ರಾಜ್ಯದಲ್ಲಿ ವ್ಯಾಕ್ಸಿನ್ ಕೊರತೆಗೆ ವಿಪಕ್ಷಗಳೇ ಕಾರಣ : ಸಂಸದ ಮುನಿಸ್ವಾಮಿ
ಕೋಲಾರ : ರಾಜ್ಯದಲ್ಲಿ ಕೊರೊನಾ ವ್ಯಾಕ್ಸಿನ್ ಕೊರತೆ ಹಿನ್ನೆಲೆಯಲ್ಲಿ ಹೈಕೋರ್ಟ್ ರಾಜ್ಯ ಬಿಜೆಪಿ ಸರ್ಕಾರಕ್ಕೆ ಛೀಮಾರಿ ಹಾಕಿದೆ. ಈ ಮಧ್ಯೆ ವ್ಯಾಕ್ಸಿನ್ ಕೊರತೆಗೆ ವಿಪಕ್ಷಗಳೇ ಕಾರಣ ಎಂದು ರಾಜ್ಯ ಸರ್ಕಾರವನ್ನು ಬಿಜೆಪಿ ಸಂಸದ ಮುನಿಸ್ವಾಮಿ ಸಮರ್ಥಿಸಿಕೊಂಡಿದ್ದಾರೆ.
ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ವ್ಯಾಕ್ಸಿನ್ ಕೊರತೆ ಇದೆ. ಇದಕ್ಕೆ ವಿಪಕ್ಷಗಳೇ ಕಾರಣ. ಆವತ್ತು ವ್ಯಾಕ್ಸಿನ್ ತಗೊಳ್ಳಿ ಅಂದ್ರೆ, ವಿಪಕ್ಷಗಳು ಇದು ಬಿಜೆಪಿ ವ್ಯಾಕ್ಸಿನ್ ಅಂದ್ರು.
ಕೆಲ ಸಮುದಾಯಕ್ಕೆ ಭಯ ಹುಟ್ಟಿಸಿದರು. ಹೀಗಾಗಿ ವ್ಯಾಕ್ಸಿನ್ ನ್ನು ಹೊರ ದೇಶಗಳಿಗೆ ಕಳುಹಿಸಲಾಯಿತು ಎಂದು ಸರ್ಕಾರವನ್ನು ಸಮರ್ಥಿಸಿಕೊಂಡರು.
ಇದೇ ವೇಳೆ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ ಅವರು, ಸಾವಿನ ಮನೆಯಲ್ಲಿ ರಾಜಕೀಯ ಮಾಡೋದು ಬಿಡಿ. ಸಿಎಂ ಆಗೋಕೆ ಬಟ್ಟೆ ಹೊಲಿಸಿಕೊಂಡು ಇರೋರು ರಾಜಕೀಯ ಮಾಡಬೇಡಿ.
ಸರ್ಕಾರಕ್ಕೆ ಸಹಕಾರ ಕೊಟ್ಟು ವಿಪಕ್ಷಗಳು ಕೆಲಸ ಮಾಡಬೇಕು. ರಾಜಕೀಯ ಬಿಟ್ಟು ಸಹಕಾರ ಕೊಡಿ ಎಂದರು.
ಇನ್ನು ಆಕ್ಸಿಜನ್ ಸಂಸದರು ಯಾಕೆ ಮೌನವಾಗಿದ್ದೀರಾ.? ಕೇಂದ್ರದ ಬಳಿ ಯಾಕೆ ಕೇಳುತ್ತಿಲ್ಲ, ಮೂರೂವರೆ ತಿಂಗಳಿನಿಂದ ಏನು ಮಾಡ್ತಿದ್ದೀರಾ? ಎಂದು ಮಾಧ್ಯಮದವರು ಪ್ರಶ್ನಿಸುತ್ತಿದ್ದಂತೆ, ಸಂಸದ ಮುನಿಸ್ವಾಮಿ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಅಲ್ಲಿಂದ ಕಾಲ್ಕಿತ್ತರು.