ.
ಕಾಂಗ್ರೆಸ್ ಪಕ್ಷದ ಟಿಕೆಟ್ ಕೊಡಿಸೋದಕ್ಕೆ ನಾನು ಒಬ್ಬ ಕಾರಣ ನನ್ನಿಂದ ಗೆದ್ದರು ಅಂತ ಹೇಳೋದಿಲ್ಲ ಅದ್ರೆ ಟಿಕೆಟ್ ಕೊಡಿಸಿದ್ದು ನಾನೇ. ಅಮೇಲೆ ಅವರು ಗೆದ್ದರು ಆಗ ನನ್ನ ಎದೆಯಲ್ಲಿ ಕಾಂಗ್ರೆಸ್ ಪಕ್ಷದ ಇದೆ ಅಂತಿದ್ದರು. ಆಮೇಲೆ ಪಾರ್ಟಿ ಬಿಟ್ಟು ಹೋದರು ಏನ್ ಮಾಡೋಕೆ ಆಗುತ್ತೆ ಎಂದು ಪ್ರಶ್ನಿಸಿದರು.